ಕಾಂಗ್ರೆಸ್ ನಿಷ್ಠಾವಂತರು ಎಂಬುದನ್ನು ಅರಿತುಕೊಂಡೇ ನಮ್ಮನ್ನು ಕಡೆಗಣಿಸಲಾಗುತ್ತಿದೆ

KannadaprabhaNewsNetwork |  
Published : Apr 20, 2024, 01:03 AM IST
67 | Kannada Prabha

ಸಾರಾಂಶ

ಹೆಚ್ಚು ಚರ್ಚೆಗೆ ಅವಕಾಶ ನೀಡದ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ನನಗೆ ರಾಜಕೀಯವಾಗಿ ಬಹಳಷ್ಟು ಅನುಭವವಿದ್ದು, ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಗೊತ್ತಿದೆ, ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ

- ಸಚಿವ ಕೆ. ವೆಂಕಟೇಶ್‌ ಎದುರು ಮಾದಿಗ ಸಮುದಾಯ ಮುಖಂಡರ ಆಕ್ಷೇಪ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಕಾಂಗ್ರೆಸ್ ನಿಷ್ಠಾವಂತರು ಎಂಬುದನ್ನು ಅರಿತುಕೊಂಡೇ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಮಾದಿಗ ಸಮುದಾಯದ ಮುಖಂಡರು ಸಚಿವ ಕೆ. ವೆಂಕಟೇಶ್ ಮುಂದೆ ಪ್ರಸ್ತಾಪಿದರು.

ಪಟ್ಟಣದ ಎನ್.ಎ ಫಂಕ್ಷನ್ ಹಾಲಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಅಭ್ಯರ್ಥಿ ಎಂ. ಲಕ್ಷ್ಮಣ್ ಪರ ಮತ ಯಾಚನಾ ಸಭೆಯಲ್ಲಿ ಈ ಘಟನೆ ನಡೆಯಿತು.

ಕಾಂಗ್ರೆಸ್ ಮತ ಹಾಕುವುದನ್ನು ಬಿಟ್ಟರೆ ಬೇರೆ ಯಾವ ಪಕ್ಷವನ್ನು ನಮ್ಮ ಕ್ಷೇತ್ರದಲ್ಲಿ ಬೆಂಬಲಿಸದ ನಮ್ಮ ಆದಿ ಜಾಂಬವ ಸಮುದಾಯದ ಜನರನ್ನು ಪರಿಗಣಿಸುತ್ತಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಮತ್ತು ನಮ್ಮ ಕ್ಷೇತ್ರದಲ್ಲಿ ಸಚಿವರಾಗಿದ್ದರೂ ಸಹ ಈ ಜನಾಂಗಕ್ಕೆ ರಾಜಕೀಯವಾಗಿ ಯಾವುದೇ ಸ್ಥಾನಮಾನ ಇಲ್ಲ, ಮುಂದಿನ ದಿನಗಳಲ್ಲಿ ಈ ರೀತಿ ಅನ್ಯಾಯವಾಗದಂತೆ ಸ್ಥಾನಮಾನ ನೀಡಬೇಕೆಂದು ಮನವಿ ಮಾಡಿಕೊಂಡರು.

ಹೆಚ್ಚು ಚರ್ಚೆಗೆ ಅವಕಾಶ ನೀಡದ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ನನಗೆ ರಾಜಕೀಯವಾಗಿ ಬಹಳಷ್ಟು ಅನುಭವವಿದ್ದು, ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಗೊತ್ತಿದೆ, ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ತಿಳಿಸಿದರು.

ತಪ್ಪು ಪ್ರಚಾರ- ಎಂ. ಲಕ್ಷ್ಮಣ್ ಅವರಿಗೆ ಕೆ. ವೆಂಕಟೇಶ್ ಟಿಕೆಟ್ ಕೊಡಿಸಿದ್ದಾರೆ ಎಂದು ಅನೇಕರು ನನ್ನ ಮೇಲೆ ತಪ್ಪು ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಲಕ್ಷ್ಮಣ್ ಅವರು ಕಾಂಗ್ರೆಸ್ ಅಭ್ಯರ್ಥಿಯ ವಿನಃ ನನ್ನ ಅಭ್ಯರ್ಥಿಯಾಗಲಿ ಅಥವಾ ಯಾರ ವೈಯಕ್ತಿಕ ವ್ಯಕ್ತಿಯ ಅಭ್ಯರ್ಥಿ ಅಲ್ಲ, ಈ ರೀತಿ ತಪ್ಪು ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ ಮಾತನಾಡಿ, ಎಲ್ಲರೂ ಕೊಡಗು ಮತ್ತು ಮೈಸೂರು ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರ ಹಸ್ತದ ಗುರುತಿಗೆ ಮತ ಚಲಾಯಿಸಬೇಕೆಂದು ಮನವಿ ಮಾಡಿಕೊಂಡರು.

ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಮತ ಚಲಾಯಿಸಬೇಕೆಂದು ಮನವಿ ಮಾಡಿಕೊಂಡರು.

ನಂದೀಶ್, ಕೀರ್ತಿ, ರಾಜಶೇಖರ್, ರಮೇಶ್, ನಾಗರಾಜ, ಜಗದೀಶ್, ಆರ್. ವೆಂಕಟೇಶ್, ಗಂಗಾಧರ್, ಘಟಪ್ರಭಾ, ರಾಜಣ್ಣ, ಮಂಜುನಾಥ್, ರಮೇಶ್, ಶಿವಣ್ಣ, ರವಿ, ಬಸವೇಗೌಡ, ರಮೇಶ್, ಸುರೇಶ್, ಶೈಲಜಾ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ