ದೇವಾಪುರಕ್ಕೆ ವೇಣುಗೋಪಾಲ ನಾಯಕ ಭೇಟಿ

KannadaprabhaNewsNetwork |  
Published : May 24, 2024, 12:52 AM IST
ಬಿರುಗಾಳಿ ಮಳೆಗೆ ಬುಧವಾರ ಸಂಜೆ ಮನೆಗಳು ತಗಡು ಹಾರಿ ಅಪಾರ ಹಾನಿಯಾದ ಸುರಪುರ ತಾಲೂಕಿನ ದೇವಾಪುರ ಗ್ರಾಮಕ್ಕೆ ಗುರುವಾರ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಸುರಪುರ ತಾಲೂಕಿನ ದೇವಾಪುರ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರಬಿರುಗಾಳಿ ಮಳೆಗೆ ಬುಧವಾರ ಸಂಜೆ ಮನೆಗಳು ತಗಡು ಹಾರಿ ಅಪಾರ ಹಾನಿಯಾದ ದೇವಾಪುರ ಗ್ರಾಮಕ್ಕೆ ಗುರುವಾರ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ಬಡವರ ಮನೆಗಳ ತಗಡುಗಳು ಹಾರಿ ಹೋಗಿರುವುದು ನೋವು ತಂದಿದೆ. ಗ್ರಾಮಸ್ಥರಿಗೆ ಪ್ರಕೃತಿ ವಿಕೋಪದಿಂದ ಅಪಾರ ಹಾನಿ ಆಗಿದೆ. ಆದ್ದರಿಂದ ಜನರಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಹಾನಿ ಆಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಘಟನೆ ವರದಿ ಪಡೆದು ಸರಕಾರಕ್ಕೆ ಒಪ್ಪಿಸಿ ಪರಿಹಾರ ಕೊಡಿಸಲು ಯತ್ನಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ನಂದನಗೌಡ ಎಚ್. ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಎಚ್. ಪಾಟೀಲ್, ಮಲ್ಲಣ್ಣ ಸಾಹುಕಾರ ಮುಧೋಳ, ಸಂತೋಷ ಬಾಕ್ಲಿ, ನಗರ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಚನ್ನಪ್ಪಗೌಡ, ಗ್ರಾಪಂ ಸದಸ್ಯ ಎಂ.ಡಿ. ಯೂಸೂಬ್, ದೇವು ಬಾಕ್ಲಿ, ಮಹಾದೇವ, ಯಂಕಪ್ಪ, ವೆಂಕಟೇಶ, ಮೊಹನುದ್ದೀನ್ ಚೌಧರಿ, ಅಮರೇಶ ಎನ್. ದೇಸಾಯಿ, ದೇವೇಂದ್ರ ಗುಪ್ಪಿ, ಬಂದೇನವಾಜ್ ಕಲಿಕೇರಿ, ವೀರೇಶ ಮುಷ್ಠಳ್ಳಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ
ಜನಾಶೀರ್ವಾದದಿಂದ ದೀರ್ಘಾವಧಿ ಸಿಎಂ : ಸಿದ್ದು