ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಟಿ. ಬೇಗೂರು ಗ್ರಾಮದಲ್ಲಿ ಭೀಮಕೇಸರಿ ಕಬ್ಬಡಿ ಕ್ಲಬ್ನಿಂದ ಆಯೋಜಿಸಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಕ್ರೀಡಾಪಟುಗಳಿಗೆ ಶುಭಕೋರಿ ಮಾತನಾಡಿದರು.
ಕಬ್ಬಡಿ ದೇಶಿಯ ಕ್ರೀಡೆಯಾಗಿದ್ದು, ಯುವಜನತೆಯನ್ನು ಕ್ರೀಡೆಯಲ್ಲಿ ತೊಡಗಿಸುವ ಉದ್ದೇಶದಿಂದ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವ ಈ ಮುಖಂಡರ ಕಾರ್ಯ ಶ್ಲಾಘನೀಯ. ಸದಾ ಕ್ರೀಯಾಶೀಲರಾಗಿರುವ ತಾ.ಪಂ. ಮಾಜಿ ಸದಸ್ಯ ಮುನಿಯಪ್ಪ ಪಕ್ಷ ಸೇರ್ಪಡೆ ಆಗುತ್ತಿದ್ದಂತೆ ಸ್ವಗ್ರಾಮ ಅಭಿವೃದ್ಧಿ ವಿಚಾರ ಪ್ರಸ್ಥಾಪಿಸಿದ್ದು 2.5 ಕೋಟಿ ಅನುದಾನ, ಮುಖ್ಯಮಂತ್ರಿ ವಿಶೇಷ ಅನುದಾನ ಗ್ರಾಮಕ್ಕೆ ಬಿಡುಗಡೆ ಮಾಡಿದ್ದು ಕೆಲವೇ ದಿನಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುತ್ತೇನೆ ಎಂದರು.ಎನ್ಡಿಎ ಅಧ್ಯಕ್ಷ ಎಂ.ನಾರಾಯಣಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಕೇವಲ ಟಿವಿ, ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುತ್ತಿರುವುದರಿಂದ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೋಟೋ 5 : ಟಿ.ಬೇಗೂರು ಗ್ರಾಮದಲ್ಲಿ ಭೀಮಕೇಸರಿ ಕಬ್ಬಡಿ ಕ್ಲಬ್ನಿಂದ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಕ್ರೀಡಾಪಟುಗಳಿಗೆ ಶಾಸಕ ಎನ್. ಶ್ರೀನಿವಾಸ್ ಶುಭಕೋರಿದರು.