ಉತ್ತಮ ಆರೋಗ್ಯಕ್ಕೆ ಯೋಗ ದಾರಿ ದೀಪ: ಹರ್ಷಿಣಿ ಡಿ.ಆರ್.

KannadaprabhaNewsNetwork |  
Published : Jun 22, 2025, 01:20 AM IST
ಗ್ಲಾಸಿ ಕಿಡ್ಸ್, ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ಯೋಗಾಚರಣೆಉತ್ತಮ ಆರೋಗ್ಯಕ್ಕೆ ಯೋಗ ದಾರಿದೀಪಃ ಹರ್ಷಿಣಿ ಡಿ.ಆರ್ | Kannada Prabha

ಸಾರಾಂಶ

ಉತ್ತಮ ಆರೋಗ್ಯಕ್ಕೆ ಯೋಗ ದಾರಿದೀಪವಾಗಿದೆ ಎಂದು ಪಟ್ಟಣದ ಗ್ಲಾಸಿ ಕಿಡ್ಸ್, ಸದ್ವಿದ್ಯಾ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಹರ್ಷಿಣಿ ಡಿ.ಆರ್. ಹೇಳಿದರು.

ಸದ್ವಿದ್ಯಾ ಶಾಲೆಯಲ್ಲಿ ಯೋಗಾಚರಣೆ

ತರೀಕೆರೆ: ಉತ್ತಮ ಆರೋಗ್ಯಕ್ಕೆ ಯೋಗ ದಾರಿದೀಪವಾಗಿದೆ ಎಂದು ಪಟ್ಟಣದ ಗ್ಲಾಸಿ ಕಿಡ್ಸ್, ಸದ್ವಿದ್ಯಾ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ಹರ್ಷಿಣಿ ಡಿ.ಆರ್. ಹೇಳಿದರು.

ಅವರು, ಶನಿವಾರ ಗ್ಲಾಸಿ ಕಿಡ್ಸ್, ಸದ್ವಿದ್ಯಾ ಪಬ್ಲಿಕ್ ಶಾಲೆ ವತಿಯಿಂದ ಶಾಲೆಯಲ್ಲಿ ಸಾಮೂಹಿಕ ಯೋಗಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗವು ಆಧುನಿಕ ಸಮಾಜದ ಕ್ಲಿಷ್ಟಕರ ಸಮಸ್ಯೆಗಳಿಗೆ, ಜಂಜಾಟಗಳಿಗೆ ದಿವ್ಯ ಔಷಧ, ಎಲ್ಲ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೂ ಎಲ್ಲ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೂ ಸುಲಭ ಪರಿಹಾರ. ಅದರಲ್ಲೂ ವಿದ್ಯಾರ್ಥಿಗಳಿಗೆ, ಅಧಿಕ ಒತ್ತಡ ಇರುವ ಉದ್ಯೋಗಿಗಳಿಗೆ ಒತ್ತಡ ನಿಯಂತ್ರಣಕ್ಕೆ ಯಾವುದೇ ಶುಲ್ಕವಿಲ್ಲದೆ ದೊರೆಯುವ ಚಿಕಿತ್ಸೆ ಯೋಗ. ಭಾರತೀಯರು ವಿಶ್ವಕ್ಕೆ ಕೊಟ್ಟ ಅತೀ ದೊಡ್ಡ ಕೊಡುಗೆ ಯೋಗ, ಇದು ನಮ್ಮ ಹೆಮ್ಮೆ ಎಂದು ಯೋಗ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ವಿದ್ಯಾರ್ಥಿಗಳಾದ ಭುವನ್, ಯಶಸ್, ಆಕಾಶ್, ಪ್ರಜ್ವಲ್, ಸ್ಮಿತಾ, ಯಶಸ್ವಿನಿ, ನವ್ಯ, ಗೌತಮ್ ಅವರು ಅತ್ಯಂತ ಅದ್ಭುತ ಆಸನಗಳಾದ ಧನುರಾಸನ, ಶಿರ್ ಶಾಸನ, ಹಲಾಸನ, ಕುಕ್ಕುಟಾಸನದ ಅಮೋಘ ಪ್ರದರ್ಶನದೊoದಿಗೆ ಜಲನೇತಿ, ಸೂತ್ರನೇತಿಗಳನ್ನು ಲೀಲಾಜಾಲವಾಗಿ ,ಪ್ರದರ್ಶಿಸಿದರು.

ಶಾಲೆಯಲ್ಲಿ ಮತ್ತು ನಂದಿ ಗ್ರಾಮದಲ್ಲಿ ನಡೆದ ಯೋಗಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯ್ರಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ