ಕನ್ನಡಪ್ರಭ ವಾರ್ತೆ ಉಡುಪಿ
ಅವರು ಶುಕ್ರವಾರ ಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠ ಮತ್ತು ಹರಿದ್ವಾರದ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಕೆಲವರಿಗೆ ಯೋಗ ಹಿಂದು ಧರ್ಮದ ಕೊಡುಗೆ ಎನ್ನುವುದು ಇಷ್ಟವಾಗುತ್ತಿಲ್ಲ, ಅದಕ್ಕೆ ಅವೆರಡೂ ಪ್ರತ್ಯೇಕ ಎನ್ನುತ್ತಿದ್ದಾರೆ. ಆದರೆ ಅದು ಸರಿಯಲ್ಲ ಎಂದ ಶ್ರೀಗಳು, ಕಳೆದ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಬಹಳ ದೊಡ್ಡ ಸಾಧನೆ ಎಂದವರು ಶ್ಲಾಘಿಸಿದರು.ಇವತ್ತು ಸಮಾದದಲ್ಲಿ ಸಮತ್ವ ಅಥವಾ ಸಮಾನತೆಯ ಬಗ್ಗೆ ಗೊಂದಲ ಇದೆ. ಆದರೆ ಯೋಗೇಶ್ವರನಾದ ಕೃಷ್ಣ ಗೀತೆಯಲ್ಲಿ ಸಮಾನತೆಗೆ ಅರ್ಥಪೂರ್ಣ ಪ್ರಾಯೋಗಿತ ಸೂತ್ರವನ್ನು ನೀಡಿದ್ದಾನೆ. ಸಮಾನತೆ ಪ್ರಮಾಣ ಆಧಾರಿತವಲ್ಲ, ಅದು ಸಾಮರ್ಥ್ಯ ಆಧಾರಿತವಾದುದು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ತಂತಮ್ಮ ಸ್ಥಾನದಲ್ಲಿದ್ದುಕೊಂಡು ನಡೆಸುವುದೇ ಸಮಾನತೆ ಎಂದವರು ವಿಶ್ಲೇಷಿಸಿದರು.
ಪುತ್ತಿಗೆ ಶ್ರೀಗಳು ಕಾರ್ಯಕ್ರಮಕ್ಕೆ ಮೊದಲು ವೇದಿಕೆಯಲ್ಲಿ ಯೋಗಾಸನಗಳನ್ನು ನಡೆಸಿ, ಪ್ರಾಣಾಯಾಮವನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.