ದೇಶ ಸೇವೆ ಕರ್ತವ್ಯ ನಿರತ ಯುವಕರು ಇತರರಿಗೂ ಸ್ಫೂರ್ತಿ

KannadaprabhaNewsNetwork |  
Published : Dec 15, 2024, 02:00 AM IST
 ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ದೇಶ ಸೇವೆಗೆ ನೂತನವಾಗಿ ಆಯ್ಕೆಗೊಂಡ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

Youth who are engaged in national service are an inspiration to others

-ದೇಶ ಸೇವೆಗೆ ನೂತನವಾಗಿ ಆಯ್ಕೆಗೊಂಡ ಸೈನಿಕರಿಗೆ ಸನ್ಮಾನ

-----

ಕನ್ನಡಪ್ರಭ ವಾರ್ತೆ ಹುಣಸಗಿ

ಅಗತೀರ್ಥ ಗ್ರಾಮದ ರೇವಣಸಿದ್ಧೇಶ್ವರ ಮಠದಲ್ಲಿ ದೇಶ ಸೇವೆಗೆ ನೂತನವಾಗಿ ಆಯ್ಕೆಯಾದ ವಿವಿಧ ಗ್ರಾಮಗಳ ಯುವ ಸೈನಿಕರಿಗೆ ಕರ್ನಾಟಕದ ಪ್ರದೇಶ ಕುರುಬ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿ ಮಾತನಾಡಿ, ಸೈನಿಕ ನೇಮಕಾತಿಯಲ್ಲಿ ಆಯ್ಕೆಗೊಂಡು ದೇಶ ಸೇವೆಯಲ್ಲಿ ಕರ್ತವ್ಯಗೆ ನಿರತರಾದ ನಮ್ಮ ಭಾಗದ ಯುವಕರು ಇತರರಿಗೂ ಸ್ಫೂರ್ತಿ ಅಲ್ಲದೆ ಹೆಮ್ಮಯ ವಿಷಯ ಎಂದರು.

ದೇಶ ರಕ್ಷಣೆಯಲ್ಲಿರುವ ಯೋಧರನ್ನು ನಾವು ಗೌರವಿಸಬೇಕು. ವೀರಯೋಧರಿಂದಲೇ ನಮ್ಮ ಭಾರತ ದೇಶವು ಸುಭದ್ರವಾಗಿದೆ. ಹೀಗಾಗಿ ರೈತ ಮತ್ತು ಯೋಧರು ಈ ದೇಶದ ಎರಡು ಕಣ್ಣುಗಳಿದಂತೆ ಎಂದು ತಿಳಿಸಿದರು.

ಸೈನಿಕರಾದ ಮಲ್ಲಿಕಾರ್ಜುನ ಸಂಜೀವಪ್ಪ ಹುಡೇದ್, ಪರಶುರಾಮ ನಾಗೂರ, ಬಸವರಾಜ ಮಾನಬಾವಿ, ಬಸವರಾಜ ಯಕ್ತಾಪೂರ, ನಾಗರಾಜ ಪೂಜಾರಿ, ಬಸವರಾಜ ಕಕ್ಕೇರಾ ಅವರನ್ನು ಸನ್ಮಾನಿಸಲಾಯಿತು. ಅರ್ಚಕ ಕೆಂಚರಾಯ ಪೂಜಾರಿ ಸಾನಿಧ್ಯ ವಹಿಸಿದ್ದರು. ಪರಶುರಾಮ ಚೌದ್ರಿ ಅಧ್ಯಕ್ಷತೆ ವಹಿಸಿದ್ದರು. ಶಿವಣ್ಣ ಪೂಜಾರಿ ಬೈಲಕುಂಟಿ, ಮಾಳಿಂಗರಾಯ ಮೌರ್ಯ, ಪರಮಣ್ಣ ನಿಲಗಲ್, ಕಾಳಪ್ಪ ಕವಾತಿ, ಪುರಸಭೆ ಸದಸ್ಯ ಮಲ್ಲು ದಂಡಿನ್, ರವಿಚಂದ್ರ ಸಾಹುಕಾರ, ಮಹಿಳಾ ಘಟಕದ ಅಧ್ಯಕ್ಷೆ ರಾಧಿಕಾ ಸಿ. ಬಿರಾದಾರ್, ಹಣಮಂತ್ರಾಯ ಕಮಲಾಪೂರ, ಬಿ.ಹೊರಟ್ಟಿ ಸೇರಿದಂತೆ ಸಮಾಜದವರಿದ್ದರು.

-

14ವೈಡಿಆರ್12 : ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ದೇಶ ಸೇವೆಗೆ ನೂತನವಾಗಿ ಆಯ್ಕೆಗೊಂಡ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’