- ಇಂದಿಗೂ ವಿದ್ಯುತ್ ಕಾಣದ ಕುಗ್ರಾಮಗಳು । 4 ತಿಂಗಳಲ್ಲಿ ₹7.38 ಕೋಟಿ ನಷ್ಟ,
ಸತತ ಮಳೆ, ಭಾರೀ ಗಾಳಿಯನ್ನು ಕೆಲವು ದಿನಗಳ ಹಿಂದೆ ಕಂಡ ಕಾಫಿಯ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 4303 ವಿದ್ಯುತ್ ಕಂಬಗಳು ಧರೆಗುರುಳಿವೆ. ಮೆಸ್ಕಾಂಗೆ ಈವರೆಗೆ ₹7.38 ಕೋಟಿ ರು. ನಷ್ಟವಾಗಿದೆ.
ಜಿಲ್ಲೆಯ 9 ತಾಲೂಕುಗಳ ಪೈಕಿ ಅತಿ ಹೆಚ್ಚು ಮಳೆ ಬಿದ್ದಿರುವುದು ಚಿಕ್ಕಮಗಳೂರು ತಾಲೂಕಿನಲ್ಲಿ ಅಂದರೆ, ಶೇ.135 ರಷ್ಟು ಮಳೆಯಾಗಿದೆ. ಅದೇ ಪ್ರಮಾಣದಲ್ಲಿ ಮೆಸ್ಕಾಂಗೆ ಸಂಬಂಧಿಸಿದಂತೆ ಇದೊಂದೇ ತಾಲೂಕಿನಲ್ಲಿ 1706 ವಿದ್ಯುತ್ ಕಂಬಗಳು ಬಿದ್ದಿದ್ದರೆ, 34.12 ಕಿ.ಮೀ. ವಿದ್ಯುತ್ ತಂತಿಗಳಿಗೆ ಹಾನಿ ಸಂಭವಿಸಿದೆ.ಕಳೆದ ಒಂದು ವಾರದಿಂದ ಮಳೆ ಇಳಿಮುಖವಾಗಿದೆ. ಆದರೆ, ಗಾಳಿಯ ಆರ್ಭಟ ಇಂದಿಗೂ ಮುಂದುವರಿದಿದೆ. ಚಿಕ್ಕ ಮಗಳೂರು ನಗರದಲ್ಲಿ ಗಂಟೆಗೆ 35 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿತ್ತು. ಮನೆಗಳಿಂದ ಹೊರಗೆ ಬರಲು ಜನರು ಭಯ ಪಡುತ್ತಿದ್ದರೆ, ದ್ವಿಚಕ್ರ ವಾಹನಗಳಲ್ಲಿ ಸಾಗುವಾಗ ಬೈಕ್ಗಳು ಹತೋಟಿಗೆ ಸಿಗದೆ ರಸ್ತೆಗಳ ಮೇಲೆ ತೇಲುವಂತೆ ಮುಂದೆ ಸಾಗುತ್ತಿದ್ದವು.
-- ಬಾಕ್ಸ್--
ತಾಲೂಕುಹಾಳಾಗಿರುವಬದಲಾಯಿಸಿರುವ ಕಂಬಗಳು
ಚಿಕ್ಕಮಗಳೂರು17061504
ಮೂಡಿಗೆರೆ361349
ಕಳಸ292 289
ಕಡೂರು227 227
---------------------------------------------------ತರೀಕೆರೆ105 105
-----------------------------------------------------ಅಜ್ಜಂಪುರ52 52
--------------------------------------------------ಎನ್.ಆರ್.ಪುರ675 536
----------------------------------------------------------------------------ಕೊಪ್ಪ 620462
----------------------------------------------------ಶೃಂಗೇರಿ 265 256
-----------------------------------------------ಒಟ್ಟು 43033780
--------------------------------------------31 ಕೆಸಿಕೆಎಂ 1ಇತ್ತೀಚೆಗೆ ಸೇರಿದ ಭಾರೀ ಮಳೆ ಹಾಗೂ ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬ.