ಬಿ.ಆರ್.ಪೂರ್ಣಿಮಾ ಅಧಿಕಾರಿಗಳಿಗೆ ನಿರ್ದೇಶನ । ಲೋಕಸಭೆ ಚುನಾವಣೆ ಹಿನ್ನೆಲೆ ಸ್ವೀಪ್ ಸಮಿತಿ ಸಭೆ
ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ.ಆರ್ ಪೂರ್ಣಿಮಾ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟೀಯ ಸರಾಸರಿ ಮತದಾನ ಶೇಕಡವಾರು ೬೭.೪ ಕ್ಕಿಂತ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಹೆಚ್ಚಾಗಿ ನಡೆಯಬೇಕು. ಹಾಸನ ನಗರ ಪ್ರದೇಶದಲ್ಲಿ ೮೪ ಮತಗಟ್ಟೆ ವ್ಯಾಪ್ತಿಯಲ್ಲಿ ತೀವ್ರ ಸ್ವೀಪ್ ಚಟುವಟಿಕೆಗಳನ್ನು ಮಾಡಬೇಕು. ಚುನಾವಣಾ ಜಾಗೃತಿಯ ಪೋಸ್ಟರ್ಗಳನ್ನು ಮನೆ ಮನೆಗೆ ಅಳವಡಿಸಿ ಮತದಾರರಿಗೆ ಕಡ್ಡಾಯವಾಗಿ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಹೇಳಿದರು.ಸಾರ್ವತ್ರಿಕವಾಗಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತದಾರರ ಜಾಗೃತಿಯನ್ನುಂಟು ಮಾಡಬೇಕು. ರಥಯಾತ್ರೆ, ಬೀದಿನಾಟಕ, ಜಾಥಾ ಮೊದಲಾದ ಕಾರ್ಯಕ್ರಮಗಳ ಮೂಲಕ ಗ್ರಾಮ ಪಂಚಾಯಿತಿ ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹಂತಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಪಂ ಸಿಇಒ ಸೂಚಿಸಿದರು.
ಚುನಾವಣಾ ರಾಯಭಾರಿಗಳ ನೇಮಕ ಮಾಡುವುದು, ಇಎಲ್ಸಿ ಕ್ಲಬ್ಗಳನ್ನು ಬಲಪಡಿಸಿ ಜಾಗೃತಿ ಮೂಡಿಸುವುದು, ಮಾನವ ಸರಪಳಿ, ಮಹಿಳೆಯರ ಬೈಕ್ ರ್ಯಾಲಿ, ಸೈಕಲ್ ರ್ಯಾಲಿ, ಪಂಜಿನ ಮೆರವಣಿಗೆ, ಮನೆ ಮನೆ ಭೇಟಿ ಮಾಡಿ ಕರಪತ್ರಗಳನ್ನು ವಿತರಣೆ ಮಾಡಬೇಕು. ಹಾಗೆಯೇ ಚುನಾವಣಾ ರಥ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳು ರಥವನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ಪೂರ್ಣಿಮಾ ತಿಳಿಸಿದರು.
ಚುನಾವಣಾ ಜಾಗೃತಿ ಬ್ಯಾನರ್ಗಳನ್ನು ಎಲ್ಲಾ ಮೆಡಿಕಲ್ಸ್, ನಸಿಂಗ್ ಹೋಮ್, ಫುಡ್ ಕೋಟ್, ಸ್ಕ್ಯಾನಿಂಗ್ ಸೆಂಟರ್, ಅತಿ ಹೆಚ್ಚು ಸಾರ್ವಜನಿಕರು ಇರುವ ಜಾಗಗಳಲ್ಲಿ ಅಳವಡಿಸಿಬೇಕು. ಸರ್ಕಾರಿ ಬಸ್ಗಳಲ್ಲಿ ಜಿಲ್ಲೆಯೊಳಗಿನ ಪೋಸ್ಟರ್ಗಳ ಅಳವಡಿಕೆ ಮಾಡುವುದು. ಹೀಲಿಯಂ ಬಲೂನ್ಗಳನ್ನು ಬಳಸುವಂತೆ ತಿಳಿಸಿದರು.ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಹಾಸನ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿ.ಆರ್ ಪೂರ್ಣಿಮಾ ಮಾತನಾಡಿದರು.