ಕನ್ನಡಪ್ರಭ ವಾರ್ತೆ ದಾವಣಗೆರೆ
ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಬುಧವಾರ ಸಮಿತಿ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
30 ವರ್ಷಗಳಿಂದ ಬಡಾವಣೆಯಲ್ಲಿ ವಾಸವಾಗಿರುವ ನಾವುಗಳು ಯಾವುದೇ ಗಲಾಟೆ, ಕಿರಿಕಿರಿ ಇಲ್ಲದ ಜೀವನ ಸಾಗಿಸುತ್ತಿದ್ದೇವೆ. ಆದರೆ, ಸರ್ ಎಂ.ವಿ. ಕಾಲೇಜು ಪ್ರಾರಂಭದಲ್ಲಿ ಆಡಳಿತ ಕಚೇರಿ ಮಾತ್ರ ಪ್ರಾರಂಭಿಸುತ್ತೇವೆ ಎಂದು ಬಾಡಿಗೆ ಪಡೆದು, ತದನಂತರ ಸುತ್ತಮುತ್ತಲಿನ ಮನೆಗಳು, ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಸುಮಾರು 500 ವಿದ್ಯಾರ್ಥಿಗಳನ್ನು ಅಲ್ಲೇ ಅಕ್ಕಪಕ್ಕದ 500 ಮೀಟರ್ ವ್ಯಾಪ್ತಿ ಮನೆಗಳನ್ನು ಬಾಡಿಗೆ ಪಡೆದು ಅನಧಿಕೃತ ಪಿಜಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ವಿದ್ಯಾರ್ಥಿಗಳ ಹಾಸ್ಟೆಲ್, ಕಾಲೇಜು ಮತ್ತು ಊಟದ ವ್ಯವಸ್ಥೆಯನ್ನು ಎಲ್ಲವನ್ನು ಸ್ಥಳೀಯ ವಾಸಿಗಳು ಓಡಾಡುವ 30 ಅಡಿ ರಸ್ತೆಯ ಅಕ್ಕಪಕ್ಕದಲ್ಲಿ ಕೈಗೊಳ್ಳುತ್ತಿದ್ದಾರೆ. ಸದರಿ ರಸ್ತೆ ಅಕ್ಕಪಕ್ಕದಲ್ಲಿ ಕಾಲೇಜಿನ ವಾಹನಗಳು ಮತ್ತು ವಿದ್ಯಾರ್ಥಿಗಳ ವಾಹನಗಳನ್ನು ನಿಲ್ಲಿಸುತ್ತ, ತೊಂದರೆ ಮಾಡುತ್ತಿದ್ದಾರೆ. ಇದರಿಂದ ಚಿಕ್ಕಮಕ್ಕಳು, ವೃದ್ಧರು ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸಲ್ಲಿಸುವ ವೇಳೆ ಸಮಿತಿಯ ಕೆ.ಎಚ್. ಲೋಕೇಶ್, ಡಿ.ರವೀಂದ್ರ, ದಿನೇಶ್, ಪಿ.ಆರ್. ರಾಮಚಂದ್ರ ಶ್ರೇಷ್ಠಿ, ನೀಲಕಂಠಪ್ಪ. ಕೆ.ಎಲ್. ರಾಹುಲ್, ರಾಜಣ್ಣ, ಅಂಕಿತ, ವಕೀಲ, ಹರೀಶ್, ನವೀನ್, ಚಂದನ್, ಡಿ.ಸುರೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.