ಯುವ ಜನತೆ ದೇಶದ ನೈಜ ಸಂಪತ್ತು: ಕ್ರೀಡಾಪಟು ಅಶೋಕ್‌ ಭೀಮಾನಾಯ್ಕ

KannadaprabhaNewsNetwork |  
Published : Nov 01, 2024, 12:17 AM ISTUpdated : Nov 01, 2024, 12:18 AM IST
30ಎಚ್‌ಪಿಟಿ3- ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಶೋಕ್ ಎಫ್11 ತಂಡದ ನಾಯಕ ಅಶೋಕ್ ಭೀಮಾ ನಾಯ್ಕ ಮೊದಲ ಸ್ಥಾನದ ಬಹುಮಾನ ಸ್ವೀಕರಿಸಿದರು. | Kannada Prabha

ಸಾರಾಂಶ

ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾವಂತರನ್ನು ಗುರುತಿಸಲಾಗುವುದು. ಆಸಕ್ತಿಗೆ ಅನುಗುಣವಾಗಿ ಅಗತ್ಯ ತರಬೇತಿ ನೀಡಿ ಉನ್ನತ ಗುರಿ ಸಾಧನೆಯ ಅವಕಾಶಗಳನ್ನು ಹೆಚ್ಚಿಸಲಾಗುವುದು.

ಹೊಸಪೇಟೆ: ಶಿಕ್ಷಣ ಮತ್ತು ಕ್ರೀಡೆಯಲ್ಲಿ ಯುವಜನರಿಗೆ ಸರ್ಕಾರ ಮತ್ತು ಸಮುದಾಯದ ಉತ್ತೇಜನ ಅಗತ್ಯ ಎಂದು ರಾಷ್ಟ್ರಮಟ್ಟದ ಫುಟ್ಬಾಲ್ ಆಟಗಾರ ಅಶೋಕ್ ಭೀಮಾನಾಯ್ಕ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಕ್ರಿಕೆಟರ್ಸ್‌ ವತಿಯಿಂದ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾಗಿ ಬಹುಮಾನ ಸ್ವೀಕರಿಸಿ ಮಾತನಾಡಿದರು.ದೇಶದ ನೈಜ ಸಂಪತ್ತಾದ ಯುವಕರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಬಲಗೊಳಿಸಬೇಕಿದೆ. ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾವಂತರನ್ನು ಗುರುತಿಸಲಾಗುವುದು. ಆಸಕ್ತಿಗೆ ಅನುಗುಣವಾಗಿ ಅಗತ್ಯ ತರಬೇತಿ ನೀಡಿ ಉನ್ನತ ಗುರಿ ಸಾಧನೆಯ ಅವಕಾಶಗಳನ್ನು ಹೆಚ್ಚಿಸಲಾಗುವುದು. ಕ್ರಿಕೆಟ್‌ಗೆ ಸಲ್ಲುವ ಗೌರವ ಮತ್ತು ಗೌರವಧನ ದೇಶಿ ಕ್ರೀಡೆಗಳಿಗೂ ದಕ್ಕಬೇಕು ಎಂದರು.

ಪುರಸಭೆ ಮಾಜಿ ಸದಸ್ಯ ಜಿ.ಮಂಜುನಾಥ ಮಾತನಾಡಿ, ಬದುಕಿನ ಸವಾಲುಗಳನ್ನು ಎದುರಿಸಲು ಕ್ರೀಡಾಸ್ಫೂರ್ತಿ ಸಹಕಾರಿ. ನಿರಂತರ ಸಾಧನೆಯ ಮೂಲಕ ಉನ್ನತ ಗುರಿ ತಲುಬೇಕು ಎಂದರು.

ಸಮಾಜ ಸೇವಕ ರಾಜವರ್ಧನ ರೆಡ್ಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಯುವ ಮುಖಂಡ ಪ್ರದೀಪ್ ನಾಯಕ್. ಸಮಾಜಸೇವಕರಾದ ಸರಳಾ ಕಾವ್ಯ, ಮಂಜುಜಾಕಿ, ವಿಜಯನಗರ ಕ್ರಿಕೆಟರ್ಸ್‌ ಅಧ್ಯಕ್ಷ ಗಂಗಾಧರ ಕಟಿಗಿ, ಪರಶುರಾಮ, ಆನಂದ್, ಓಬಳೇಶ್, ಸುಧಾಕರ್, ಸಾಗರ್, ನಜೀರ್, ನಾಗರಾಜ. ರಸೂಲ್ ಮತ್ತಿತರರಿದ್ದರು. ಶಿಕ್ಷಕ ವಿರೂಪಾಕ್ಷ ನಿರ್ವಹಿಸಿದರು. ಹುಬ್ಬಳ್ಳಿ, ಧಾರವಾಡ, ಉಡುಪಿ, ದಾವಣಗೆರೆ, ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 25ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಬೆಂಗಳೂರಿನ ಸ್ಯಾಂಡಿ ಬೆಸ್ಟ್ ಆಲ್‌ರೌಂಡರ್ ಬಹುಮಾನ ಪಡೆದರು. ಪಂದ್ಯಾವಳಿಯಲ್ಲಿ ವಿಜೇತರಾದ ಅಶೋಕ್ ಎಫ್‌ಎಂ 11 ತಂಡ ಬಹುಮಾನವಾಗಿ ಒಂದು ಲಕ್ಷ ರು.ನಗದು ಮತ್ತು ಅತ್ಯಂತ ಆಕರ್ಷಕ ಕಪ್ ತಮ್ಮದಾಗಿಸಿಕೊಂಡರು. ಉಡುಪಿಯ ಬಿಕೆ ಬ್ರದರ್ಸ್‌ ತಂಡ ರನ್ನರ್‌ ಅಪ್‌ ವಿಜೇತರಾಗಿ ₹50 ಸಾವಿರ ಬಹುಮಾನ ಮತ್ತು ಕಪ್ ಗಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ