)
ರಾಮನಗರ: ಮಾಜಿ ಪ್ರಧಾನಿ ದೇವೇಗೌಡರು ಯಾರನ್ನೆಲ್ಲ ಬೆಳೆಸಿದರೊ ಅವರೇ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಅವರೂ ಸೇರಿದ್ದಾರೆ. ಮೊದಲ ಬಜೆಟ್ ಮಂಡಿಸಲು ದೇವೇಗೌಡರು ಅವಕಾಶ ಕೊಡದೆ ಹೋಗಿದ್ದರೆ ದಾಖಲೆ ಬಜೆಟ್ ಮಂಡಿಸಲು ಆಗುತ್ತಿತ್ತೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಸಿದ್ದರಾಮಯ್ಯ 18ನೇ ಬಜೆಟ್ ಮಂಡನೆ ಮಾಡುತ್ತಿದ್ದರೆ ಅದಕ್ಕೆ ದೇವೇಗೌಡ ಮತ್ತು ಜನತಾ ದಳ ಪಕ್ಷವೇ ಕಾರಣ. ಅಂದು ಪಕ್ಷದಲ್ಲಿ ಅಗ್ರ ಗಣ್ಯ ನಾಯಕರಿದ್ದರೂ ಸಿದ್ದರಾಮಯ್ಯ ಅವರ ಕೈಯಲ್ಲಿ ಸಾಮಾಜಿಕ ನ್ಯಾಯ ಬದ್ಧತೆಯಿಂದ ಬಜೆಟ್ ಮಂಡನೆ ಮಾಡಿಸಿದ್ದು ಇದೇ ದೇವೇಗೌಡರು ಎಂದು ಹೇಳಿದರು.
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಜನತೆ ಹೋರಾಟ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವರ್ಷದ ಹಿಂದೆ 2ಲಕ್ಷ 85 ಸಾವಿರ ಉದ್ಯೋಗ ಭರ್ತಿ ಮಾಡುತ್ತೇವೆಂದು ಹೇಳಿದ್ದರು. ವರ್ಷ ಕಳೆದರೂ ಯಾವುದೇ ಸರ್ಕಾರಿ ಹುದ್ದೆ ಭರ್ತಿ ಆಗಿಲ್ಲ. ಬದಲಿಗೆ ಕುರ್ಚಿಗಾಗಿ ಕುಸ್ತಿಯಲ್ಲಿ ತೊಡಗಿದ್ದಾರೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ 3ಸಾವಿರ ಯುವನಿಧಿ ಕೊಟ್ಟಿದ್ದೇವೆಂದು ಉಡಾಫೆ ಉತ್ತರ ಕೊಡುದ್ದಾರೆಂದು ಆಕ್ಷೇಪಿಸಿದರು.ಯುವನಿಧಿ ಬೇಡ; ಉದ್ಯೋಗ ಸೃಷ್ಟಿಸಿ:
ಕಾಂಗ್ರೆಸ್ ಬೀದಿಗೆ ಬರುತ್ತೆ :
ಕಾಂಗ್ರೆಸ್ ನ 31 ಶಾಸಕರು ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಚಿವರ ಬದಲಾವಣೆ ಅಲ್ಲ, ಕಾಂಗ್ರೆಸ್ ಸರ್ಕಾರವನ್ನೇ ಬದಲಾವಣೆ ಮಾಡುವ ಕೆಲಸ ಮಾಡಬೇಕು ಎಂದು ಏಳು ಕೋಟಿ ಕನ್ನಡಿಗರು ಚರ್ಚೆ ಮಾಡುತ್ತಿದ್ದಾರೆ. ಈಗಲೇ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ತಿರಸ್ಕರಿಸಿ ಜನರು ಬೀದಿಗೆ ತಳ್ಳುತ್ತಾರೆ ಎಂದು ಹೇಳಿದರು.ಯಾವ ಸಚಿವ - ಶಾಸಕರನ್ನು ಬದಲಾವಣೆ ಮಾಡಿದರೂ ಏನೂ ಅಬಿವೃದ್ಧಿ ಕಾಣಲು ಆಗುವುದಿಲ್ಲ. ಇವರು ಇನ್ನೂ ಎರಡು ವರ್ಷದಲ್ಲಿ ಎಷ್ಟಾಗುತ್ತೋ ಅಷ್ಟು ಲೂಟಿ ಮಾಡಿಕೊಂಡು ಜನ ಸಾಮಾನ್ಯರನ್ನು ಸಾಲಗಾರರನ್ನಾಗಿ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
-----------------------24ಕೆಆರ್ ಎಂಎನ್ 5.ಜೆಪಿಜಿ
ನಿಖಿಲ್ ಕುಮಾರಸ್ವಾಮಿ