ವೃಕ್ಷಥಾನ್ ಹೆರಿಟೇಜ್ ರನ್ 10 ಕಿ.ಮೀ ಓಟ

KannadaprabhaNewsNetwork | Published : Nov 25, 2024 1:00 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಡಾ.ಬಿ.ಆರ್.ಆಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಪ್ರಾರಂಭವಾದ 10 ಕಿ.ಮಿ. ಪ್ರೋಮೋ ರನ್‌ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಡಾ.ಬಿ.ಆರ್.ಆಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಪ್ರಾರಂಭವಾದ 10 ಕಿ.ಮಿ. ಪ್ರೋಮೋ ರನ್‌ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸಿದರು.

ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ಓಟ, ಅಂಬೇಡ್ಕರ್ ಚೌಕ್, ಗಾಂಧಿ ಚೌಕ್ ಮತ್ತು ಶಿವಾಜಿ ಚೌಕ್ ಮಾರ್ಗವಾಗಿ ಇಬ್ರಾಹಿಂ ರೋಜಾ ತಲುಪಿತು. ಅಲ್ಲಿ ಹೆರಿಟೇಜ್ ರನ್ ಪರ್ ಮತ್ತು ಹಸಿರು ವಿಜಯಪುರ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪರ ಘೋಷಣೆಗಳನ್ನು ಕೂಗಲಾಯಿತು.

ಈ ಓಟ ಇಬ್ರಾಹಿಂ ರೋಜಾದಿಂದ ಮರಳಿ ಕ್ರೀಡಾಂಗಣಕ್ಕೆ ಆಗಮಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಮಹಾಂತೇಶ ಬಿರಾದಾರ, ಜಿಲ್ಲೆಯಲ್ಲಿ ಹೆರಿಟೇಜ್ ರನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 21 ಕಿ. ಮೀ ಓಟದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಡಾ.ರವಿ ಚೌಧರಿ, ಡಾ.ಭೀಮನಗೌಡ ಬಿರಾದಾರ, ಸಂಕೇತ ಬಗಲಿ, ವೀರೇಂದ್ರ ಗುಚ್ಚೆಟ್ಟಿ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಅನೀಲ ಧಾರವಾಡಕರ, ಅಮಿತ ಬಿರಾದಾರ, ಶ್ರೀಕಾಂತ ಮಂತ್ರಿ, ಡಾ.ಪ್ರವೀಣ ಚೌರ, ಗುರುಶಾಂತ ಕಾಪಸೆ, ಸೋಮು ಮಠ, ಕಾರ್ಪೊರೇಟರ್ ಅಶ್ಪಾಕ್ ಮನಗೂಳಿ, ಮುತ್ತಣ್ಣ ಬಿರಾದಾರ, ವಿಜಯಕುಮಾರ ಕೋರೆ, ಗಜಾನನ ಮಂದಾಲಿ ಮುಂತಾದವರು ಉಪಸ್ಥಿತರಿದ್ದರು.

ಈ ಓಟದಲ್ಲಿ ಸೈಕ್ಲಿಂಗ್ ಗ್ರುಪ್ ಸದಸ್ಯರು, ಸೈಕ್ಲಿಂಗ್ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಸೈಕ್ಲಿಂಗ್ ನಡೆಸಿದರೆ, ಇಂಡಿಯನ್ ಆರ್ಮಿ ಸಂಘಟನೆ, ಕಮಾಂಡೊ ಸಂಘಟನೆಯ ಓಟಗಾರರೂ ಪಾಲ್ಗೊಂಡರು.

ನೋಂದಣಿ:

ಡಿ.22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜನ್ ರನ್-2024ಕ್ಕೆ ನೋಂದಣಿ ಭರದಿಂದ ಸಾಗಿದ್ದು, ನ.30 ನೋಂದಣಿ ಮಾಡಿಸಲು ಕೊನೆ ದಿನ. ಆಸಕ್ತ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಕೂಡಲೇ ನೋಂದಣಿ ಮಾಡಿಸಬೇಕು ಎಂದು ಕೋರ್ ಕಮಿಟಿಯ ಮುರುಗೇಶ ಪಟ್ಟಣಶೆಟ್ಟಿ ಮತ್ತು ಡಾ. ರಾಜು ಯಲಗೊಂಡ ತಿಳಿಸಿದರು.

Share this article