ಮಾನಸಿಕ ವ್ಯಾದಿಯಿಂದ ಹೊರ ಬರಲು ಯೋಗ ಅನಿವಾರ್ಯ

KannadaprabhaNewsNetwork |  
Published : Feb 05, 2025, 12:35 AM IST
ಮುಂಡರಗಿಯಲ್ಲಿ ಅನ್ಮೋಲ್ ಯೋಗ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರದಿಂದ ರಥಸಪ್ತಮಿ ಅಂಗವಾಗಿ 108 ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಪ್ರೊ.ಎ.ವೈ.ನವಲಗುಂದ ಉದ್ಘಾಟಿಸಿದರು. ಕರಬಸಪ್ಪ ಹಂಚಿನಾಳ, ಡಾ.ಚಂದ್ರಕಾಂತಚ ಇಟಗಿ ಇದ್ದರು. | Kannada Prabha

ಸಾರಾಂಶ

ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಯೋಗ ಸಾಧನೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿದಿನ ಒಂದಿಷ್ಟು ಸಮಯ ನಿಗದಿ ಮಾಡಿಕೊಂಡು ಯೋಗಾಭ್ಯಾಸ ಮಾಡುವುದರ ಮೂಲಕ ನಿರೋಗಿಗಳಾಗಬೇಕು

ಮುಂಡರಗಿ: ಇಂದಿನ ಆಧುನಿಕ ಒತ್ತಡದ ಜೀವನ ಶೈಲಿಯಲ್ಲಿ ಮನುಷ್ಯನ ದೈಹಿಕ ಚಟುವಟಿಕೆ ಕಡಿಮೆಯಾಗಿ ಬೇರೆ ಬೇರೆ ರೀತಿಯ ದೈಹಿಕ ಹಾಗೂ ಮಾನಸಿಕ ವ್ಯಾಧಿಗಳಿಂದ ಬಳಲುತ್ತಿದ್ದಾನೆ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯ ಕೊಡುಗೆಯಾಗಿರುವ ಯೋಗಕ್ಕೆ ನಾವು ಮೊರೆ ಹೋಗುವುದು ಅನಿವಾರ್ಯ ಎಂದು ಸ್ಥಳೀಯ ಭುವನೇಶ್ವರಿ ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಎ. ವೈ.ನವಲಗುಂದ ಹೇಳಿದರು.

ಅವರು ಮಂಗಳವಾರ ಬೆಳಗ್ಗೆ ಮುಂಡರಗಿಯ ಜೆ.ಟಿ.ಕೋಟೆ ಪ್ರೌಢಶಾಲೆ ಆವರಣದಲ್ಲಿ ಅನ್ಮೋಲ್ ಯೋಗ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ ಹಮ್ಮಿಕೊಂಡಿದ್ದ ರಥಸಪ್ತಮಿ ಅಂಗವಾಗಿ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಯೋಗ ಸಾಧನೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿದಿನ ಒಂದಿಷ್ಟು ಸಮಯ ನಿಗದಿ ಮಾಡಿಕೊಂಡು ಯೋಗಾಭ್ಯಾಸ ಮಾಡುವುದರ ಮೂಲಕ ನಿರೋಗಿಗಳಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಯೋಗದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.

ಅನ್ಮೋಲ್ ಯೋಗ ಕೇಂದ್ರದ ನಿರ್ದೇಶಕಿ ಡಾ.ಮಂಗಳಾ ಇಟಗಿ ಮಾತನಾಡಿ, ಭೂಮಂಡಲದ ಸಕಲ ಜೀವ ರಾಶಿಗಳಿಗೂ ಚೈತನ್ಯ ಶಕ್ತಿ ಆದಂತಹ ಸೂರ್ಯ ಸಕಲ ವ್ಯಾದಿ ಗುಣಪಡಿಸುವಂತಹ ಶಕ್ತಿ ಹೊಂದಿದ್ದಾನೆ. ಹಾಗಾಗಿ ಸೂರ್ಯೋಪಾಸನೆಯ ದಿನ ಅತ್ಯಂತ ಭಕ್ತಿ ಭಾವದಿಂದ ಕೃತಜ್ಞತಾಪೂರ್ವವಾಗಿ ಸೂರ್ಯ ನಮಸ್ಕಾರ ಹಾಕುವುದರ ಮುಖಾಂತರ ರಥಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ನಮಸ್ಕಾರವು ಸಂಪೂರ್ಣ ಸಾಧನ ಆಧ್ಯಾತ್ಮಿಕ ಅಭ್ಯಾಸವಾಗಿದೆ. ಅದು ಆಸನ, ಪ್ರಾಣಾಯಾಮ, ಮಂತ್ರ ಮತ್ತು ಧ್ಯಾನ ತಂತ್ರ ಒಳಗೊಂಡಿದೆ ಎಂದರು.

ಸಾಹಿತಿ ಡಾ. ನಿಂಗು ಸೊಲಗಿ ಸಮಾರೋಪ ನುಡಿಗಳನ್ನಾಡಿದರು. ಅನ್ಮೋಲ್ ಯೋಗ ಕೇಂದ್ರದ ಅಧ್ಯಕ್ಷ ಡಾ. ಚಂದ್ರಕಾಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ಎಂ.ಪಿ. ಶೀರನಹಳ್ಳಿ, ರವಿ ಗೌಡ ಪಾಟೀಲ, ತಾಂಬ್ರಗುಂಡಿ, ಬಸವರಾಜ ಯಲಶೆಟ್ಟಿ, ಶಾಂತಾ ಮಾಳಾಪುರ, ಲಕ್ಷ್ಮಿ ಉಪ್ಪಾರ, ವಾಸಂತಿ ಯಾಳಗಿ, ಕುಸುಮ ರತ್ನಕಟ್ಟಿ, ವಿಶಾಲಾಕ್ಷಿ ಗೊರವರ, ಸಹನ ಸಿದ್ಲಿಂಗ, ಗೀತಾ ಪೂಜಾರ, ಜೈಬುನ್ನಿಸಾ ಬಿಸನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಶೋಕ ಹುಬ್ಬಳ್ಳಿ ಸ್ವಾಗತಿಸಿ, ಎಂ.ಟಿ.ಮಾಳಪುರ ವಂದಿಸಿದರು.ಆನ್‌ಲೈನ್‌ ಮೂಲಕವೂ ವಿವಿಧ ಭಾಗಗಳಿಂದ ರಥಸಪ್ತಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ