ಗ್ರಾಮಸ್ಥರಿಂದ ಶ್ರಮದಾನ: ಗಾಂಧಿ ಗ್ರಾಮದ ರಸ್ತೆ ದುರಸ್ತಿ

KannadaprabhaNewsNetwork |  
Published : Sep 13, 2025, 02:04 AM IST
ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಮುಖ್ಯ ರಸ್ತೆಯಿಂದ ಗಾಂಧಿ ಗ್ರಾಮದವರೆಗೆ 3 ಕಿ.ಮೀ.ರಸ್ತೆಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ಥಿ ಮಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಮುಖ್ಯರಸ್ತೆಯಿಂದ ಗಾಂಧಿ ಗ್ರಾಮದ 3 ಕಿ.ಮೀ. ಸಂಪರ್ಕ ರಸ್ತೆ ಬಾರೀ ಮಳೆ ಯಿಂದ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಸ್ಥರು ಸೇರಿ ಶುಕ್ರವಾರ ಶ್ರಮದಾನದ ಮೂಲಕ ಗುಂಡಿಗಳಿಗೆ ಮರಳು ಮಿಶ್ರಿತ ಕಲ್ಲು, ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದರು.

ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಮುಖ್ಯರಸ್ತೆಯಿಂದ ಗಾಂಧಿ ಗ್ರಾಮದ 3 ಕಿ.ಮೀ. ಸಂಪರ್ಕ ರಸ್ತೆ ಬಾರೀ ಮಳೆ ಯಿಂದ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಸ್ಥರು ಸೇರಿ ಶುಕ್ರವಾರ ಶ್ರಮದಾನದ ಮೂಲಕ ಗುಂಡಿಗಳಿಗೆ ಮರಳು ಮಿಶ್ರಿತ ಕಲ್ಲು, ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದರು.

ಶ್ರಮದಾನದಲ್ಲಿ ರೈತರ 7 ಟ್ರಾಕ್ಟರ್ ಬಳಸಲಾಗಿತ್ತು. 3 ಕಿ.ಮೀ. ರಸ್ತೆ ದುರಸ್ತಿ ಮಾಡಿದರು. ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಕಡಹಿನಬೈಲು ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂಧಿ ಗ್ರಾಮ ನಾಗರಾಜ, ಮಾಜಿ ಉಪಾಧ್ಯಕ್ಷ ಡಿ.ಜಿ.ಸತೀಶ, ಗ್ರಾಪಂ ಸದಸ್ಯ ರವೀಂದ್ರ, ಗ್ರಾಮದ ಮುಖಂಡರಾದ ಸಂತೋಷ್, ಕೌಸಿಕ್ , ಬಾಳೆಮನೆ ಅಜಂತ, ಬಸೀರ್, ಕೌಶಿಕ್, ರಾಜೇಶ್,ದೇವರಾಜ್, ಅವಿನಾಶ್, ಅಷ್ಪಕ್, ಎ.ಬಿ.ವಿಜಯ, ರಜಿ, ಅಜಿಲೇಶ್ , ಪಿ.ಸತೀಶ್ ಸೇರಿದಂತೆ ಆಟೋ ಚಾಲಕರು, ಗ್ರಾಮಸ್ಥರು ಪಾಲ್ಗೊಗೊಂಡಿದ್ದರು.ಈ ಬಾಗದ ಮುಖಂಡರ ಕೋರಿಕೆಯಂತೆ ಶಾಸಕ ಟಿ.ಡಿ.ರಾಜೇಗೌಡ ಅವರು ಗಾಂಧಿ ಗ್ರಾಮ ರಸ್ತೆಗೆ ₹50 ಲಕ್ಷ ಮಂಜೂರು ಮಾಡಿದ್ದಾರೆ. ಆದರೆ, ಮಳೆ ಬರುತ್ತಿರು ವುದರಿಂದ ಕಾಮಗಾರಿ ವಿಳಂಬವಾಗಿದೆ. ಮಳೆ ಬಿಟ್ಟ ನಂತರ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲ್ಯಾಂಡ್ ಆರ್ಮಿ ಎಂಜಿನಿಯರ್ ರಾಜೇಂದ್ರ ಮಾಹಿತಿ ನೀಡಿದರು.

--ಕೋಟ್‌--

ಈ ರಸ್ತೆ ತುಂಬಾ ಹಾಳಾಗಿದೆ. ಮಳೆ ಕಾರಣ ಕಾಮಗಾರಿ ವಿಳಂಬವಾಗಿರುವುದರಿಂದ ನಮ್ಮ ಊರು, ನಮ್ಮ ರಸ್ತೆ, ನಮ್ಮ ಜನ ಕಲ್ಪನೆಯಡಿ ಪಕ್ಷತೀತವಾಗಿ ಎಲ್ಲಾ ಗ್ರಾಮಸ್ಥರು, ಆಟೋ ಚಾಲಕರು ಸೇರಿ 3 ಕಿ.ಮೀ.ರಸ್ತೆ ದುರಸ್ಥಿ ಮಾಡಿದ್ದೇವೆ. ಗ್ರಾಮಸ್ಥರು ಟ್ರಾಕ್ಟರ್ ನೀಡಿ ಸಹಕಾರ ನೀಡಿದ್ದಾರೆ ಎಂದರು.

- ಡಿ.ಜಿ.ಸತೀಶ್, ಮಾಜಿ ಉಪಾಧ್ಯಕ್ಷ

ಕಹಿನಬೈಲು ಗ್ರಾಪಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ