ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸ ನೀಡಿ, ಮಹಿಳೆಯರು ಉತ್ತಮ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ತಾವು ಹುಟ್ಟಿದ ಮನೆ ಮತ್ತು ಸೇರಿದ ಮನೆಗಳಿಗೂ ಉತ್ತಮ ಹೆಸರು ತರುವಂತೆ ಕರೆ ನೀಡಿದರು.
ಮಹಿಳಾ ದಿನಾಚರಣೆಯ ಮಹತ್ವ ತಿಳಿಸಿ, ಆಧುನಿಕ ಕಾಲಘಟ್ಟದಲ್ಲೂ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ಹೆಣ್ಣಿ ಶೋಷಣೆ ನಿರಂತರವಾಗಿದೆ. ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಭೋಗದ ವಸ್ತುವಾಗಿಯೇ ಯೋಚಿಸುತ್ತಿದೆ ಎಂದು ವಿಷಾದಿಸಿದರು.ತಾರತಮ್ಯ ಸಮಾಜದ ನಡುವೆಯೂ ಹೆಣ್ಣು ತನ್ನ ಸಾಧನೆಗಳ ಮೂಲಕ ವಿಶ್ವದ ಗಮನ ಸೆಳೆದಿದ್ದಾಳೆ. ಬಾಹ್ಯಾಕಾಶ ವಾಸಮಾಡಿ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗಿದ ಸುನೀತಾ ವಿಲಿಯಂ ಇದಕ್ಕೆ ವರ್ತಮಾನದ ಉದಾಹರಣೆ. ಮಹಿಳೆಯರ ಶಿಕ್ಷಣಕ್ಕೆ ಹೋರಾಟ ನಡೆಸಿದ ಭಾರತ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಪುಲೇ, ಸಾಲು ಮರದ ತಿಮ್ಮಕ್ಕನಂತಹ ಸಾಧಕ ಮಹಿಳೆಯರು ನಮ್ಮ ಆದರ್ಶವಾಗಬೇಕು ಎಂದರು.
ಮಹಿಳೆಯರು ಶಾಸನ ಸಭೆಗಳನ್ನೂ ಪ್ರವೇಶಿಸಿ ದೇಶದ ಕಾನೂನು ರೂಪಿಸುವಲ್ಲಿ ಪಾಲು ಹೊಂದಿದ್ದಾರೆ. ವಿದ್ಯಾರ್ಥಿನಿಯರು ಮತದಾನದ ಬಗ್ಗೆ ಜಾಗೃತಿ ಹೊಂದಬೇಕು. ಮಹಿಳಾ ಅಭಿವ್ಯಕ್ತಿಗೆ ಇಂದು ಕಾನೂನಿನ ಬೆಂಬಲವಿದೆ. ನಮಗೆ ಸಿಕ್ಕಿರುವ ಮಹಿಳಾ ಸ್ವಾತ್ಯಂತ್ರ ದುರುಪಯೋಗವಾಗಬಾರದು ಎಂದರು.