ಹುಬ್ಬಳ್ಳಿ: ನಾರಿಶಕ್ತಿ ವಂದನೆ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಖಂಡಿಸಿ ಮೇ 1ರಂದು ಮಹಿಳಾ ಜನಾಕ್ರೋಶ ಸಭೆ ಆಯೋಜಿಸಲಾಗುತ್ತಿದೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್ ನೀತಿಯನ್ನು ಬಯಲು ಮಾಡುವ ಕಾರ್ಯಕ್ರಮ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕಳೆದ 40 ವರುಷಗಳಿಂದ ಮಹಿಳಾ ಮೀಸಲಾತಿ ನೀಡಬೇಕು. ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿಯಾಗಬೇಕು. ಈ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬುದು ಚರ್ಚೆ ನಡೆಯುತ್ತಲೇ ಇದೆ.
ಮೊದಲಿಗೆ ಈ ಕಾಯ್ದೆಯನ್ನು ದೇವೇಗೌಡರು ಜಾರಿಗೆ ತರಲು ಪ್ರಯತ್ನಿಸಿದರು, ಆಗ ದೇವೇಗೌಡರಿಗೆ ಪ್ರಧಾನಿಯಾಗಲು ಕಾಂಗ್ರೆಸ್ ಬೆಂಬಲವಿತ್ತು. ಆದರೆ ಈ ಕಾಯ್ದೆ ಜಾರಿಗೆ ತರಲು ಬೆಂಬಲಿಸಲಿಲ್ಲ. ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್ ನಮಗೆ ಸಪೋರ್ಟ್ ಮಾಡಲಿಲ್ಲ. 2009ರಲ್ಲಿ ಚುನಾವಣೆಯಾದ ನಂತರ ಯುಪಿಎ ಸರ್ಕಾರವಿತ್ತು ರಾಜ್ಯ ಸಭೆಯಲ್ಲಿ ಅವರಿಗೆ ಬಹುಮತ ವಿರಲಿಲ್ಲ. 2010ರಲ್ಲಿ ಆ ಬಿಲ್ ಬಿಜೆಪಿ ಬೆಂಬಲದಿಂದ ಪಾಸಾಯಿತು. ಅದನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ಜಾರಿಗೆ ತರಲಿಲ್ಲ. ಸುಷ್ಮಾ ಸ್ವರಾಜ ಅವರು ಇದ್ದಾಗ ಅದನ್ನು ಲೋಕಸಭೆಯಲ್ಲಿ ತನ್ನಿ ಅದನ್ನು ನಾವು ಬೆಂಬಲಿಸುತ್ತೇವೆ ಎಂದು ಸೋನಿಯಾ ಗಾಂಧಿ ಅವರಿಗೆ ಹೇಳಿದರೂ ಲೋಕಸಭೆಗೆ ತರಲಿಲ್ಲ ಎಂದರು2023ರಲ್ಲಿ ನಾವು ಈ ಕಾಯ್ದೆ ಮಂಡಿಸಿದಾಗ ಮುಂದೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ನವರು ಒಪ್ಪಿದರು. ಈಗ ಮತ್ತೆ ವಿರೋಧಿಸಿದ್ದಾರೆ. ಅವರ ವಿರೋಧದಿಂದಾಗಿ ಲೋಕಸಭೆಯಲ್ಲಿ ವಿಫಲವಾಯಿತು ಎಂದರು.
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಮಾತನಾಡಿ, ಮಹಿಳಾ ಮಿಸಲಾಯಿತಿಯನ್ನು ಸಹಿಸದ ಮತ್ತು ಮಹಿಳೆಯರು ರಾಜಕೀಯವಾಗಿ ಮುಂದೆ ಬರಬಾರದಂತೆ ಕಾಂಗ್ರೆಸ್ ದೊಡ್ಡ ಷಡ್ಯಂತ್ರದಿಂದ ಇದನ್ನು ಸೋಲಿಸಿದೆ. ಇದಕ್ಕೆ ತಕ್ಕ ಪಾಠ ಕಲಿಸಲು ಮಹಿಳೆಯರು ಮೇ.1 ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.