ಯರಗೋಳ್ ನೀರು ಮಾದರಿ ಪರೀಕ್ಷೆಗೆ ರವಾನೆ

KannadaprabhaNewsNetwork |  
Published : Nov 10, 2024, 01:53 AM IST
9ಕೆಬಿಪಿಟಿ.3.ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿ ಯರಗೋಳ್ ನೀರನ್ನು ಮನೆಗಳಿಗೆ ತೆರಳಿ ಪರಿಶೀಲಿಸಿದ ಅಧಿಕಾರಿಗಳು. | Kannada Prabha

ಸಾರಾಂಶ

ಯರಗೋಳ್ ನೀರನ್ನು ಸಹ ಬಾಟಲಿಯಲ್ಲಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಅದರ ವರದಿ ಬಂದ ಬಳಿಕ ಪುರಸಭೆ ಮುಂದಿನ ಕ್ರಮ ಕಾಗೊಳ್ಳಲಿದೆ. ಸೋಮವಾರ ಕೋಲಾರದಿಂದ ನಗರ ನೀರು ಸರಬರಾಜು ಇಲಾಖೆಯ ಹಿರಿಯ ಎಂಜಿನಿಯರ್‌ಗಳ ತಂಡ ಬರಲಿದ್ದು, ವಿವಿಧ ಬಡಾವಣೆಗಳಿಗೆ ತೆರಳಿ ನೀರಿನ ಮಾದರಿ ಸಂಗ್ರಹಿಸಲಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಂದುಬಣ್ಣಕ್ಕೆ ಬದಲಾಗುತ್ತಿರುವ ಯರಗೋಳ್ ನೀರು ಎಂಬ ಶೀರ್ಷಿಕೆ ಅಡಿಯಲ್ಲಿ ಶುಕ್ರವಾರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಬೆನ್ನಲ್ಲೆ ಶನಿವಾರ ಪುರಸಭೆ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ನೀರನ್ನು ಪರಿಶೀಲಿಸಿದರು.ಮಾಲೂರು, ಕೋಲಾರ ಹಾಗೂ ಬಂಗಾರಪೇಟೆ ಪಟ್ಟಣದ ನಾಗರಿಕರಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಸಲುವಾಗಿ ನಿರ್ಮಾಣ ಮಾಡಿರುವ ಯರಗೋಳ್ ಡ್ಯಾಂನಿಂದ ಸರಬರಾಜು ಆಗುತ್ತಿರುವ ನೀರು ಕಂದು ಬಣ್ಣಕ್ಕೆ ಬದಲಾಗುತ್ತಿರುವ ಬಗ್ಗೆ ಅನೇಕ ನಾಗರೀಕರು ಆತಂಕವ್ಯಕ್ತಪಡಿಸಿದ್ದರು.

ನೀರಿನ ಮಾದರಿ ಸಂಗ್ರಹ

ಇದನ್ನು ಶುಕ್ರವಾರ ಕನ್ನಡಪ್ರಭ ವಿವರವಾಗಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿರುವ ಪುರಸಭೆ ಆಡಳಿತ ಮಂಡಳಿಯ ಸದಸ್ಯರು ಮತ್ತು ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ತಂಡ ಸತ್ಯಾಸತ್ಯತೆಯನ್ನು ತಿಳಿಯಲು ಪಟ್ಟಣದ ಅಮರಾವತಿ ಬಡಾವಣೆಯ ಕೆಲ ಮನೆಗಳಿಗೆ ಭೇಟಿ ನೀಡಿ ನೀರನ್ನು ಪರಿಶೀಲನೆ ಮಾಡಿದರು.ಅಲ್ಲದೆ ಯರಗೋಳ್ ನೀರನ್ನು ಸಹ ಬಾಟಲಿಯಲ್ಲಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಅದರ ವರದಿ ಬಂದ ಬಳಿಕ ಮುಂದಿನ ಕ್ರಮವಹಿಸುವುದಾಗಿ ತಿಳಿಸಿದರು. ಸೋಮವಾರ ಮತ್ತಷ್ಟು ಬಡಾವಣೆಗಳಿಗೆ ತೆರಳಿ ನಾಗರೀಕರಿಂದ ಯರಗೋಳ್ ನೀರು ಕಂದು ಬಣ್ಣಕ್ಕೆ ಬದಲಾಗುತ್ತಿದೆಯೇ ಇಲ್ಲ ಮತ್ತೇನು ಸಮಸ್ಯೆ ಇದೆ ಎಂಬುದನ್ನು ತಿಳಿಯು ಸಲುವಾಗಿ ಕೋಲಾರದಿಂದ ನಗರ ನೀರು ಸರಬರಾಜು ಇಲಾಖೆಯ ಹಿರಿಯ ಎಂಜಿನಿಯರ್‌ಗಳ ತಂಡ ಬರಲಿದೆ.

ಯರಗೋಳ್ ಡ್ಯಾಂಗೆ ಭೇಟಿ

ಆ ತಂಡವು ಯರಗೋಳ್ ನೀರನ್ನು ಶುದ್ದೀಕರಿಸುವ ಕೇಂದ್ರಕ್ಕೂ ತೆರಳಿ ಪರಿಶೀಲನೆ ಮಾಡಲಿದೆ ಎಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಯಲಿದೆ. ನಂತರ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ತಿಳಿಸಿದ್ದಾರೆ.ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ,ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್,ಸಹಾಯಕ ಅಭಿಯಂತರು ಶಿವಕುಮಾರ್,ಅಶೋಕ್,ನಗರಾಭಿವೃದ್ದಿ ಕೋಶ ಯೋಜನ ನಿರ್ದೇಶಕರಾದ ಅಂಬಿಕಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ