ಕನ್ನಡಪ್ರಭ ವಾರ್ತೆ ಮೈಸೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮತ್ತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ಮುಖ್ಯ ಅತಿಥಿಗಳಾಗಿದ್ದರು. ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಜನ ಫೌಂಡೇಷನ್ ಅಧ್ಯಕ್ಷ ಆರ್. ಲಕ್ಷ್ಮಣ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಇದ್ದರು.
ನಾಡಿನ ಹೆಸರಾಂತ ಕವಿಗಳಾದ ರಾಷ್ಟ್ರಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ದ.ರಾ. ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಕೆ.ಎಸ್. ನಿಸಾರ್ಅಹಮದ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಂ. ಗೋಪಾಲಕೃಷ್ಣ ಅಡಿಗ, ಡಿವಿಜಿ, ಬಿ.ಆರ್. ಲಕ್ಷ್ಮಣರಾವ್, ಸಂತ ಶಿಶುನಾಳ ಷರೀಫ, ಟಿ.ಪಿ. ಕೈಲಾಸಂ, ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ, ಚಿ. ಉದಯಶಂಕರ್, ಋಷಿ, ಜಯ ಸುದರ್ಶನ, ಸೋಸಲೆ ಗಂಗಾಧರ್, ಗೋವಿಂದಸ್ವಾಮಿ ಗುಂಡಾಪುರ ಅವರು ರಚಿಸಿದ ಮತ್ತು ಚಲನಚಿತ್ರಗಳಲ್ಲಿ ಅಳವಡಿಸಿಕೊಂಡಿರುವ ಭಾವಗೀತೆ, ಕವಿತೆಗಳನ್ನು ಪ್ರಸ್ತುತಪಡಿಸಲಾಯಿತು.ಗಾಯಕ ಆರ್. ಲಕ್ಷ್ಮಣ್ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ಎ.ಡಿ. ಶ್ರೀನಿವಾಸ್, ರಾಜೇಶ್ಪಡಿಯಾರ್, , ಎಸ್. ಅಮರ್, ಅಶ್ವಿನ್ಅತ್ರಿ, ಎನ್. ಬೆಟ್ಟೇಗೌಡ, ಶ್ರೀಧರ್, ಜಾಯ್ಸ್ವೈಶಾಕ್, ಡಾ.ಪೂರ್ಣಿಮಾ, ಡಾ. ಸುಮಾ, ಪುಷ್ಪಲತಾ ಶಿವಕುಮಾರ್, ಶುಭಾ ಪಲ್ಲವಿ, ವೇದಶ್ರೀ ಅವರು ಹಾಡಿದರು.
ಉಪೇಂದ್ರಕುಮಾರ್, ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್, ವಿಜಯಭಾಸ್ಕರ್, ಶ್ರೀಮಧುರಾ, ರಾಜು ಅನಂತಸ್ವಾಮಿ, ರಂಗರಾವ್, ಎಂ.ಎಸ್. ಮಾರುತಿ, ಆರ್ಸುದರ್ಶನಂ, ವಿ. ಮನೋಹರ್, ಕೆ. ಯುವರಾಜ್, ಹಂಸಲೇಖ, ರಾಜನ್ನಾಗೇಂದ್ರ ಸಂಗೀತ ಸಂಯೋಜಿಸಿರುವ ಹಾಗೂ ಸಿ. ಅಶ್ವತ್ಥ್., ಮೈಸೂರು ಅನಂತಸ್ವಾಮಿ, ಡಾ. ರಾಜಕುಮಾರ್, ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ರತ್ನಮಾಲಾ ಪ್ರಕಾಶ್, ರಾಜೇಶ್ಕೃಷ್ಣನ್, ಸುನಿತಾ ಅನಂತಸ್ವಾಮಿ, ಎಂ.ಡಿ. ಪಲ್ಲವಿ, ಅಪೂರ್ವ ಶ್ರೀಧರ್, ರಾಜು ಅನಂತಸ್ವಾಮಿ, ಬಿ.ಆರ್ .ಛಾಯಾ, ಆರ್. ಸುದರ್ಶನಂ, ಅನನ್ಯ ಭಟ್, ಸುಪ್ರಿಯಾ ಆಚಾರ್ಯ, ಜಯಚಂದ್ರ, ಕೆ.ಜೆ. ಯೋಸುದಾಸ್, ಕಿಕ್ಕೇರಿ ಕೃಷ್ಣಮೂರ್ತಿ, ರಮೇಶ್ ಚಂದ್ರ ಅವರು ಹಾಡಿರುವ ಸುಮಾರು 32 ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಾದಬ್ರಹ್ಮ ಸಭಾದಲ್ಲಿ ಬುಧವಾರ ನಡೆದ ಭಾವತರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ವಿ. ಬೈರಿ ಈ ವಿಷಯ ಪ್ರಕಟಿಸಿದರು.
ಮುಖ್ಯ ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಕಾಪಿರೈಟ್ ಹೆಸರಿನಲ್ಲಿ ಕೆಲವರು ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಅಡ್ಡಿ ಉಂಟು ಮಾಡದಂತೆ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು. ಕ್ರಿಮಿನಲ್ಗಳು ಮಾತ್ರ ಈ ರೀತಿ ಮಾಡಲು ಸಾಧ್ಯ. ಇದಕ್ಕೆ ಜಗ್ಗದೇ ಕಾರ್ಯಕ್ರಮಗಳನ್ನು ನಡೆಸಿ ಎಂದರು.