ಕನ್ನಡಪ್ರಭ ವಾರ್ತೆ ಮೈಸೂರು
ಎನ್ಐಇ ವಜ್ರಮಹೋತ್ಸವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ತಂಡವು 3-1 ಅಂತರದಿಂದ ಮಂಡ್ಯ ಪಿ.ಇ.ಎಸ್.ಸಿ.ಇ ಕಾಲೇಜು ತಂಡವನ್ನು ಮಣಿಸಿತು.
ಮಹಿಳೆಯರ ವಿಭಾಗದಲ್ಲಿ ಜಿಎಸ್ಎಸ್ಎಸ್ಐಇಟಿಬ್ಲ್ಯೂ ತಂಡವು ವಿದ್ಯಾವರ್ಧ ಎಂಜಿನಿಯರಿಂಗ್ ಕಾಲೇಜು ತಂಡವನ್ನು 2-0 ಅಂತರದಲ್ಲಿ ಪರಾಭವಗೊಳಿಸಿತು.ರಾಷ್ಟ್ರೀಯ ಬ್ಯಾಡ್ಮಂಟನ್ಆಟಗಾರ ಡಾ. ಹರ್ಷ ವಿಮನ್ ಚಾಲನೆ ನೀಡಿದರು. ಎನ್ಐಇಯ ಶೈಕ್ಷಣಿಕ ವಿಭಾಗದ ಡೀನ್ಡಾ.ಸಿ. ವಿದ್ಯಾರಾಜ್, ವಿಟಿಯು ಮೈಸೂರು ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಂ.ಪಿ. ಮುರಳೀಧರ ಮೊದಲಾದವರು ಇದ್ದರು.