ಪಿಡಿಒ ವಿರುದ್ಧ ಜಿಪಂ ಸಿಇಒ ಗರಂ

KannadaprabhaNewsNetwork |  
Published : Aug 13, 2026, 03:00 AM IST
12ಸದಚಬಸದಬ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡಸಮೀಪದ ತೋಗುಣಸಿ ಗ್ರಾಮದಲ್ಲಿ ಕೊಳಚೆ, ಕುರಿಯುವ ನೀರು, ಸ್ವಚ್ಛತೆ ಮಾಡುವ ಕಾರ್ಯ ಮರೆತಿರುವ ಹಾಗೂ ಜನರ ಸಮಸ್ಯೆಗೆ ಸ್ಪಂದಿಸದ ಪಿಡಿಒ ಆರತಿ ಕ್ಷತ್ರಿ ಅವರನ್ನು ತಕ್ಷಣವೇ ವರ್ಗಾವಣೆಗೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸಮೀಪದ ತೋಗುಣಸಿ ಗ್ರಾಮದಲ್ಲಿ ಕೊಳಚೆ, ಕುರಿಯುವ ನೀರು, ಸ್ವಚ್ಛತೆ ಮಾಡುವ ಕಾರ್ಯ ಮರೆತಿರುವ ಹಾಗೂ ಜನರ ಸಮಸ್ಯೆಗೆ ಸ್ಪಂದಿಸದ ಪಿಡಿಒ ಆರತಿ ಕ್ಷತ್ರಿ ಅವರನ್ನು ತಕ್ಷಣವೇ ವರ್ಗಾವಣೆಗೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಗ್ರಾಮಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದರು.ಬುಧವಾರ ತೋಗುಣಸಿ ಗ್ರಾಮಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಗಜಾನನ ಬಾಲೆ ಅವರ ಸಮ್ಮುಖದಲ್ಲಿ ಗ್ರಾಮಸ್ಥರು ಪಿಡಿಒ ಅವರ ವಿರುದ್ಧ ಸಾಕಷ್ಟು ಆರೋಪ ಮಾಡಿದರು. ಅವರನ್ನು ಈ ಪಂಚಾಯಿತಿಯಿಂದ ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಪಂಚಾಯಿತಿಗೆ ಬೀಗ ಹಾಕಿ ಉಗ್ರ 4 ಹೋರಾಟ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಸಿದರು.

ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲೆಡೆ ಕೊಳಚೆ ಆವರಿಸಿದೆ. ಗ್ರಾಮದಲ್ಲಿ ಬಹಿರ್ದೆಸೆ ತಪ್ಪಿಲ್ಲ. ಪ್ರತಿಯೊಂದು ಕಾರ್ಯಕ್ಕೂ ಲಂಚ ಕೊಡಬೇಕು. ಇಲ್ಲದಿದ್ದರೆ ಯಾವುದೇ ಕೆಲಸ ಮಾಡುವುದಿಲ್ಲ. ತೋಗುಣಸಿ ತಾಂಡಾದಲ್ಲಿ ಈ ಸ್ವತ್ತು ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಪಿಡಿಒ ಆರತಿ ಕ್ಷತ್ರಿ ವಿರುದ್ಧ ಹರಿಹಾಯ್ದರು. ಪಮಚಾಯಿತಿಯಲ್ಲಿ ಎಸ್ಸಿ, ಎಸ್ಟಿ, ಅನುದಾನ ಸಮರ್ಪಕ ಬಳಕೆ ಆಗದಿರುವುದು, ಗ್ರಾಮದಲ್ಲಿ ಸ್ವಚ್ಛತೆ, ಕುರಿಯುವ ನೀರು, ತೋಗುಣಸಿ ತಾಂಡಾಕ್ಕೆ ಈ ಸೊತ್ತು, ಗ್ರಾಮದಲ್ಲಿ ನೈರ್ಮಲಿಕರಣ ಹೀಗೆ ಗ್ರಾಮದಲ್ಲಿನ ಸಾಕಷ್ಟು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿದರು. ಅದರೊಂದಿಗೆ ಪಿಡಿಒ ಅವರು ಜನರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಪಿಡಿಒ ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮೇಲಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಸಿದರು. ತಾಪಂ ಅಧಿಕಾರಿ ಸತೀಶ ಮಾಕೊಂಡ, ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ, ಪಿಡಿಒ ಆರತಿ ಕ್ಷತ್ರಿ, ವಿನಾಯಕ ಪತಂಗೆ, ಪ್ರಮೋದ ಗೌಡರ, ಹಾಗೂ ಗ್ರಾಮದ ಮುಖಂಡರಾದ ಯಲ್ಲಪ್ಪ ಬರಸಕೊಡ, ಎಸ್.ಎಂ.ಪಾಟೀಲ, ಶಿವಾನಂದ ವಾಲಿಕಾರ, ರಂಗಪ್ಪ ಜಾನಮಟ್ಟಿ, ಕೇಶಪ್ಪ ಲಮಾಣಿ, ಕುಮಾರ ಹಾದಿಮನಿ, ಮುತ್ತಪ್ಪ ಮಾದರ ಇನ್ನೂ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಮಕ್ಕಳಲ್ಲಿ ಶಿಸ್ತು
ಶಿಕ್ಷಣವು ದೇಶದ ಪ್ರಗತಿಗೆ ಮೂಲಾಧಾರ