ನೇಹಾ ಹತ್ಯೆಗೆ ಯೋಗೇಶ್ವರಿ ಮಾತಾಜಿ ಖಂಡನೆ

KannadaprabhaNewsNetwork |  
Published : Apr 23, 2024, 12:47 AM IST
ಯೋಗೇಶ್ವರಿ ಮಾತಾಜಿ ಪ್ರವಚನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆಯನ್ನು ತಾಲೂಕಿನ ಬುರಣಾಪುರ ಆರೂಢಾಶ್ರಮದ ಮಾತಾಶ್ರೀ ಯೋಗೇಶ್ವರಿ ಮಾತಾಜಿ ಖಂಡಿಸಿದ್ದಾರೆ. ಕಾಲೇಜಿಗೆ ನುಗ್ಗಿ ಇಷ್ಟೊಂದು ಅಮಾನುಷವಾಗಿ ಚುಚ್ಚಿ ಕೊಲೆ ಮಾಡುತ್ತಾರೆ ಎಂದರೆ ಅವರ ಮನಸು ಎಷ್ಟು ಹೇಯವಾಗಿರಬೇಕು? ಅವರು ಮನುಷ್ಯರೋ ಅಥವಾ ರಾಕ್ಷಸರೊ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹತ್ಯೆಯನ್ನು ತಾಲೂಕಿನ ಬುರಣಾಪುರ ಆರೂಢಾಶ್ರಮದ ಮಾತಾಶ್ರೀ ಯೋಗೇಶ್ವರಿ ಮಾತಾಜಿ ಖಂಡಿಸಿದ್ದಾರೆ. ಕಾಲೇಜಿಗೆ ನುಗ್ಗಿ ಇಷ್ಟೊಂದು ಅಮಾನುಷವಾಗಿ ಚುಚ್ಚಿ ಕೊಲೆ ಮಾಡುತ್ತಾರೆ ಎಂದರೆ ಅವರ ಮನಸು ಎಷ್ಟು ಹೇಯವಾಗಿರಬೇಕು? ಅವರು ಮನುಷ್ಯರೋ ಅಥವಾ ರಾಕ್ಷಸರೊ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಂತಹ ಕ್ರೂರಿಗಳಿಗೆ ಕಠಿಣ ಶಿಕ್ಷೆ ಒದಗಿಸುವಂತಹ ಕಾನೂನು ಬರಬೇಕಿದೆ. ಅಂದಾಗ ಮಾತ್ರ ಹೆಣ್ಣುಮಕ್ಕಳಿಗೆ ರಕ್ಷಣೆ ಸಿಗಲಿದೆ. ಇನ್ನು ತಂದೆ-ತಾಯಿ ಆದವರು ತಮ್ಮ ಒತ್ತಡದ ಜೀವನದಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣ ಕೊಡಿಸಿದರೆ ಸಾಲದು ಅವರಿಗೆ ಸಂಸ್ಕಾರ ಕೊಡುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.

ತಾಲೂಕಿನ ರಂಭಾಪುರದ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏ.18ರಿಂದ 23ರ ವರೆಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿನ್ನೆಲೆ ನಿತ್ಯ ಪ್ರವಚನ ನಡೆಸುತ್ತಿರುವ ಯೋಗೇಶ್ವರಿ ಮಾತಾಜಿ ಅವರು ದುಷ್ಟ ಸಮಾಜದಲ್ಲಿ ಶಿಷ್ಟರಾಗಿ ಬದುಕುವುದನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂಬುದರ ಬಗ್ಗೆ ಆಶೀರ್ವಚನ ನೀಡಿದರು.

ಗವಾಯಿಗಳಾದ ರಾಜು ಗುಬ್ಬೇವಾಡ, ತಬಲಾ ವಾದಕ ಯಲ್ಲಾಲಿಂಗ ಹೂಗಾರ, ಸಮಸ್ತ ರಂಭಾಪುರದ ಜನತೆ ಹಾಗೂ ಸಕಲ ಸದ್ಭಕ್ತರು ಪ್ರವಚನದಲ್ಲಿ ಭಾವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ