ತೇರದಾಳ ಡಾ.ಸಿದ್ದಾಂತ ದಾನಿಗೊಂಡ ಶಾಲೆಯಲ್ಲಿ ವ್ಹಾಲಿಬಾಲ್ ಪಂದ್ಯಾವಳಿ

KannadaprabhaNewsNetwork |  
Published : Jul 21, 2026, 04:15 AM IST
ದಿ.೨೪ರಿಂದ ೨೬ರ ವರೆಗೆ ಸಿಬಿಎಸ್‌ಸಿಇ ಕ್ಲಸ್ಟರ್೮ ಮಟ್ಟದ ಸ್ಪರ್ಧೆಗಳಲ್ಲಿ ರಾಜ್ಯದ ಕ್ರೀಡಾಳುಗಳ ಭಾಗಿ! | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತೇರದಾಳಇದೇ 24ರಿಂದ 26ರವರೆಗೆ ಕ್ಲಸ್ಟರ್-8ರ ರಾಜ್ಯವ್ಯಾಪಿ ವಿವಿಧ ಭಾಗಗಳ ಸಿಬಿಎಸ್‌ಸಿ ಶಾಲೆಗಳ ವ್ಹಾಲಿಬಾಲ್ ಸ್ಪರ್ಧೆಯಲ್ಲಿ ಒಟ್ಟು 154 ತಂಡಗಳ 5,906 ಕ್ರೀಡಾಪಟುಗಳ ನಡುವಣ ರೋಚಕ ಪಂದ್ಯಗಳು ಜರುಗಲಿವೆ ಎಂದು ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ತೇರದಾಳ

ಇದೇ 24ರಿಂದ 26ರವರೆಗೆ ಕ್ಲಸ್ಟರ್-8ರ ರಾಜ್ಯವ್ಯಾಪಿ ವಿವಿಧ ಭಾಗಗಳ ಸಿಬಿಎಸ್‌ಸಿ ಶಾಲೆಗಳ ವ್ಹಾಲಿಬಾಲ್ ಸ್ಪರ್ಧೆಯಲ್ಲಿ ಒಟ್ಟು 154 ತಂಡಗಳ 5,906 ಕ್ರೀಡಾಪಟುಗಳ ನಡುವಣ ರೋಚಕ ಪಂದ್ಯಗಳು ಜರುಗಲಿವೆ ಎಂದು ಎಸ್‌ಡಿಎಂ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ ತಿಳಿಸಿದರು.

ಸೋಮವಾರ ಸಂಸ್ಥೆಯ ಎಸ್ಡಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರೀಯ ಪಠ್ಯಕ್ರಮ ವ್ಯವಸ್ಥೆಯಲ್ಲಿ ನಮ್ಮ ರಾಜ್ಯಕ್ಕೆ 8ನೇ ಕ್ರಮಾಂಕವಿದ್ದು, ನಮ್ಮ ಸಂಸ್ಥೆಗೆ ಈ ಬಾರಿ ವ್ಹಾಲಿಬಾಲ್ ಪಂದ್ಯಾವಳಿ ಆಯೋಜಿಸಲು ಕೇಂದ್ರ ಬೋರ್ಡ್ ಅನುಮತಿಸಿರುವುದು ಸಂಸ್ಥೆಯ ಹಿರಿಮೆ ಹೆಚ್ಚಿಸಿದೆ. ಒಟ್ಟು ರಾಜ್ಯಾದ್ಯಂತ ಇರುವ ಸಿಬಿಎಸ್‌ಸಿ 338 ಶಾಲೆಗಳಿಂದ 314 ಬಾಲಕರ ಹಾಗೂ 152 ಬಾಲಕಿಯರ ತಂಡಗಳು ಪಾಲ್ಗೊಳ್ಳಲಿದ್ದು, ಒಟ್ಟು 5906 ಕ್ರೀಡಾಳುಗಳು, 676 ಅಧಿಕಾರಿಗಳು, ತಾಂತ್ರಿಕ ಸಮಿತಿ ಸದಸ್ಯರು ಹಾಗೂ 85 ಕೇಂದ್ರದ ಅಧಿಕೃತ ತೀರ್ಪುಗಾರರು ಪಾಲ್ಗೊಳ್ಳಿದ್ದಾರೆ. ಕ್ರೀಡಾಕೂಟಗಳ ಸಮಗ್ರ ವೀಕ್ಷಣೆಗೆ ಇಬ್ಬರು ಕೇಂದ್ರದ ಅಧಿಕಾರಿಗಳು ಆಗಮಿಸಲಿದ್ದು, ಸ್ಥಳೀಯ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಿಯೋಜನೆಗೊಂಡ ದೈಹಿಕ ಶಿಕ್ಷಕರು, ಪೋಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಕೆಪಿಟಿಸಿಎಲ್ ಸಿಬ್ಬಂದಿ, ತಂಡಗಳ ವ್ಯವಸ್ಥಾಪಕರು, ತರಬೇತುದಾರರು ಸೇರಿ 7 ಸಾವಿರಕ್ಕೂ ಅಧಿಕ ಸಿಬ್ಬಂದಿ ಕ್ರೀಡಾಕೂಟಗಳ ಯಶಸ್ಸಿಗೆ ಶ್ರಮಿಸಲಿದ್ದಾರೆ.

ಅತೀ ಹೆಚ್ಚು ಗ್ರೇಟ್ ಬೆಂಗಳೂರು ಜಿಲ್ಲೆಯ ತಂಡಗಳು ನೋಂದಣಿಯಾಗಿದ್ದು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಮಂಗಳೂರು, ಬಾಗಲಕೋಟೆ, ವಿಜಯಪುರ, ರಾಯಚೂರ, ವಿಜಯನಗರ, ಬಳ್ಳಾರಿ, ಬೆಳಗಾವಿ ಸೇರಿದಂತೆ ಬಹುತೇಕ ಪ್ರದೇಶಗಳ ಕ್ರೀಡಾಳುಗಳು ದಿ.23ರಂದು ಕುಡಚಿ ರೈಲು ನಿಲ್ದಾಣಕ್ಕೆ ಆಗಮಿಸಲಿದ್ದು, ಅವರನ್ನು ಕರೆತರಲು ವಾಹನಗಳ, ವಸತಿ, ಭದ್ರತೆ, ಗುಣಮಟ್ಟದ ಊಟ-ಉಪಹಾರಗಳ ಹಾಗೂ ನೀರು ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೊಳಿಸಲಾಗಿದೆ.

24ರಂದು ಬೆಳಗ್ಗೆ 9ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಹಾಗೂ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ, 26ರಂದು ಸಂಜೆ ಮುಖ್ಯ ಅತಿಥಿಗಳು, ವಿಶೇಷ ಆವ್ಹಾನಿತರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ಜರುಗಲಿದೆಯೆಂದು ವಿವರಿಸಿದರು. ಸಂಸ್ಥೆಯ ಡೀನ್ ವಿಶ್ವನಾಥ ರೆಡ್ಡಿ, ಪ್ರಾಚಾರ್ಯ ಸಂದೀಪ ಸಮಸೋಲೆ, ವ್ಯವಸ್ಥಾಪಕ ರಾಜೇಂದ್ರ ಪರೀಟ, ಶ್ರೀಧರ ಬೆಳಗಲಿ, ಶಾಂತಿಸಾಗರ ಪದಮಗೊಂಡ, ಕ್ರೀಡಾ ನಿರ್ದೇಶಕ ರಾಮು ಹಾಡಕರ ಸೇರಿದಂತೆ ಸಿಬ್ಬಂದಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ದಸಂಸ ಆಗ್ರಹ
ರಾಯಚೂರು ವಲಯ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆ