ವಿಶ್ವೇಶತೀರ್ಥರು ಶ್ರೇಷ್ಠ ವಿಭೂತಿ ಸ್ವರೂಪರಾಗಿದ್ದರು: ಡಾ. ಮುರಳಿ ಮನೋಹರ ಜೋಶಿ

KannadaprabhaNewsNetwork |  
Published : Dec 25, 2025, 03:00 AM IST
ವದೆಹಲಿಯ ವಸಂತ್ ಕುಂಜ್‌ನ ಪೇಜಾವರ ಮಠದ ಶಾಖೆಯಲ್ಲಿ ಶ್ರೀ ವಿಶ್ವೇಶತೀರ್ಥ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ  | Kannada Prabha

ಸಾರಾಂಶ

ದೇಶದ ಹಲವೆಡೆ ಇರುವ ಶ್ರೀ ಪೇಜಾವರ ಮಠದ ಶಾಖೆಗಳು ಮತ್ತು ಅಧೀನ‌ ಸಂಸ್ಥೆಗಳಲ್ಲಿ ಮಂಗಳವಾರ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ವೈಭವದಿಂದ ವಿವಿಧ ಧಾರ್ಮಿಕ ಸಾಂಸ್ಕೃತಿಕ , ಸಾಮಾಜಿಕ ಹಾಗೂ ಜ್ಞಾನ ಸತ್ರಗಳೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದ ಹಲವೆಡೆ ಇರುವ ಶ್ರೀ ಪೇಜಾವರ ಮಠದ ಶಾಖೆಗಳು ಮತ್ತು ಅಧೀನ‌ ಸಂಸ್ಥೆಗಳಲ್ಲಿ ಮಂಗಳವಾರ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ವೈಭವದಿಂದ ವಿವಿಧ ಧಾರ್ಮಿಕ ಸಾಂಸ್ಕೃತಿಕ , ಸಾಮಾಜಿಕ ಹಾಗೂ ಜ್ಞಾನ ಸತ್ರಗಳೊಂದಿಗೆ ನೆರವೇರಿತು.ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ಮಠದ ಶಾಖೆಯಲ್ಲಿ ನಡೆದ ಗುರು ಸಂಸ್ಮರಣ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವರೂ ಶ್ರೀ ವಿಶ್ವೇಶತೀರ್ಥರೊಂದಿಗೆ ರಾಮಜನ್ಮಭೂಮಿ ಆಂದೋಲನದಲ್ಲಿ ಶ್ರೀಗಳೊಂದಿಗೆ ಮಹತ್ವದ ಭೂಮಿಕೆ ನಿರ್ವಹಿಸಿದ್ದ ಡಾ ಮುರಳಿ ಮನೋಹರ ಜೋಶಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಸಂಸ್ಮರಣಾ ಮಾತುಗಳ ಮೂಲಕ ನಮನ ಸಲ್ಲಿಸಿದರು.ಶ್ರೀ ವಿಶ್ವೇಶ ತೀರ್ಥರು ಶ್ರೇಷ್ಠ ಸಂತ, ವಿಭೂತಿ ಸ್ವರೂಪರಾಗಿದ್ದರು. ವಿಶ್ವಹಿಂದು ಪರಿಷತ್ತಿನ ಸ್ಥಾಪನೆಗೆ, ದೇಶ ವಿದೇಶಗಳಲ್ಲಿ ಅದರ ಕಾರ್ಯವ್ಯಾಪ್ತಿಯ ವಿಸ್ತರಣೆಗೆ ಅವರ ಮಾರ್ಗದರ್ಶನ ಪ್ರೇರಣೆಗಳು ಅಮೂಲ್ಯವಾದವು. ರಾಮಜನ್ಮಭೂಮಿ ಆಂದೋಲನದಲ್ಲಿ ಸಮಸ್ತ ಹಿಂದು ಸಮಾಜಕ್ಕೆ ಅವರು ನೀಡಿದ ನೇತೃತ್ವಗಳು ಅವಿಸ್ಮರಣೀಯ ಎಂದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳ ಪಾದುಕೆ ಮತ್ತು ಭಾವಚಿತ್ರಕ್ಕೆ ಡಾ. ಜೋಶಿ ದೀಪಬೆಳಗಿ ಪುಷ್ಪಾರ್ಚನೆಗೈದು ಮಂಗಳಾರತಿ ಬೆಳಗಿ ಉದ್ಘಾಟಿಸಿದರು. ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.‌ವಿಹಿಂಪ ದೆಹಲಿ ರಾಜ್ಯದ ಕಾರ್ಯದರ್ಶಿ ಸುರೇಂದ್ರ ಕುಮಾರ ಗುಪ್ತಾ , ಮಾಜಿ ಕುಲಪತಿ ಶಿಕ್ಷಣ ತಜ್ಞ ಡಾ. ರಮೇಶ ಕುಮಾರ್ ಪಾಂಡೆ , ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್, ನವದೆಹಲಿಯ ಶ್ರೀ ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.ಶ್ರೀಮಠದ ವ್ಯವಸ್ಥಾಪಕ ವಿದ್ವಾನ್ ದೇವಿಪ್ರಸಾದ ಭಟ್ ಪ್ರಸ್ತಾವನೆಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಅರವಿಂದ ಮೆಟ್ಟಿಮನಿ ವಂದನಾರ್ಪಣೆಗೈದರು. ಗುರುಕುಲದ ಪ್ರಾಧ್ಯಾಪಕರಾದ ಶ್ರೀಕರ ಕುಲಕರ್ಣಿ, ಶ್ರೀನಿಧಿ ಆಚಾರ್ಯ, ಕೃಷ್ಣತೇಜ ಆಚಾರ್ಯ, ಸೌರಭ್ ಶರ್ಮಾ ಮೊದಲಾದವರು ಸಹಕರಿಸಿದರು .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಕ್ಕೆ ಬರುವ ಕೇಂದ್ರ ಸಚಿವರಿಗೆ ಕಪ್ಪು ಬಾವುಟ: ಐವನ್‌
ಸಾಹಿತಿ, ರಂಗನಟ, ನಿರ್ದೇಶಕ, ಆಕಾಶವಾಣಿ ನಾಟಕ ಕಲಾವಿದ ಪ್ರೊ.ರಾಮದಾಸ್‌ ನಿಧನ