ಸ್ವಾಭಿಮಾನಿಯಾದ ಮನೆ ಮಗನ ಗೆಲ್ಲಿಸಿ

KannadaprabhaNewsNetwork |  
Published : Apr 20, 2024, 01:02 AM IST
ಕ್ಯಾಪ್ಷನಃ19ಕೆಡಿವಿಜಿ40,41ಃದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಹರಪನಹಳ್ಳಿ ತಾ.ದುಗ್ಗಾವತಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾದರು. | Kannada Prabha

ಸಾರಾಂಶ

ನನ್ನದು ಸ್ವಾಭಿಮಾನದ ಹೋರಾಟ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದವನು. ಬಡಕುಟುಂಬದ ಹಿನ್ನೆಲೆಯಿಂದ ಬಂದವನು. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡುವ ಕನಸು ಕಂಡಿದ್ದೇನೆ. ನನ್ನ ಗೆಲುವು ಸ್ವಾಭಿಮಾನದ ಗೆಲುವಾಗಲಿದ್ದು, ನಿಮ್ಮ ಗೆಲುವು ಆಗಲಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಕಕ್ಕರಗೊಳ್ಳ ಹೇಳಿದ್ದಾರೆ.

- ಹರಪನಹಳ್ಳಿ ಪ್ರಚಾರ ವೇಳೆ ಪಕ್ಷೇತರ ಅಭ್ಯರ್ಥಿ ವಿನಯಕುಮಾರ ಮನವಿ

- ದುಗ್ಗಾವತಿಯಲ್ಲಿ ಆಂಜನೇಯ ಸ್ವಾಮಿ ರಥೋತ್ಸವ, ಓಕಳಿ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನನ್ನದು ಸ್ವಾಭಿಮಾನದ ಹೋರಾಟ. ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದವನು. ಬಡಕುಟುಂಬದ ಹಿನ್ನೆಲೆಯಿಂದ ಬಂದವನು. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡುವ ಕನಸು ಕಂಡಿದ್ದೇನೆ. ನನ್ನ ಗೆಲುವು ಸ್ವಾಭಿಮಾನದ ಗೆಲುವಾಗಲಿದ್ದು, ನಿಮ್ಮ ಗೆಲುವು ಆಗಲಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಕಕ್ಕರಗೊಳ್ಳ ಹೇಳಿದರು.

ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಓಕಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಮನೆ ಮುಂದೆ ಹಿಂದೆಯೂ ಕಾದಿದ್ದೀರಾ, ಮುಂದೆಯೂ ಕಾಯುವಂಥ ಪರಿಸ್ಥಿತಿ ಬರುತ್ತದೆ. ನಾನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಸೇವೆ ಮಾಡುವುದಕ್ಕೋಸ್ಕರ ಬಂದಿದ್ದೇನೆ. ನನಗೆ ಮತ ನೀಡಿ ಎಂದರು.

ಕಾಂಗ್ರೆಸ್‌ನಲ್ಲಿ ಮಾವ ಶಾಸಕರು. ಪತಿ ಶಾಸಕರು ಹಾಗೂ ಸಚಿವರು. ಅವರ ಮನೆತನದವರೇ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಲ್ಲಿ ಜಿ.ಎಂ.ಸಿದ್ದೇಶ್ವರ ಕುಟುಂಬವೇ 30 ವರ್ಷಗಳಿಂದ ಲೋಕಸಭೆಗೆ ಟಿಕೆಟ್ ಪಡೆದು ಸ್ಪರ್ಧೆ ಮಾಡುತ್ತಿದೆ. ಹಾಗಾದರೆ, ಪಕ್ಷಕ್ಕಾಗಿ ದುಡಿದ, ಜೀವನವನ್ನೇ ಮುಡುಪಾಗಿಟ್ಟವರ ಕಥೆ ಏನು? ಯುವಕರಿಗೆ ಅವಕಾಶ ಸಿಗಬೇಕು. ರಾಜಕಾರಣದಲ್ಲಿ ಹೊಸ ಗಾಳಿ ಬೀಸುವಂತಾಗಬೇಕು. ಈ ಬದಲಾವಣೆ ಈ ಚುನಾವಣೆಯಿಂದಲೇ ಆರಂಭ ಆಗಲಿ ಎಂದು ತಿಳಿಸಿದರು.

ದುಗ್ಗಾವತಿ ಗ್ರಾಮದ ಎಲ್ಲ ಸಮಾಜಗಳ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ವಿನಯಕುಮಾರ್ ಅವರಿಗೆ ಬೆಂಬಲ ನೀಡಿದರು.

- - - -19ಕೆಡಿವಿಜಿ40,41ಃ:

ಹರಪನಹಳ್ಳಿ ತಾಲೂಕು ದುಗ್ಗಾವತಿ ಗ್ರಾಮದ ಆಂಜನೇಯಸ್ವಾಮಿ ರಥೋತ್ಸವದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್‌ ಪಾಲ್ಗೊಂಡರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ