ಕನ್ನಡಪ್ರಭ ವಾರ್ತೆ ಇಂಡಿ
ಹೊಸ ಗ್ರಾಮದಲ್ಲಿ ಸುಮಾರು 300 ಮನೆಗಳಿದ್ದು, ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮದಲ್ಲಿ ಕೇವಲ ಒಂದು ಬಾವಿ ಇದ್ದು, ಕೇವಲ 15 ನಿಮಿಷ ಮಾತ್ರ ನೀರು ಬರುತ್ತದೆ. ನೀರು ಸಿಗದಿದ್ದರೆ ಸುತ್ತಮುತ್ತಲಿನ ತೋಟಗಳಿಗೆ ಅಲೆದಾಡಿ ನೀರು ತರಬೇಕಾದ ಪರಿಸ್ಥಿತಿ ಉಂಟಾಗಿದೆ. ಮಹಿಳೆಯರಿಗೆ, ವೃದ್ಧರಿಗೆ ತೀವ್ರ ತೊಂದರೆ ಆಗಿದೆ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡರಾದ ಅಯೂಬ ನಾಟೀಕರ, ಬಾಬು ಕಾಂಬಳೆ ಮಾತನಾಡಿದರು. ಜೆಡಿಎಸ್ ಮುಖಂಡರಾದ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಡಾ.ರಮೇಶ ರಾಠೋಡ, ಬಾಳು ರಾಠೋಡ, ಬಾಬು ಕಾಂಬಳೆ, ಶರಣು ಕಾಂಬಳೆ, ಶಿವಾನಂದ ಹೊಸಮನಿ, ಉಮರ ಮುಜಾವರ, ಅಸಾದುಲ್ಲಾ ಮುಜಾವರ, ಗಂಗಾಧರ ಬೀರನಹಳ್ಳಿ, ಸಾಜನ ದೇಗಿನಾಳ, ಸಾಹೇಬಗೌಡ ಬೀರನಹಳ್ಳಿ, ಸಿದ್ದಪ್ಪ ಬೀರನಹಳ್ಳಿ, ದುಂಡಾಬಾಯಿ ಬೀರನಹಳ್ಳಿ, ಕಸ್ತೂರಿ ಬೀರನಹಳ್ಳಿ, ರಾಜಶ್ರೀ ಕೋರೆ, ನಿಂಗವ್ವ ಬೀರನಹಳ್ಳಿ, ದೇವಕಿ ಕೋರೆ ಇತರರು ಉಪಸ್ಥಿತರಿದ್ದರು.