ಹಿರೇಕೇರೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪೌರ ಕಾರ್ಮಿಕರ ಸಂಘದ ವತಿಯಿಂದ ಇಲ್ಲಿಯ ಪಪಂ ಕಾರ್ಯಾಲಯದ ಎದುರು ಮೂರು ದಿವಸಗಳಿಂದ ನಡೆಸುತ್ತಿರುವ ಮುಷ್ಕರ ಗುರುವಾರವೂ ಮುಂದುವರಿದಿದೆ. ಹಲವು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಈ ವೇಳೆ ಡಿಎಸ್ಎಸ್ ಮುಖಂಡ ಮಾದೇವಪ್ಪ ಮಾಳಮ್ಮನವರ ಮುಷ್ಕರದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಪೌರ ಕಾರ್ಮಿಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಭರಮಪ್ಪ ಕಡೇಮನಿ, ಉಪಾಧ್ಯಕ್ಷ ನಾಗರಾಜ ತಿಪ್ಪಣ್ಣನವರ, ಡಿಎಸ್ಎಸ್ ಮುಖಂಡ ಮಾದೇವಪ್ಪ ಮಾಳಮ್ಮನವರ, ಶಿವು ಬಾಳಂಬೀಡ, ಮಮತಾ ಪಾಟೀಲ್, ನಾಗರಾಜ ಮಾಳಿ, ರಾಜೇಶ್ವರಿ ಹರಪ್ಪನಹಳ್ಳಿ, ಪ್ರವೀಣ ಮುಗಳಹಳ್ಳಿ, ರವೀಂದ್ರ ತಳವಾರ, ರವಿ ಬಾಳಂಬೀಡ, ಕುಮಾರ ಮುದೇನೂರು, ಮಂಜು ವಡ್ಡರ್, ಲೋಕಪ್ಪ ಎ.ಕೆ., ಲೋಹಿತ್ ತಿರಕಪ್ಪನವರ್, ಮಂಜು ಓಲೇಕಾರ್, ಕಿರಣ ಹರಿಜನ, ಪರಶುರಾಮ ಮುಗಳಹಳ್ಳಿ, ಬಸವರಾಜ ಬಸಣನವರ್, ದುರಗಪ್ಪ ತಿರಕಪ್ಪನವರ್, ಬಸವರಾಜ ಎ.ಕೆ. ಹಾಗೂ ಪೌರ ಕಾರ್ಮಿಕರು ಇದ್ದರು.3ನೇ ದಿನಕ್ಕೆ ಕಾಲಿಟ್ಟ ಪೌರ ನೌಕರರ ಮುಷ್ಕರರಾಣಿಬೆನ್ನೂರು: ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ನಗರಸಭೆ ಪೌರ ನೌಕರರು ನಗರಸಭೆ ಕಚೇರಿ ಮುಂಭಾಗದ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.ಕರ್ನಾಟಕ ನಾಗರೀಕ ಸೇವಾ ನಿಯಮ ಅಧಿನಿಯಮ 1978ನ್ನು ಪೌರ ಸೇವಾ ನೌಕರರಿಗೆ ಅನ್ವಯಿಸಬೇಕು ಹಾಗೂ ಪಂಚಾಯತ್ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ರೀತಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಪರಿಗಣಿಸಬೇಕು.
ಸ್ಥಳೀಯ ಸಂಘಟನೆಯ ಅಧ್ಯಕ್ಷ ಏಳುಕೋಟೆಪ್ಪ ಗೋಣಿಬಸಮ್ಮನವರ, ಕಾರ್ಯದರ್ಶಿ ಮಾಧವ ಸಾತೇನಹಳ್ಳಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಮರಿಗೌಡ್ರ, ಪ್ರಭು ಬಾಲೆಹೊಸೂರ, ಎಂ.ಆರ್. ಮಂಜುನಾಥ, ಗಣೇಶ ಪಾಸಿಗಾರ, ವಾಣಿಶ್ರೀ, ನಿಂಗಪ್ಪ ಮಧುಕರಿಯಪ್ಪನವರ, ದಿಳ್ಳೆಪ್ಪ ಅಂಕಸಾಪುರ, ನಿಖಿತಾ ಮೆಣಸಿನಹಾಳ, ಬಿ. ವಸಂತ, ಎಸ್.ಪಿ. ದೊಡ್ಡಮನಿ, ಎನ್.ಬಿ. ಕೋರಿ ಮತ್ತಿತರರಿದ್ದರು.