ಹೊಲದಲ್ಲಿ ಕರಡಿ ದಾಳಿ ರೈತ ಯುವ ಗಂಭೀರ ಗಾಯ

KannadaprabhaNewsNetwork |  
Published : Apr 07, 2024, 01:53 AM IST
ಹೊನ್ನಾಳಿ ಫೋಟೋ 6ಎಚ್.ಎಲ್.ಐ2.ಹೊನ್ನಾಳಿ ತಾಲೂಕು ಬೇವಿನಹಳ್ಳಿ ಗ್ರಾಮದ ರೈತ ಯುವಕ  ಕರಡಿ ದಾಳಿಯಿಂದ  ಗಂಬೀರಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. . | Kannada Prabha

ಸಾರಾಂಶ

ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ಸೇರಿದ ಬೇವಿನಹಳ್ಳಿ ಗ್ರಾಮದ ರೈತ ನಯಾಜ್‍ ಅಹ್ಮದ್ ತಮ್ಮ ತೋಟಕ್ಕೆ ನೀರು ಬಿಡಲು ಹೋದಾಗ ಗುಡ್ಡದ ಭಾಗದಿಂದ ಬಂದ ಕರಡಿ ದಾಳಿ ಮಾಡಿ ತಲೆ, ಬೆನ್ನಿಗೆ, ಬಲಗಾಲಿನ ತೋಡೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿರುವ ಘಟನೆ ಶನಿವಾರ ನಡೆದಿದೆ.

ಹೊನ್ನಾಳಿ: ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ಸೇರಿದ ಬೇವಿನಹಳ್ಳಿ ಗ್ರಾಮದ ರೈತ ನಯಾಜ್‍ ಅಹ್ಮದ್ ತಮ್ಮ ತೋಟಕ್ಕೆ ನೀರು ಬಿಡಲು ಹೋದಾಗ ಗುಡ್ಡದ ಭಾಗದಿಂದ ಬಂದ ಕರಡಿ ದಾಳಿ ಮಾಡಿ ತಲೆ, ಬೆನ್ನಿಗೆ, ಬಲಗಾಲಿನ ತೋಡೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿರುವ ಘಟನೆ ಶನಿವಾರ ನಡೆದಿದೆ. ಗಾಯಗೊಂಡ ರೈತ ನಯಾಜ್‍ ಅಹ್ಮದ್‍ನನ್ನು ತಕ್ಷಣ ಅಲ್ಲಿನ ರೈತರು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕರಡಿದಾಳಿಗೆ ಒಳಗಾದ ರೈತ ನಯಾಜ್ ಅಹ್ಮದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕರಡಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!