ರೇವಣ್ಣ ಬಗ್ಗೆ ಬಿಜೆಪಿ ಮಹಿಳಾ ಮೋರ್ಚಾ ಯಾಕೆ ಸುಮ್ಮನಿದೆ: ಮಹಿಳಾ ಕಾಂಗ್ರೆಸ್ ಪ್ರಶ್ನೆ

KannadaprabhaNewsNetwork |  
Published : May 04, 2024, 12:30 AM IST
ಕಾಂಗ್ರೆಸ್3 | Kannada Prabha

ಸಾರಾಂಶ

ಇತ್ತೀಚೆಗೆ ನಡೆದ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರು ಲೋಕಸಭಾ ಚುನಾವಣೆಗೆ ಅಸ್ತ್ರವಾಗಿಸಿಕೊಂಡರು. ಆದರೆ ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ನಡೆಸಿದ ಅಮಾನುಷ ಕೃತ್ಯದ ಬಗ್ಗೆ ಬಿಜೆಪಿ ಚಕಾರವೆತ್ತುತ್ತಿಲ್ಲ ಎಂದು ಗೀತಾ ವಾಗ್ಲೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಎಸಗಿದ ಕುಕೃತ್ಯಕ್ಕೆ ಕಠೋರ ಶಿಕ್ಷೆಯಾಗಬೇಕು. ಇಂತಹ ಹೇಯ ಕೃತ್ಯವೆಸಗಿದನ ವಿರುದ್ಧ ಬಿಜೆಪಿಯಾಗಲಿ, ಬಿಜೆಪಿಯ ಮಹಿಳಾ ಮೋರ್ಚಾವಾಗಲಿ ಒಂದು ಶಬ್ದವು ಮಾತನಾಡದೇ ಇರುವುದು ಯಾಕೆ? ಎಂದು ಮಹಿಳಾ ಕಾಂಗ್ರೆಸ್ ಮುಖಂಡೆ ಗೀತಾ ವಾಗ್ಲೆ ಪ್ರಶ್ನಿಸಿದರು.ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇತ್ತೀಚೆಗೆ ನಡೆದ ನೇಹಾ ಕೊಲೆ ಪ್ರಕರಣವನ್ನು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರು ಲೋಕಸಭಾ ಚುನಾವಣೆಗೆ ಅಸ್ತ್ರವಾಗಿಸಿಕೊಂಡರು. ಆದರೆ ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ನಡೆಸಿದ ಅಮಾನುಷ ಕೃತ್ಯದ ಬಗ್ಗೆ ಬಿಜೆಪಿ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು.

ತಾನು ಏನು ಮಾಡಿದರೂ ಯಾರು ಏನು ಮಾಡಲಾಗದು ಎಂಬ ದುರಂಹಕಾರದಿಂದ ಪ್ರಜ್ವಲ್ ರೇವಣ್ಣ, ನೂರಾರು ಸ್ತ್ರೀಯರ ಶೀಲಹರಣ ಮಾಡಿದ್ದಾನೆ. ಆತನಿಗೆ ಲೋಕಸಭೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹಾಸನದ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರೂ, ಬಿಜೆಪಿ, ಜೆಡಿಎಸ್ ನೊಂದಿಗಿನ ಮೈತ್ರಿಯೊಂದಿಗೆ ಟಿಕೆಟ್ ನೀಡಿದೆ‌. ಈಗ ಇಷ್ಟು ದೊಡ್ಡ ಪ್ರಕರಣದ ಬಗ್ಗೆ ಧ್ವನಿ ಎತ್ತದ ಬಿಜೆಪಿಯೇ ರೇವಣ್ಣ ಅವರನ್ನು ರಕ್ಷಿಸುತ್ತಿದೆ ಎಂದು ಗುಮಾನಿ ಹುಟ್ಟುತ್ತಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕಿಯರಾದ ಅಮೃತಾ ಕೃಷ್ಣಮೂರ್ತಿ, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ವರೋನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ