ಉತ್ತರ ಕರ್ನಾಟಕ ಲೇಖಕಿಯಿಂದ ವಿವಿಧ ಸಾಹಿತ್ಯ ಪ್ರಶಸ್ತಿ ಪ್ರಕಟ

KannadaprabhaNewsNetwork |  
Published : May 17, 2025, 01:40 AM ISTUpdated : May 17, 2025, 01:41 AM IST
ಫೋಟೋಗಳ | Kannada Prabha

ಸಾರಾಂಶ

ಪ್ರತಿವರ್ಷ ಕೊಡಮಾಡುವ ಸಾಹಿತ್ಯ ಸರಸ್ವತಿ, ಶಾಂತಾದೇವಿ ಕಥಾ ಹಾಗೂ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗಳನ್ನು ಉತ್ತರ ಕರ್ನಾಟಕ ಲೇಖಕಿಯರ ಸಂಘವು ಪ್ರಕಟಿಸಿದೆ.

ಧಾರವಾಡ: ಪ್ರತಿವರ್ಷ ಕೊಡಮಾಡುವ ಸಾಹಿತ್ಯ ಸರಸ್ವತಿ, ಶಾಂತಾದೇವಿ ಕಥಾ ಹಾಗೂ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗಳನ್ನು ಉತ್ತರ ಕರ್ನಾಟಕ ಲೇಖಕಿಯರ ಸಂಘವು ಪ್ರಕಟಿಸಿದೆ.

ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ 2023- ಸಿ.ಎನ್. ಮುಕ್ತಾ, 2024- ಫಾತಿಮಾ ರಲಿಯಾ ಅವರಿಗೆ ನೀಡಲಾಗುತ್ತಿದೆ. ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿ 2023- ಡಾ. ಎಚ್.ಎಲ್.‌ ಪುಷ್ಪಾ, 2024-ಸ್ಮಿತಾ ಅಮ್ರತರಾಜ್‌ ಅವರಿಗೆ ನೀಡಲಾಗುತ್ತಿದೆ. ಸಾಹಿತ್ಯ ಸರಸ್ವತಿ 2023- ಡಾ. ವೈ.ಸಿ. ಭಾನುಮತಿ 2024- ಬಿ.ಕೆ. ಶ್ರೀಮತಿರಾವ್ ಅವರಿಗೆ ನೀಡಲಾಗುತ್ತಿದೆ.

ಬರುವ ಜೂನ್‌ ತಿಂಗಳಿನಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದತ್ತಿ ದಾನಿಗಳಾದ ಮತ್ತು ಸಾಹಿತ್ಯ ಸರಸ್ವತಿ ಆಯ್ಕೆ ಸಮಿತಿಯ ಸದಸ್ಯರಾಗಿ ಡಾ. ವೀರಣ್ಣ ರಾಜೂರ, ಡಾ. ವೀಣಾ ಶಾಂತೇಶ್ವರ, ಡಾ. ಶಾಂತಾ ಇಮ್ರಾಪೂರ, ಹ.ವೆಂ. ಕಾಖಂಡಕಿ, ಸವಿತಾ ನಾಗಭೂಷಣ ಮತ್ತು ಡಾ. ಹೇಮಾ ಪಟ್ಟಣಶೆಟ್ಟಿ ಕಾರ್ಯ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ