- ಎಲ್ಲ ಪಿಎಚ್ಸಿಗಳನ್ನು ಪರಿಶೀಲಿಸಿ ವರದಿ ನೀಡಲು ಟಿಎಚ್ಒಗೆ ತಾಕೀತು
ಕನ್ನಡಪ್ರಭ ವಾರ್ತೆ ದಾವಣಗೆರೆ
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಕೆಲ ಕಡೆ ವೈದ್ಯರು ಔಷಧಿ ಲಭ್ಯ ಎಂದು ಹೊರಗಿನಿಂದ ಔಷಧಿ-ಮಾತ್ರೆ ತರಲು ಚೀಟಿಗಳನ್ನು ಬರೆದು ಕೊಡುತ್ತಿದ್ದಾರೆ. ಇಂಥದ್ದಕ್ಕೆ ತಾಲೂಕು ಆರೋಗ್ಯಾಧಿಕಾರಿ ಅವಕಾಶ ಕೊಡದೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು ಮಾಡಿದರು.ನಗರದ ಪಶು ಆಸ್ಪತ್ರೆ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ತಾ.ಪಂ. ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರವು ಪಿಎಚ್ಸಿಗಳ ಕಚೇರಿ ನಿರ್ವಹಣೆಗೆ ನೀಡುವ ₹1.75 ಲಕ್ಷ ಹಣವನ್ನು ವೈದ್ಯಾಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೊರಗಡೆಯಿಂದ ತರಲು ಔಷಧ ಚೀಟಿ ಬರೆದುಕೊಡುತ್ತಿರುವ ಪಿಎಚ್ಸಿಗಳ ವೈದ್ಯರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ. ಜನರ ಜೀವನದ ಜೊತೆಗೆ ಚೆಲ್ಲಾಟ ಆಡಬೇಡಿ. ತಕ್ಷಣವೇ ಎಲ್ಲ ಪಿಎಚ್ಸಿಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿ, ವರದಿ ನೀಡಿ. ಖಾಸಗಿ ನರ್ಸಿಂಗ್ ಹೋಂ ಮುಖ್ಯಸ್ಥರ ಸಭೆ ಕರೆಯಿರಿ ಎಂದು ಟಿಎಚ್ಒಗೆ ಸೂಚನೆ ನೀಡಿದರು.
- - - (ಬಾಕ್ಸ್)
* ತಬ್ಬಿಬ್ಬಾದ ಅಧಿಕಾರಿ!ದಾವಣಗೆರೆ: ಕಳೆದ 4 ವರ್ಷದಿಂದ ಎಲ್ಲೆಲ್ಲಿ ಸಸಿಗಳನ್ನು ನೆಟ್ಟಿದ್ದೀರಿ, ಎಲ್ಲೆಲ್ಲಿ ಇಂಗುಗುಂಡಿಗಳನ್ನು ತೋಡಿಸಿದ್ದೀರಿ, ಎಷ್ಟೆಷ್ಟು ಗಿಡಗಳನ್ನು ಬೆಳೆಸಿದ್ದೀರಿ, ಎಲ್ಲೆಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೀರಿ, ಎಷ್ಟೆಷ್ಟು ಹಣ ಖರ್ಚಾಗಿದೆ. ಈ ಬಗ್ಗೆ ಸಮಗ್ರ ವರದಿ ಕೊಡುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಪ್ರಶ್ನಿಸುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿ ಕ್ಷಣ ಕಕ್ಕಾಬಿಕ್ಕಿಯಾಗಿ ತಡವರಿಸಿದರು.
- - --7ಕೆಡಿವಿಜಿ5: ದಾವಣಗೆರೆಯಲ್ಲಿ ತಾಪಂ ಪ್ರಗತಿ ಪರಿಶೀಲನಾ ಸಭೆ ವೇಳೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಲೂಕಿನ 42 ಗ್ರಾಪಂ ಪೈಕಿ 8 ಗ್ರಾಪಂ ಶೇ.100 ಕರ ವಸೂಲಿ ಮಾಡಿದ ಹಿನ್ನೆಲೆ ಪಿಡಿಒಗಳನ್ನು ಸನ್ಮಾನಿಸಿದರು. -7ಕೆಡಿವಿಜಿ6: ದಾವಣಗೆರೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ತಾಪಂ ಪ್ರಗತಿ ಪರಿಶೀಲನಾ ಸಭೆ ನಡೆಯಿತು.