ಶಿಗ್ಗಾವಿಯಲ್ಲಿ ಜೋಶಿ ಪರವಾಗಿ ಪತ್ನಿ ಮತಯಾಚನೆ

KannadaprabhaNewsNetwork |  
Published : Apr 24, 2024, 02:21 AM IST
ಪೊಟೋ ಪೈಲ್ ನೇಮ್ ೧೯ಎಸ್‌ಜಿವಿ೪  ತಾಲೂಕಿನ  ಬಂಕಾಪುರ  ಪಟ್ಟಣದ ಬಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪರ ಅವರ ಪತ್ನಿ ಜ್ಯೋತಿ ಜೋಶಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಮತಯಾಚನೆ ನಡೆಸಿದರು.  | Kannada Prabha

ಸಾರಾಂಶ

ಧಾರವಾಡ ಲೋಕಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಅವರ ಪತ್ನಿ ಜ್ಯೋತಿ ಜೋಶಿ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತೆಯರು ಶಿಗ್ಗಾವಿಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಮತಯಾಚನೆ ನಡೆಸಿದರು.

ಶಿಗ್ಗಾವಿ: ಧಾರವಾಡ ಲೋಕಸಭಾ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಅವರ ಪತ್ನಿ ಜ್ಯೋತಿ ಜೋಶಿ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತೆಯರು ಶಿಗ್ಗಾವಿಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಮತಯಾಚನೆ ನಡೆಸಿದರು.

ಯಲ್ಲಮ್ಮದೇವಿ, ವಿಠ್ಠಲ್-ರುಕ್ಮಿಣಿ , ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅರಳಲೆಹಿರೇಮಠ, ಕೆಂಡದಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಮತಯಾಚನೆಗೆ ಚಾಲನೆ ನೀಡಿದರು. ಪಾದಯಾತ್ರೆ ಮೂಲಕ ಪ್ರಭಂಜನ ಗಾರ್ಮೆಂಟ್ಸ್, ನೇಕಾರ ಓಣಿ, ಖನೋಜಗಲ್ಲಿ, ಸುಂಕದಕೇರಿ, ಕೊಟ್ಟಿಗೇರಿ, ಬ್ರಾಹ್ಮಣ ಗಲ್ಲಿ, ಶಹಾಬಜಾರ ಸೇರಿದಂತೆ ವಿವಿಧಡೆ ಸಂಚರಿಸಿ ಬಿಜೆಪಿ ಅಭಿವೃದ್ಧಿ ಕಾರ್ಯಗಳ ಭಿತ್ತಿಪತ್ರಗಳನ್ನು ಹಂಚುವ ಮೂಲಕ ಮತಯಾಚಿಸಿ ಕಮಲದ ಗುರುತಿಗೆ ಮತಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ಮೋದಿ ಅವರ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಜ್ಯೋತಿ ಜೋಶಿ, ನರೇಂದ್ರ ಮೋದಿ ಅವರು ಕಳೆದ ೧೦ ವರ್ಷಗಳಲ್ಲಿ ಹಲುವಾರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಶೇಷವಾಗಿ ಕೋವಿಡ್ ವೇಳೆ ೧೪೨ ಕೋಟಿ ಜನರಿಗೆ ಉಚಿತ ಲಸಿಕೆ ನೀಡಿ ಜೀವ ಕಾಪಾಡಿದ ಮಹಾನ್ ವ್ಯಕ್ತಿ. ಉಚಿತ ಅಕ್ಕಿ ಜತೆಗೆ ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು. ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಬಿಳಿಕುದರಿ, ಸಂಜನಾ ರಾಯ್ಕರ, ಲಕ್ಷ್ಮೀ ತೋಟದ, ಎನ್.ವ್ಹಿ. ಪದ್ಮಾ, ಲತಾ ಸಂಶಿ, ಅನ್ನಪೂರ್ಣ ವಳಗೇರಿ, ಲಕ್ಷ್ಮೀ ಕಮ್ಮಾರ, ನೀಲವ್ವ ಕಾಲವಾಡ, ಜ್ಯೋತಿ ಉಂಕಿ, ನೀಲವ್ವ ಏಳುಮೊಗ್ಗದ, ಲಲಿತವ್ವ ಏಳುಮೊಗ್ಗದ, ಲಲಿತಾ ಕೋತಂಬ್ರಿ, ನಿರ್ಮಲಾ ರುದ್ರಾಕ್ಷಿ, ಜ್ಯೋತಿ ರುದ್ರಾಕ್ಷಿ, ಬಸವರಾಜ ನಾರಾಯಣಪುರ, ಮಂಜುನಾಥ ತಳವಾರ, ಹೊನ್ನಪ್ಪ ಹೂಗಾರ, ಸೋಮಶೇಖರ ಗೌರಿಮಠ, ರಾಜು ಟೋಪಣ್ಣವರ, ಹರೀಶ ಭವಾನಿ, ಯಲ್ಲಪ್ಪ ಸುಂಕದ, ಮೋಹನ ಮಿರಜಕರ, ಶಿವು ಬುದ್ದಪ್ಪನವರ, ಮಧು ಜಂಗಳಿ, ಮಹೇಶ ಕುರಂದವಾಡ, ಸಿದ್ದಪ್ಪ ಹರವಿ, ಕುಮಾರ ಉಂಕಿ, ವಿಲಾಸ ನಾರಾಯಣಪುರ, ಬಾಬುರಾವ ಹಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್