ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಗೆಲವು: ಡಾ.ಮೋಹನ್‌ ಆಳ್ವ

KannadaprabhaNewsNetwork |  
Published : Sep 20, 2026, 04:00 AM IST
ಡಾ. ಮೋಹನ ಆಳ್ವ | Kannada Prabha

ಸಾರಾಂಶ

ತುಳುಭಾಷೆಗೆ ರಾಜ್ಯದ ಅಧಿಕೃತ ಮಾನ್ಯತೆ ಸಿಕ್ಕಿರುವುದು ಸಂತಸ ತಂದಿದೆ. ಇದು ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಹಾಗೂ ನ್ಯಾಯಯುತ ಗೆಲುವು ಎಂದು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ಸಂತಸ ವ್ಯಕ್ತಪಡಿಸಿದ್ದಾರೆ.

ಮಂಗಳೂರು : ತುಳುಭಾಷೆಗೆ ರಾಜ್ಯದ ಅಧಿಕೃತ ಮಾನ್ಯತೆ ಸಿಕ್ಕಿರುವುದು ಸಂತಸ ತಂದಿದೆ. ಇದು ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಹಾಗೂ ನ್ಯಾಯಯುತ ಗೆಲುವು ಎಂದು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ಸಂತಸ ವ್ಯಕ್ತಪಡಿಸಿದ್ದಾರೆ.ಸಂಪುಟ ನಿರ್ಧಾರ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಇದನ್ನು ಅನ್ಯ ಭಾಷೆಯೊಂದಿಗೆ ಹೋಲಿಕೆ ಮಾಡುವ ವಿಚಾರ ಅಲ್ಲ. ಪಂಚ ದ್ರಾವಿಡ ಭಾಷೆಗಳಲ್ಲಿ ನಾಲ್ಕು ಭಾಷೆಗಳು ನಾಲ್ಕು ರಾಜ್ಯದ ರಾಜ್ಯ ಭಾಷೆಯಾಗಿದೆ. ತುಳು ಭಾಷೆ ಮಾತ್ರ ಉಳಿದಿತ್ತು, ಇದೀಗ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದು ಸಂತಷದ ವಿಚಾರ ಎಂದಿದ್ದಾರೆ.

ಹಿಂದು, ಮುಸ್ಲಿಂ, ಕ್ರೈಸ್ತ ಮತ್ತಿತರರು ಆಡುಭಾಷೆಯಾಗಿ, ವ್ಯವಹಾರಿಕ ಭಾಷೆಯಾಗಿ, ಸಂಬಂಧಿತ ಭಾಷೆಯಾಗಿ ಸುಮಾರು 1 ಕೊಟಿ ಮಂದಿ ತುಳು ಭಾಷೆ ಮಾತನಾಡುತ್ತಿದ್ದಾರೆ. ಇಂತಹ ತುಳು ಭಾಷೆ ಅಧಿಕೃತ ಭಾಷೆಯಾಗಿ ಘೋಷಣೆಯಾಗಿ ಮುಂದೆ ವಿಧಾನ ಸಭೆ, ವಿಧಾನ ಪರಿಷತ್‌, ಸರ್ಕಾರಿ ಕಚೇರಿಗಳಲ್ಲಿ ಇದಕ್ಕೊಂದು ಸ್ಥಾನಮಾನ ಸಿಗಲಿದೆ. ಈ ಮೂಲಕ ಮುಂದೆ ಕೇಂದ್ರದಲ್ಲಿ ತುಳು 8ನೇ ಪರಿಚ್ಚೇದಕ್ಕೆ ಹೋಗುವ ಸಂದರ್ಭದಲ್ಲಿ ಇದು ದೊಡ್ಡ ಶಕ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುನಿಲ್‌ ಕುಮಾರ್‌ ಕಾರ್ಕಳ ಅವರು ಈ ಪ್ರಕ್ರಿಯೆ ಆರಂಭಿಸಿದ್ದರು, ಈಗಿನ ಸರ್ಕಾರದ ಮುಖ್ಯಮಂತ್ರಿಗಳು, ಸಚಿವರು, ಯು.ಟಿ.ಖಾದರ್‌, ಅಶೋಕ್‌ ರೈ, ಜಿಲ್ಲೆಯ ಶಾಸಕರು ಇದಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ನಾನು ಈ ಸಮಿತಿಯಲ್ಲಿದ್ದು, ಅಧ್ಯಕ್ಷನಾಗಿದ್ದು ವರದಿ ಸಲ್ಲಿಸಿದ್ದರೂ, ಇದರ ತೇರು ಎಳೆಯುವಲ್ಲಿ ದೊಡ್ಡ ದೊಡ್ಡ ದಿಗ್ಗಜರು, ತುಳು ಅಕಾಡೆಮಿ, ಹಲವು ಹಿರಿಯರು, ಹೋರಾಟಗಾರರು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾ ಸೇವಾ ಆಂದೋಲನದಲ್ಲಿ ಅವ್ಯವಸ್ಥೆ
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಂಗನವಾಡಿಗಳ ಕೊಡುಗೆ ಅಪಾರ: ಯಶವಂತರಾಯಗೌಡ