ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ಅಂಗವಾಗಿ ಪಪಂ ಮುಂಭಾಗದಲ್ಲಿ ಬೃಹತ್ ಎಲ್.ಇ.ಡಿ. ಪರದೆಯನ್ನು ಆಳವಡಿಸಿ ಬೆಂಗಳೂರಿನಲ್ಲಿ ನಡೆಯುವ ಮಹಾತ್ಮಗಾಂಧಿ ಜನ್ಮ ದಿನಾಚರಣೆಯ ನೇರ ಪ್ರಸಾರವನ್ನು ವೀಕ್ಷಿಸಿ ಮಾತನಾಡಿದರು.ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ ಮಾಹಾತ್ಮ ಗಾಂಧಿಜೀ ರವರ ತತ್ವಸಿದ್ದಾಂತಗಳು ಪ್ರಪಂಚಕ್ಕೆ ಆದರ್ಶವಾಗಿದ್ದು, ಲಾಲ್ ಬಹುದ್ದೋರ್ ಶಾಸ್ತ್ರಿ ರವರ ದೇಶಪ್ರೇಮ, ನಿಷ್ಟೆ, ಪ್ರಾಮಾಣಿಕತೆ, ಶೌರ್ಯಕ್ಕೆ ಪ್ರಪಂಚವೇ ಬೆರಗಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷೆ ಅನಿತಾ, ಪ.ಪಂ ಸದಸ್ಯ ಎ.ಡಿ.ಬಲರಾಮಯ್ಯ, ಮಂಜುಳಾ ಗೋವಿಂದರಾಜು, ಮಾಜಿ ಜಿ.ಪಂ.ಸದಸ್ಯ ಪ್ರಸನ್ನಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಮುಖಂಡರುಗಳಾದ ಈಶ್ವರಯ್ಯ, ಕೆ.ಬಿ.ಲೋಕೇಶ್, ಜಯರಾಮ್, ವೆಂಕಟಪ್ಪ, ಟಿ.ರಾಮಯ್ಯ, ಆನಂದ್, ಅಲ್ಲಾಬಕಾಷ್, ರಫೀಕ್, ನರಸಿಂಹಯ್ಯ, ಅರವಿಂದ್, ವಿನಯ್ಕುಮಾರ್, ಕವಿತಮ್ಮ, ಲಕ್ಷ್ಮಮ್ಮ, ಬೈರೇಶ್, ದೀಪಕ್, ನಾಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.