ಶ್ರೀಕಾಂತ ಹೆಮ್ಮಾಡಿ
ತ್ಯಾಜ್ಯ ನೀರಿನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯಾಡಳಿತಕ್ಕೆ ಸ್ಥಳೀಯ ನಿವಾಸಿ, ಕಾರ್ಮಿಕ ಮುಖಂಡ ಸಂತೋಷ್ ಹೆಮ್ಮಾಡಿ ಹದಿನೈದು ದಿನಗಳ ಹಿಂದಷ್ಟೇ ಮನವಿ ಸಲ್ಲಿಸಿದ್ದರು. ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕಟ್ಟಡ ಮಾಲೀಕರು ತ್ಯಾಜ್ಯ ನೀರು ಹೊರಗಡೆ ಬಿಡಲಿಲ್ಲ. ಇದು ಕಿಡಿಗೇಡಿಗಳ ಷಡ್ಯಂತ್ರ ಎಂದು ಪತ್ರದ ಮೂಲಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಮಂಗಳವಾರ ರಾತ್ರಿ ಎರಡು ಗಂಟೆಯ ಸುಮಾರಿಗೆ ಮಳೆ ಬಂದ ವೇಳೆ ಮತ್ತೆ ತ್ಯಾಜ್ಯ ನೀರು ಹೊರಬಿಡಲಾಗಿದೆ. ದಾಖಲೆಗಳ ಮೂಲಕ ಸೆರೆ ಹಿಡಿಯಬೇಕು ಎಂದು ಇಲ್ಲಿನ ಸ್ಥಳೀಯ ಯುವಕರು ನಿದ್ದೆಗೆಟ್ಟು ಕಾದು ಕೂತಿದ್ದರಿಂದ ಕಟ್ಟಡ ಮಾಲೀಕರ ನಿಜ ಬಣ್ಣ ಬಯಲಾಗಿದೆ. ಕಟ್ಟಡದ ಆವರಣದಿಂದ ಪೈಪಿನ ಮೂಲಕ ಹೊರಬರುವ ತ್ಯಾಜ್ಯ ನೀರಿನ ಫೋಟೋ ಹಾಗೂ ವಿಡಿಯೋ ದೃಶ್ಯಾವಳಿಗಳನ್ನು ಸೆರೆ ಹಿಡಿದು ಸ್ಥಳೀಯಾಡಳಿತದ ಜನಪ್ರತಿನಿಧಿಗಳಿಗೆ ಯುವಕರು ಕಳುಹಿಸಿದಲ್ಲದೇ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.........................ಹೆಮ್ಮಾಡಿ ಪೇಟೆಯ ತುಂಬೆಲ್ಲಾ ದುರ್ನಾತ!ತ್ಯಾಜ್ಯ ನೀರಿನಿಂದಾಗಿ ಪೇಟೆ ಗಬ್ಬು ನಾರುತ್ತಿದೆ. ಮಲಗಳ ತ್ಯಾಜ್ಯ, ಸ್ಯಾನಿಟರಿ ಪ್ಯಾಡ್''''''''ಗಳು, ಇನ್ನೂ ಅನೇಕ ತ್ಯಾಜ್ಯಗಳು ತೇಲಿ ಬರುತ್ತಿದ್ದು, ಊರಿಡೀ ಅಸಹನೀಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ...................
ಕಟ್ಟಡ ಮಾಲೀಕರ ವಿರುದ್ದ ಕ್ರಮಕೈಗೊಳ್ಳಲು ಈಗಾಗಲೇ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇನೆ. ಕದ್ದುಮುಚ್ಚಿ ರಾತ್ರೋರಾತ್ರಿ ತ್ಯಾಜ್ಯ ನೀರು ಹೊರಬಿಡುತ್ತಿದ್ದಾರೆ. ತ್ಯಾಜ್ಯ ನೀರಿನಿಂದ ಮನೆಯ ಬಾವಿ ನೀರು ಕಲುಷಿತಗೊಳ್ಳುತ್ತಿದೆ. ಪಂಚಾಯಿತಿ ಕೂಡಲೇ ಕ್ರಮಕೈಗೊಳ್ಳದಿದ್ದರೆ ರಾ.ಹೆದ್ದಾರಿಗೆ ಸಮತಟ್ಟಾಗಿ ಮಣ್ಣು ಸುರಿದು ಯಾವ ನೀರು ನಮ್ಮ ರಸ್ತೆಗೆ ಬಾರದಂತೆ ತಡೆಯತ್ತೇವೆ.-ಸಂತೋಷ್ ಹೆಮ್ಮಾಡಿ, ಸ್ಥಳೀಯ ನಿವಾಸಿ................
ಸ್ಥಳೀಯರ ಮನವಿ ಮೇರೆಗೆ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಾರದ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಮ್ಮ ಕಟ್ಟಡದಿಂದ ಯಾವುದೇ ತ್ಯಾಜ್ಯ ಹೊರಗಡೆ ಬಿಡುತ್ತಿಲ್ಲ ಎಂದು ಕಟ್ಟಡದ ಮಾಲೀಕರು ಪತ್ರದ ಮೂಲಕ ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ತ್ಯಾಜ್ಯ ನೀರು ಹೊರಬಿಟ್ಟ ಬಗ್ಗೆ ವಿಡಿಯೋ ದಾಖಲೆ ಸಿಕ್ಕಿದೆ.-ಜಯಮ್ಮ, ಕಾರ್ಯದರ್ಶಿ ಗ್ರಾಮ ಪಂಚಾಯಿತಿ ಹೆಮ್ಮಾಡಿ.