ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಗೌಡೇನಹಳ್ಳಿಯಲ್ಲಿ ಶ್ರೀಸಂತ್ಯಮ್ಮದೇವಿ ನೂತನ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ದೇಗುಲ ಅಭಿವೃದ್ಧಿಗೆ ಧನ ಸಹಾಯ ನೀಡಿ ಮಾತನಾಡಿ, ದೇವರು ಪ್ರತಿಯೋರ್ವರ ಹೃದಯದಲ್ಲಿದ್ದು, ಇಂತಹ ಸತ್ಕಾರ್ಯಗಳಿಗೆ ಯುವಕರು ಭಾಗಿಯಾಗುವುದರಿಂದ ಸಧೃಡ ಸಮಾಜ ನಿರ್ಮಾಣವಾಗಲಿದೆ. ಭಗವಂತನ ನಾಮಸ್ಮರಣೆಯಿಂದ ಪಾಪಕರ್ಮಗಳಿಂದ ವಿಮುಕ್ತರಾಗಬಹುದು ಎಂದರು.
ಸತ್ಯ, ಧರ್ಮ, ದಯೆ ಮತ್ತು ಪ್ರೀತಿ ಎಂಬ ಮೌಲ್ಯದೊಂದಿಗೆ ಬದುಕಿದಾಗ ಜೀವನವೇ ದೇಗುಲವಾಗಲಿದೆ. ನೂತನ ದೇಗುಲ ನಿರ್ಮಾಣಗಳು ಗ್ರಾಮದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲಿದೆ. ದೇಗುಲದಲ್ಲಿ ಪರಮಾತ್ಮನ ನೋಡಿದರೆ ಸಾಲದು, ಮನೆಯಲ್ಲಿಯೂ ತಂದೆ-ತಾಯಿಗಳನ್ನು ದೇವರಂತೆ ಕಂಡು ಗೌರವಿಸಿ ಸತ್ಕರಿಸಿ, ಆರೈಕೆ ಮಾಡಿದಾಗ ಭಗವಂತ ಮೆಚ್ಚಿ ಆಶೀರ್ವದಿಸಲಿದ್ದಾನೆ ಎಂದರು.ನಮ್ಮ ಹಿರಿಯರು ಹಾಕಿಕೊಟ್ಟ ಸನಾತನ ಸಂಸ್ಕೃತಿ, ದೇಗುಲ ಪೂಜೆ, ಹಬ್ಬ ಹರಿದಿನಗಳು ಒಗ್ಗಟ್ಟಿನ ಸಂಕೇತವಾಗಿದೆ. ದ್ವೇಷಾಸೂಯೆ ಮರೆತು ಪ್ರೀತಿ ವಿಶ್ವಾಸ, ಶಾಂತಿ ಕಾಪಾಡುವ ಇಂತಹ ಸಂಸ್ಕೃತಿಯನ್ನು ಯುವ ಪೀಳಿಗೆ, ಮಕ್ಕಳಿಗೆ ಕಲಿಸುವ ಪರಿಪಾಠ ಮುಂದುವರೆಯಬೇಕು ಎಂದರು.
ಪೂಜಾ ಕೈಂಕರ್ಯದಲ್ಲಿ ಗಣಪತಿ ಪೂಜೆ, ಪೂರ್ಣಾ ನಾಂದಿ, ಪಂಚಕಲಶ, ನವಗ್ರಹ ಅಷ್ಟದಿಕ್ಪಾಲಕ, ಅಷ್ಟಲಕ್ಷ್ಮೀ ಹೋಮ ಹವನಾದಿ, ವಿಗ್ರಹ ಪ್ರತಿಷ್ಠಾಪನೆ ಅಭಿಷೇಕ, ನೇತ್ರೋಪಾಲನ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ವಿಮಾನಗೋಪುರ ಕಳಸ ಪ್ರತಿಷ್ಠಾಪನೆ, ಕಲಾಕರ್ಷಣೆ, ಕಲಶಾಭಿಷೇಕ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ನೆರವೇರಿತು.