ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಚನ್ನಮ್ಮನ ಸಮಾಧಿಗೆ ಹೂವು ಮಾಲೆ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ದುಬೈಗೆ ಯಾಕೆ ಹೋಗುತ್ತಾರೆ ಅಪ್ಪಾ ಮಕ್ಕಳು? ವಿದೇಶದಲ್ಲಿ ಆಸ್ತಿ ಮಾಡಿದವರಿಗೆ ನೈತಿಕತೆ ಇಲ್ಲ. ವಿದೇಶದಲ್ಲಿ ಆಸ್ತಿ ಇಲ್ಲ ಅಂತಾ ಡಿಕ್ಲೇರ್ ಮಾಡಲಿ. ಯಡಿಯೂರು ಸಿದ್ದಲಿಂಗೇಶ್ಬರ ಬಳಿ ಹೋಗಿ ಆಣೆ ಮಾಡಲಿ ಎಂದು ಅವರು ಸವಾಲು ಹಾಕಿದರು.
ಚನ್ನಮ್ಮನ ನಾಡು ಬೆಳಗಾವಿ. ಇಲ್ಲಿಂದಲೇ ಕ್ರಾಂತಿ ಪ್ರಾರಂಭವಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರು ನಮಗೆ ಆದರ್ಶ. ಅಕ್ಬರ್ ನಮಗೆ ಆದರ್ಶ ಅಲ್ಲಾ. ಹೈಕಮಾಂಡ್ ಯಡಿಯೂರಪ್ಪ, ವಿಜಯೇಂದ್ರ ಅವರನ್ನು ತಲೆ ಮೇಲೆ ಕೂಡಿಸಿಕೊಂಡಿರಬಹುದು. ಚುನಾವಣೆ ಬರಲಿ ಆಗ ಮಾತನಾಡುತ್ತೇನೆ ಎಂದು ಗುಡುಗಿದರು.ಕಾಶಪ್ಪನವರ ವಿರುದ್ಧ ಗುಡುಗು:
ಇಡೀ ರಾಜ್ಯದಲ್ಲಿ ಎಲ್ಲಾ ಕಡೆಯಿಂದ ಬೆಂಬಲ ಬರುತ್ತಿದೆ. ಪಕ್ಷ ಕಟ್ಟಿದರೆ ಕಾಂಗ್ರೆಸ್ಗೆ ಅನುಕೂಲ ಆಗುತ್ತದೆ. ಹೀಗಾಗಿ ಯೋಚನೆ ಮಾಡುತ್ತಿದ್ದೇವೆ. ನಾಳೆ ಪಕ್ಷ ಕಟ್ಟಿದ ಮೇಲೆ ಕಾಂಗ್ರೆಸ್ ಕಡೆ ಹಣ ಪಡೆದು ಕಟ್ಟಿದ್ದಾನೆ ಅಂತಾರೆ. ಬಿಜೆಪಿ ಕಟ್ಟಿದವರು ನಾವೇ ಇದ್ದೇವೆ. ಚಲುವಾದಿ ನಾರಾಯಣಸ್ವಾಮಿ ಕಟ್ಟಿದ್ದಾರಾ? ವಿಜಯೇಂದ್ರನ ವೃತವನ್ನು ಪಿ.ರಾಜೀವ್ ಓದುತ್ತಿದ್ದಾನೆ. ಅವನ ಭಾಷಣ ನಾವು ಕೇಳಬೇಕು. ಎಂತಾ ದುರ್ದೈವ. ವಿಜಯೇಂದ್ರ ಸುತ್ತಮುತ್ತ ಎಂತ ನಾಯಕರು ಇದ್ದಾರೆ. ಪ್ರೀತಮ್ ಗೌಡ ಯಾವಾಗ ಕಾಂಗ್ರೆಸ್ ಹೋಗ್ತಾನೆ ಗೊತ್ತಿಲ್ಲ. ಹೈಕಮಾಂಡ್ಗೆ ತಲೆ ಬಾಗಿದ್ದೇವೆ ಅನ್ನೋ ಡೈಲಾಗ್ ಕಾಮನ್ ಇದೆ. ಟಿಕೆಟ್ ಸಿಗದಿದ್ರೆ ಬೇರೆ ಪಕ್ಷಕ್ಕೆ ಹೋಗ್ತಾರೆ ಎಂದು ಕಿಡಿಕಾರಿದರು.
ಯತ್ನಾಳ್ ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಮೆದುಳು ಯಾರ ಬಳಿ ಇದೆಯೋ ಗೊತ್ತಿಲ್ಲ. ಹೃದಯ ಯಾರ ಬಳಿ ಇದೆಯೋ ಗೊತ್ತಿಲ್ಲ. ಇನ್ನೇನಾದ್ರೂ ಬಾಯಿ ಬಿಟ್ರೇ ಇನ್ನೂ ಬಹಳ ಮುಂದಕ್ಕೆ ಹೋಗುತ್ತೇನೆ. ತಮ್ಮ ಇತಿಮಿತಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಇರಲಿ. ಗೋಕಾಕ್ದಲ್ಲಿ ಮೀಸಲಾತಿ ಕೊಡದಿದ್ರೆ ರಾಜೀನಾಮೆ ಕೊಡುತ್ತೇನೆ ಅಂದರು. ಬೆಳಗಾವಿಯ ಹೋರಾಟದಲ್ಲಿ ಲಿಂಗಾಯತರನ್ನು ಹೊಡೆಸಿದರು. ಲಾಠಿ ಚಾರ್ಜ್ ಈಗ ನ್ಯಾಯಾಂಗ ತನಿಖೆಯಾಗುತ್ತಿದೆ. ಎಡಿಜಿಪಿ ಹಿತೇಂದ್ರಗೆ ಮನುಷ್ಯತ್ವ ಇಲ್ಲ ಎಂದು ಹೇಳಿದರು.
ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಅವರು ಲಿಂಗಾಯತ ಪಂಚಮಸಾಲಿ ಸಮಾಜದ ಬಹು ದೊಡ್ಡ ಶಕ್ತಿ. ಆ ಶಕ್ತಿ ಹತ್ತಿಕ್ಕಲು ಯಾರಿಂದಲೂ ಆಗದು. ಕೇಂದ್ರ ಬಿಜೆಪಿ ನಾಯಕರು ಕೂಡಲೇ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ಮೇ 11ಕ್ಕೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟಕ್ಕೆ ಸಮಾಜದ ಎಲ್ಲ ಜನತೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.