ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಡೀಸಿ ಜಾಗ ನೀಡಬಾರದು
ಹತ್ತು ವರ್ಷಗಳ ಬಳಿಕ ಈಗ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ಮತ್ತೆ ಅದೇ ತಪ್ಪನ್ನು ಮಾಡಲು ಹೊರಟಿದ್ದಾರೆ. ಕೆಜಿಎಫ್ ನಗರಕ್ಕೆ ವಿಶ್ವದಲ್ಲೆ ಒಂದು ಉತ್ತಮ ಹೆಸರುಇದೆ. ಇಂತಹ ಸ್ಥಳದಲ್ಲಿ ಬೆಂಗಳೂರಿನ ತ್ಯಾಜ್ಯ ತಂದು ಎಸೆದರೆ ಇಲ್ಲಿನ ಜನರ ಸ್ಥಿತ ಏನಾಗಬಹುದು ಎಂಬುದನ್ನು ಸರ್ಕಾರ ಯೋಚಿಸಬೇಕು. ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಅಕ್ರಂಪಾಷ ಇತ್ತೀಚಿಗೆ ಕೆಜಿಎಫ್ಗೆ ಭೇಟಿ ನೀಡಿ ಬಿಜಿಎಂಎಲ್ನ ೩೦೦ಎಕರೆ ಪ್ರದೇಶವನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಯತ್ನಿಸಿದ್ದಾರೆ. ಜಿಲ್ಲಾಧಿಕಾರಿಗಳು ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕವನ್ನು ಕೆಜಿಎಫ್ನಲ್ಲಿ ತೆರೆಯಲು ಜಾಗ ನೀಡಬಾರದು.ಜಾಗ ನೀಡಿದರೆ ಹೋರಾಟ
ಜಿಲ್ಲೆಯ ಜನರು ಕೃಷಿಯನ್ನು ನಂಬಿ ಜೀವನ ನಡೆಸಲಾಗುತ್ತಿದೆ, ನೂರಾರು ರೈತರು ಕೃಷಿಯನ್ನು ಅವಲಂಬಿತರಾಗಿದ್ದಾರೆ, ಈಗ ಬಿಬಿಎಂಪಿ ಕಸವನ್ನು ಇಲ್ಲಿ ತಂದು ಎಸೆದರೆ ಕೃಷಿಗೆ ಮಾರಕವಾಗಲಿದೆ. ಸಾವಿರಾರು ಉದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಕೆಜಿಎಫ್ನಲ್ಲಿ ಕೈಗಾರಿಕಾ ಹಬ್ ಮಾಡಲಾಗುವುದು ಎಂದು ಹೇಳಿ ಈಗ ಸದ್ದಿಲ್ಲದೆ ಕಸದ ಹಬ್ ಮಾಡಲು ಹೊರಟಿದೆ. ಇದರ ವಿರುದ್ಧ ಕರವೇ ಹೋರಾಟ ನಡೆಸಲಿದೆ ಎಂದರು.