ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಾಟ ಆರಂಭ

KannadaprabhaNewsNetwork |  
Published : Jun 28, 2024, 12:50 AM IST
27 ಬ್ಯಾಕೋಡು 01 ಶರಾವತಿ ಹಿನ್ನೀರಿನಲ್ಲಿರುವ ಸಿಗಂದೂರು ಲಾಂಚ್ | Kannada Prabha

ಸಾರಾಂಶ

ಶರಾವತಿ ಹಿನ್ನೀರಿನ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಇದೀಗ ವಾಹನ ಸಂಚಾರ, ಸಾಗಾಟಕ್ಕೆ ಗುರುವಾರದಿಂದ ಅವಕಾಶ ದೊರೆತಿದೆ.

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಶರಾವತಿ ಹಿನ್ನೀರಿನ ಹೊಳೆಬಾಗಿಲು-ಅಂಬಾರಗೋಡ್ಲು ಮಾರ್ಗದ ಸಿಗಂದೂರು ಲಾಂಚಿನಲ್ಲಿ ವಾಹನ ಸಾಗಾಟಕ್ಕೆ ಗುರುವಾರದಿಂದ ಅವಕಾಶ ಕಲ್ಪಿಸಲಾಗಿದೆ.

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು ಶರಾವತಿ ಹಿನ್ನೀರಿನಲ್ಲಿ ಸಹ ನೀರಿನ ಕೊರತೆಯಿಂದ ಲಾಂಚ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಜೂನ್ 5 ರಿಂದ ಸಿಗಂದೂರು ಲಾಂಚಿನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ದ್ವೀಪದ ತುಮರಿ, ಬ್ಯಾಕೋಡು, ಕಟ್ಟಿನಕಾರು, ಹೊಸಕೊಪ್ಪ ಭಾಗದ ಸುಮಾರು 30ಸಾವಿರ ಮಂದಿಗೆ ಅಸ್ಪತ್ರೆಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಗರಕ್ಕೆ ತೆರಳಲು ದಿನನಿತ್ಯ ಅನಾನುಕೂಲ ಉಂಟಾಗಿತ್ತು.

ಶರಾವತಿ ಕಣಿವೆಯಲ್ಲಿ ಉತ್ತಮ ಮಳೆ:

ಕಳೆದೊಂದು ವಾರದಿಂದ ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ 4 ದಿನಗಳಲ್ಲಿ 3 ಅಡಿ ನೀರು ಏರಿಕೆಯಾಗಿದ್ದು. ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ ಹೀಗಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಲಾಂಚ್ ಸಿಬ್ಬಂದಿ ದಾಮೋದರ್ ಮಾಹಿತಿ ನೀಡಿದ್ದಾರೆ.

ಸದ್ಯ ವಾಹನ ಸಂಚಾರ ಪುನರಾರಂಭದಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲದಿದ್ದರೆ ನಿಟ್ಟೂರು, ಹೊಸನಗರ ಮಾರ್ಗದ ಮೂಲಕ 90 ಕಿಲೋ ಮೀಟರ್ ಕ್ರಮಿಸಿ ಸಾಗರ ತಲುಪುವ ಪರಿಸ್ಥಿತಿ ಇತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ