ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹಾರೈಸಿ ಮಹಾರುದ್ರಯಾಗ

KannadaprabhaNewsNetwork |  
Published : Mar 30, 2024, 12:48 AM IST
ಫೋಟೋ 29 ಟಿಟಿಎಚ್ 01: ಕಮ್ಮರಡಿಯಲ್ಲಿ ನಡೆದ ಮಹಾರುದ್ರಯಾಗದ ಪೂರ್ಣಾಹುತಿಯಲ್ಲಿ ಶಾಸಕ ಆರಗ ಜ್ಞಾನೇಂದ್ರರನ್ನು ಗೌರವಿಸಲಾಯ್ತು. ಲಕ್ಷ್ಮಿಶ್ರೀಕಾಂತ ಭಟ್, ವಿಶ್ವತೀರ್ಥ ಶಾಲೆಯ ಸುರೇಶ್ ಹಾಗೂ ದೇವಸ್ಥಾನದ ಅರ್ಚಕರು ಇದ್ದರು. | Kannada Prabha

ಸಾರಾಂಶ

ಹತ್ತು ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ಪ್ರಧಾನಿಯಾಗಿ ಸಮರ್ಥ ಆಡಳಿತ ನಡೆಸಿರುವ ನರೇಂದ್ರ ಮೋದಿಯವರು ಜಗತ್ತು ಭಾರತದ ಕಡೆಗೆ ಗಮನ ಹರಿಸುವಂತೆ ಮಾಡಿದ್ದಾರೆ. ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು. ದೇಶ ಸಮೃದ್ಧಿಯಾಗುವ ಜೊತೆಯಲ್ಲಿ ಲೋಕಕಲ್ಯಾಣವನ್ನೂ ಬಯಸಿ ಇಂದಿಲ್ಲಿ ನಡೆಸಿರುವ ಮಹಾರುದ್ರಯಾಗದ ಆಶಯ ಸಮಷ್ಟಿಯ ಹಿತವನ್ನೂ ಬಯಸಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ನಾಡಿನ ಧಾರ್ಮಿಕ ಮುಖಂಡರು ಮತ್ತು ಸಜ್ಜನರ ಶುಭಾಶೀರ್ವಾದ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತ. ಆ ಮೂಲಕ ಜಗತ್ತಿನಲ್ಲಿ ಭಾರತಮಾತೆಯ ಸ್ಥಾನ ಇನ್ನೂ ಎತ್ತರಕ್ಕೇರುವ ಭರವಸೆಯಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆಶಯ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗುವಂತೆ ಹಾರೈಸಿ ತಾಲೂಕಿನ ಕಮ್ಮರಡಿಯ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಅರ್ಚಕರಾದ ಕಮ್ಮರಡಿ ಶ್ರೀಕಾಂತ ಭಟ್ಟರ ನೇತೃತ್ವದಲ್ಲಿ ಗುರುವಾರ ನಡೆಸಿದ ಮಹಾರುದ್ರ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ದೇವಸ್ಥಾನದ ಗೌರವ ಸ್ವೀಕರಿಸಿ ಮಾತನಾಡಿದರು. ಹತ್ತು ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ಪ್ರಧಾನಿಯಾಗಿ ಸಮರ್ಥ ಆಡಳಿತ ನಡೆಸಿರುವ ನರೇಂದ್ರ ಮೋದಿಯವರು ಜಗತ್ತು ಭಾರತದ ಕಡೆಗೆ ಗಮನ ಹರಿಸುವಂತೆ ಮಾಡಿದ್ದಾರೆ. ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು. ದೇಶ ಸಮೃದ್ಧಿಯಾಗುವ ಜೊತೆಯಲ್ಲಿ ಲೋಕಕಲ್ಯಾಣವನ್ನೂ ಬಯಸಿ ಇಂದಿಲ್ಲಿ ನಡೆಸಿರುವ ಮಹಾರುದ್ರಯಾಗದ ಆಶಯ ಸಮಷ್ಟಿಯ ಹಿತವನ್ನೂ ಬಯಸಿದೆ. ಸಜ್ಜನರ ಹಾರೈಕೆ ಸಾಕಾರಗೊಳ್ಳುವ ನಂಬಿಕೆಯೂ ಇದೆ ಎಂದು ಹೇಳಿದರು.ಲೋಕ ಕಲ್ಯಾಣಾರ್ಥ ಯಾಗ:

ಕಾರ್ಯಕ್ರಮದ ಆಯೋಜಕ ಶ್ರೀಕಾಂತ ಭಟ್ಟರು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಮಾಡಿರುವ ಈ ಯಾಗದ ಬಹು ಮುಖ್ಯ ಉದ್ದೇಶ ದೇಶದಲ್ಲಿ ಮಳೆ ಬೆಳೆ ಸಮೃದ್ಧಿಯಾಗುವ ಜೊತೆಗೆ ಭಯೋತ್ಪಾದನೆ ನಾಶವಾಗಬೇಕಿದೆ. ಭಾರತ ಲೋಕ ಗುರುವಾಗುವ ನಿಟ್ಟಿನಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಸದುದ್ದೇಶದಿಂದ ಈ ಧಾರ್ಮಿಕ ಕಾರ್ಯ ನಡೆಸಲಾಗಿದೆ. ಸಕಲರಿಗೂ ಸನ್ಮಂಗಳವಾಗಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!