ಕನ್ನಡಪ್ರಭ ವಾರ್ತೆ ಹಾಸನ
ವಿಶೇಷವಾಗಿ ರಾಜ್ಯದಲ್ಲಿ ನಾವೆಲ್ಲಾ ಹಿಂದುಳಿದ ವರ್ಗಗಳಿಗೆ ಬರುತ್ತೇವೆ. ಹಿಂದುಳಿದ ವರ್ಗದಲ್ಲಿ ೧೦೨ ಸಮಾಜಗಳು ಬರುತ್ತದೆ. ನೇಕಾರ ಸಮಾಜದಲ್ಲಿಯೇ ೨೯ ಸಮುದಾಯಗಳು ಬರುತ್ತದೆ. ಅಷ್ಟನ್ನು ಒಟ್ಟಾಗಿ ಬೆಳೆಯುವ ವಾತಾವರಣ ತರುವ ಬಗ್ಗೆ ಚಿಂತನೆ ಮಾಡಿದಾಗ ಮಹಿಳಾ ಶಕ್ತಿಗೂ ಕೂಡ ಅವಕಾಶ ಕೊಡಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ೨೯ ಸಮುದಾಯಗಳು ಇದೆ ಎಂದು ಅಧಿಕೃತವಾಗಿ ದಾಖಲೆ ಇದ್ದರೂ ಸಹ ನಮಗೆ ಕರ್ನಾಟಕದಲ್ಲಿ ೧೧ ಸಮುದಾಯಗಳು ಮಾತ್ರ ಲೆಕ್ಕಕ್ಕೆ ಸಿಕ್ಕಿವೆ. ಉಳಿದ ೧೮ ಸಮುದಾಯಗಳು ಎಲ್ಲಿದೆ ಎಂದು ಕೇಳಿದರೂ ಸಹ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಕಾಮಮೂರ್ತಿ ಅಂಬಾದಾಸ್, ಅಖಿಲ ಭಾರತ ಕುರುಹಿನಶೆಟ್ಟಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ದೇವಿಕಾ ಭೂಷಣ್, ಹಾಸನ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ ರಂಗಶೆಟ್ಟಿ, ನೇಕಾರರ ಸಮುದಾಯಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಾಗವೇಣಿ, ರಾಜ್ಯ ನೇಕಾರ ಸಮುದಾಯಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಮಾ ಜಗದೀಶ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ಕೃಷ್ಣಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಲತಾ ಇಂದ್ರೇಶ್, ಬೆಳ್ಳಿಚುಕ್ಕಿ ವೀರೇಂದ್ರ, ಯಶೋಧ ಟ್ರಸ್ಟ್ ಅಧ್ಯಕ್ಷೆ ವಾಣಿಶೆಟ್ಟಿ, ಡಾ. ಶೈಲಜಾ ಉಪನ್ಯಾಸಕಿ ಬಿ.ಆರ್. ಮಾಲತಿ, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ರುಕ್ಮಿಣಿ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಸುನೀತ ಮನೋಜ್ ಕುಮಾರ್, ಸ್ವ-ಸಹಾಯ ಸಂಘದ ಅಧ್ಯಕ್ಷೆ ನಮಿತ ಪ್ರಸಾದ್, ಕಾರ್ಯದರ್ಶಿ ಕೆ.ಎಚ್. ಪ್ರೇಮ, ಸಹ ಕಾರ್ಯದರ್ಶಿ ತ್ರಿವೇಣಿ, ಖಜಾಂಚಿ ಇಂದ್ರ ಮಂಜುನಾಥ್, ವೀಣಾ, ಕುಮಾರಿ, ತುಳಸಿ, ಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.