ಮನಸ್ಸು, ಬುದ್ಧಿ, ಆತ್ಮ ವಿಶ್ವಾಸವಾದಾಗ ಮನುಷ್ಯ ವಿಶ್ವಮಾನವ: ಡಾ.ಕೆ.ಚಿದಾನಂದ ಗೌಡ

KannadaprabhaNewsNetwork |  
Published : Feb 06, 2024, 01:32 AM IST
ಕ್ಯಾಪ್ಷನಃ5ಕೆಡಿವಿಜಿ34ಃದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಡಾ.ಚಿದಾನಂದ ಗೌಡರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಈ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಕುವೆಂಪು ಅವರ ಆತ್ಮಕ್ಕೂ ತೃಪ್ತಿ ಸಿಗುತ್ತದೆ. ಕುವೆಂಪು ಅವರು ತಮ್ಮ ಮನೆಗೆ ಬರುತ್ತಿದ್ದ ಅತಿಥಿಗಳಿಗೆ ''''ವಿಶ್ವಮಾನವ ಸಂದೇಶ'''' ಕಿರು ಪುಸ್ತಕಗಳ ನೀಡಿ ಈ ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ವಿಶ್ವಮಾನವ ಸಂದೇಶ ನೀವು ಪಾಲಿಸಬೇಕೆಂದು ಹೇಳುತ್ತಿದ್ದರೆಂದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದಲ್ಲಿರುವ ಸುಂದರ ಹಾಗೂ ಸುಸಜ್ಜಿತ ಕನ್ನಡ ಭವನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇಲ್ಲ ಎಂದು ಕುವೆಂಪು ವಿವಿಯ ನಿವೃತ್ತ ಉಪಕುಲಪತಿ ಡಾ.ಕೆ.ಚಿದಾನಂದ ಗೌಡ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಈ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಕುವೆಂಪು ಅವರ ಆತ್ಮಕ್ಕೂ ತೃಪ್ತಿ ಸಿಗುತ್ತದೆ. ಕುವೆಂಪು ಅವರು ತಮ್ಮ ಮನೆಗೆ ಬರುತ್ತಿದ್ದ ಅತಿಥಿಗಳಿಗೆ ''''''''ವಿಶ್ವಮಾನವ ಸಂದೇಶ'''''''' ಕಿರು ಪುಸ್ತಕಗಳ ನೀಡಿ ಈ ಜಗತ್ತಿನಲ್ಲಿ ಶಾಂತಿ ನೆಲೆಸಬೇಕಾದರೆ ವಿಶ್ವಮಾನವ ಸಂದೇಶ ನೀವು ಪಾಲಿಸಬೇಕೆಂದು ಹೇಳುತ್ತಿದ್ದರೆಂದರು. ಮನಸ್ಸು, ಬುದ್ಧಿ, ಆತ್ಮ ವಿಶ್ವಾಸವಾದಾಗ ಮಾತ್ರ ಮನುಷ್ಯ ವಿಶ್ವಮಾನವ ಆಗುತ್ತಾನೆ. ಎಲ್ಲಾ ಜನರು ವಿಕಾಸ ಆಗಬೇಕು ಮತ್ತು ಸಮಾಜದಲ್ಲಿ ಸಮನ್ವಯ ಬಯಸುತ್ತೇನೆಂದು ಕುವೆಂಪು ಅವರು ಎಲ್ಲರಿಗೂ ಹೇಳುತ್ತಿದ್ದರು. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಚಾರ್ಯ ನಾ.ಲೋಕೇಶ್ ಒಡೆಯರ್ ಮಾತನಾಡಿ, ಅಗಾಧ, ಅಪರಿಮಿತವಾದದ್ದನ್ನು ಸಾಧಿಸಿರುವ ಚಿದಾನಂದಗೌಡರು, ಆದರ್ಶ ವ್ಯಕ್ತಿಯಾಗಿದ್ದಾರೆ. ಸ್ವಾರ್ಥರಹಿತವಾಗಿ, ನಿಷ್ಪಕ್ಷವಾಗಿ, ಪಾರದರ್ಶಕವಾಗಿ ಕೆಲಸ ಮಾಡಿದ ಕೀರ್ತಿ ಹೊಂದಿರುವ ಚಿದಾನಂದಗೌಡರು, ಕುವೆಂಪು ವಿವಿಯ ಗೌರವ, ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದರು ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಡಾ.ಕೆ.ಚಿದಾನಂದ ಗೌಡರು ತಮ್ಮ ಆಡಳಿತ ವೈಖರಿಗಳಿಂದಾಗಿ ಆದರ್ಶ ಉಪಕುಲಪತಿಯಾಗಿದ್ದಾರೆ. ಅವರು ಅಂದು ನಮಗೆ ನೀಡಿದ ಈ ನಿವೇಶನ ಇಂದು ಕನ್ನಡದ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಲು ವೇದಿಕೆ ಆಗಿದೆ. ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಬಿ.ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಜಗದೀಶ್ ಕೂಲಂಬಿ, ತಾಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯ್ಯಪ್ಪ, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಗಾಯಿತ್ರಿ ವಸ್ತ್ರದ್‌ , ಕಾರ್ಯದರ್ಶಿ ಚಂದ್ರಿಕಾ ಮಂಜುನಾಥ್, ರುದ್ರಾಕ್ಷಿ ಬಾಯಿ, ಮಲ್ಲಮ್ಮ, ಬೇತೂರು ಷಡಾಕ್ಷರಪ್ಪ, ಸಿರಿಗೆರೆ ನಾಗರಾಜ್, ದಾಗಿನಕಟ್ಟೆ ಪರಮೇಶ್ವರಪ್ಪ, ಭೈರೇಶ್, ಕೆ.ಬಿ. ಪರಮೇಶ್ವರಪ್ಪ, ಎಚ್. ಚಂದ್ರಪ್ಪ, ಕಲಾವಿದ ಮಹಾಲಿಂಗಪ್ಪ, ಅವರಗೆರೆ ರುದ್ರಮುನಿ, ಪಲ್ಲಾಗಟ್ಟಿ, ಮೆಳ್ಳೇಕಟ್ಟೆ ನಾಗರಾಜ್, ಕೆ.ಸಿ.ಸಿದ್ದೇಶ್, ಸೇರಿ ಇನ್ನೂ ಅನೇಕರಿದ್ದರು. ಗಾನ ಲಹರಿ ಸಂಗೀತ ಶಾಲೆಯ ಚೇತನ್ ಕುಮಾರ್ ಮತ್ತು ಸಂಗಡಿಗರು ಹಾಡಿದ ಹಾಡುಗಳು ಗಮನ ಸೆಳೆದವು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ