ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆವಿಪಕ್ಷದ ಬಗ್ಗೆ ಟೀಕೆ ಮಾಡಿ ಪ್ರಯೋಜನವಿಲ್ಲ, ಬದಲಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಕೆಲಸ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ತಾಲೂಕಿನ ಮೂಖಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಪಂ ನೂತನ ಕಟ್ಟಡ (ಸ್ವರಾಜ್ ಭವನ) ಉದ್ಘಾಟಿಸಿ ಮಾತನಾಡಿ ವಿಪಕ್ಷದವರ ಟೀಕೆ ಮಾಡಿ ಏನು ಪ್ರಯೋಜನವಿಲ್ಲ,ಇನ್ನೂಳಿದ ನಾಲ್ಕು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವೆ ಎಂದರು.ರಾಜ್ಯ ಸರ್ಕಾರ ಬಂದ ಬಳಿಕ ಐದು ಗ್ಯಾರಂಟಿ ಯೋಜನೆ ಜಾರಿಯಾಗಿವೆ ಶೇ.೯೫ ರಷ್ಟು ಗ್ಯಾರಂಟಿ ಕ್ಷೇತ್ರದ ಜನರಿಗೆ ತಲುಪಿವೆ. ಅಲ್ಲೊಂದು ಇಲ್ಲೊಂದು ತಾಂತ್ರಿಕ ಸಮಸ್ಯೆಯಿಂದ ತಲುಪಿಲ್ಲ, ತಲುಪದವರಿಗೂ ತಲುಪಿಸುವ ಕೆಲಸ ಆಗಲಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಕೆಲ ಯೋಜನೆಗಳಿಗೆ ಅನುಮೋದನೆ ದೊರೆತಿತ್ತು. ಅನುದಾನ ಬಿಡುಗಡೆಯಾಗಿರಲಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅನುದಾನ ಕೊಡುವೆ ಭರವಸೆ ನೀಡಿದ್ದು, ಕೆಲ ಅನುದಾನ ಬಂದಿದೆ ಎಂದರು.ಬರಗಾಲ ಎದುರಾದ ಈ ಸಮಯದಲ್ಲಿ ಇನ್ನೂ ಎರಡು, ಮೂರು ತಿಂಗಳ ಕಾಲ ಕುಡಿವ ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ ಅನುದಾನದಲ್ಲಿ ಬೋರ್ವೆಲ್ ಕೊರೆಸಲು ಸೂಚನೆ ನೀಡಲಾಗಿದೆ. ಕುಡಿವ ನೀರಿನ ಸಮಸ್ಯೆ ಎದುರಾದರೆ ಟೋಲ್ ಪ್ರೀ ನಂಬರ್ಗೆ ಕರೆ ಮಾಡಬೇಕು ಎಂದರು.ಕ್ಷೇತ್ರದ ಸಾವಿರಾರು ಮಂದಿ ಆನ್ ಲೈನ್ ಮೂಲಕ ಬೋರ್ ವೆಲ್, ವಾಹನಗಳ ಸಾಲ ಸೇರಿದಂತೆ ಇನ್ನಿತರ ಸಾಲಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಆದರೆ ಕ್ಷೇತ್ರಕ್ಕೆ ನಾಲ್ಕು ಬೊರ್ವೆಲ್ ಬಂದಿದೆ ಯಾರಿಗೆ ಕೊಡೋದು ಎಂಬುದು ತ್ರಾಸವಾಗಿದೆ. ಹೆಚ್ಚಿನ ಬೋರ್ವೆಲ್ ಬೇಕು ಎಂದು ಸಿಎಂಗೆ ಮನವಿ ಕೂಡ ಮಾಡಲಾಗಿದೆ ಎಂದರು.ಸಿಎಂ ಸಿದ್ದರಾಮಯ್ಯ ಪ್ರತಿ ಕ್ಷೇತ್ರಕ್ಕೆ ೨೫ ಕೋಟಿ ಅನುದಾನ ಕೊಟ್ಟಿದ್ದಾರೆ. ಬಂದ ಅನುದಾನದಲ್ಲಿ ಆದ್ಯತೆ ಮೇಲೆ ಅನುದಾನ ನೀಡಿದ್ದೇನೆ. ಇನ್ನೂ ಹೆಚ್ಚಿನ ಅನುದಾನ ಮುಂದಿನ ದಿನಗಳಲ್ಲಿ ಬರಲಿದೆ ಎಂದರು.ನರೇಗಾ ಕೆಲಸ ಮಾಡಿ: