ಆಲಸ್ಯ, ಸೋಮಾರಿತನಕ್ಕೆ ಯೋಗ ರಾಮಬಾಣ

KannadaprabhaNewsNetwork |  
Published : Jun 22, 2025, 01:19 AM IST
ಪೋಟೋ                                                        ೧೧ನೇ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸುವರ್ಣಗಿರಿ ಸಂಸ್ಥಾನ ಮಠದ ಡಾ.ಚನ್ನಮಲ್ಲಶ್ರೀ ಮಾತನಾಡಿದರು.  | Kannada Prabha

ಸಾರಾಂಶ

ಯೋಗ ರೂಢಿಸಿಕೊಂಡಿರುವ ಮನುಷ್ಯ ರೋಗದಿಂದ ಮುಕ್ತನಾಗುತ್ತಾನೆ. ಯೋಗವಿಲ್ಲದವ ಬದುಕಿನಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಆಲಸ್ಯ, ಸೋಮಾರಿತನ, ಅಸಡ್ಡೆ ಮೂಡುತ್ತದೆ.

ಕನಕಗಿರಿ:

ರೋಗ ಮುಕ್ತರಾಗಲು ಯೋಗ ರಾಮಬಾಣವಾಗಿ ಕೆಲಸ ಮಾಡುತ್ತಿದೆ ಎಂದು ಸುವರ್ಣಗಿರಿ ಸಂಸ್ಥಾನ ಮಠದ ಡಾ. ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ ಆವರಣದಲ್ಲಿ ಸುವರ್ಣಗಿರಿ ಯೋಗ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಯೋಗ ರೂಢಿಸಿಕೊಂಡಿರುವ ಮನುಷ್ಯ ರೋಗದಿಂದ ಮುಕ್ತನಾಗುತ್ತಾನೆ. ಯೋಗವಿಲ್ಲದವ ಬದುಕಿನಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಆಲಸ್ಯ, ಸೋಮಾರಿತನ, ಅಸಡ್ಡೆ ಮೂಡುತ್ತದೆ ಎಂದ ಅವರು, ಪರಿಸರವು ತನಗೆ ಏನುಬೇಕೋ ಅದನ್ನು ಮಾತ್ರ ತೆಗೆದುಕೊಳ್ಳುತ್ತದೆಯೋ ಹಾಗೆಯೇ ಮನುಷ್ಯ ಯೋಗದಿಂದ ದೇಹಕ್ಕೆ ಏನು ಬೇಕೋ ಅದನ್ನು ತೆಗೆದುಕೊಳ್ಳುತ್ತಾನೆ. ಯೋಗದಿಂದ ಯಾವ ಅಡ್ಡ ಪರಿಣಾಮವಿಲ್ಲ. ಸೂರ್ಯ ಉದಯಿಸುವ ಮೊದಲೇ ವ್ಯಾಯಾಮ, ಪ್ರಾಣಾಯಾಮ, ಧ್ಯಾನ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳುವಂತೆ ತಿಳಿಸಿದರು.

ಸುವರ್ಣಗಿರಿ ಯೋಗ ಟ್ರಸ್ಟ್ ಹಲವು ವರ್ಷಗಳಿಂದ ಯೋಗ, ಪ್ರಾಣಾಯಾಮ, ಧ್ಯಾನ ಶಿಬಿರಗಳನ್ನು ಹಮ್ಮಿಕೊಂಡು ಅನೇಕರಿಗೆ ಯೋಗದಲ್ಲಿ ಲೀನವಾಗಿಸುವ ಕಾರ್ಯ ಮಾಡುತ್ತಿದೆ. ದೇಶದ ಪರಂಪರೆ, ಸಂಸ್ಕೃತಿ ಪ್ರೇರೇಪಿಸುವ ಯೋಗವನ್ನು ಹಳ್ಳಿ-ಹಳ್ಳಿಗೂ ತಲುಪಿಸುವ ಸತ್ಕಾರ್ಯ ಮಾಡಲಿ ಎಂದರು.

ಇದಕ್ಕೂ ಮೊದಲು ಶಿಕ್ಷಕ ಶೇಖರಯ್ಯ ಅವರಿಂದ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿ ನೀಡಿದರು. ಯೋಗ ಮೈಗೂಡಿಸಿಕೊಂಡು ಇಳಿ ವಯಸ್ಸಿನಲ್ಲಿಯೂ ಹದಿಹರೆಯದವರಂತೆ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿರುವ ಶಿಕ್ಷಕ ಪರಸಪ್ಪ ಹೊರಪೇಟೆ, ನಾಗನಗೌಡ ಪಾಟೀಲ್, ಅನಂತಪ್ಪ ಧಾಯಿಪುಲ್ಲೆ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸುವರ್ಣಗಿರಿ ಯೋಗ ಟ್ರಸ್ಟ್ ಅಧ್ಯಕ್ಷ ವಾಗೀಶ ಹಿರೇಮಠ, ಎಪಿಎಂಸಿ ವರ್ತಕರ ಅಧ್ಯಕ್ಷ ಮಹಾಂತೇಶ ಸಜ್ಜನ, ಚಂದ್ರಕಾಂತ ರಾಯ್ಕರ್, ಸಣ್ಣ ಕನಕಪ್ಪ, ಬಸಯ್ಯಸ್ವಾಮಿ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ