ತಾಲೂಕಿನ ಕುಣಗಳ್ಳಿ ಗ್ರಾಪಂನಲ್ಲಿ ಜನಸಂಪರ್ಕ ಸಭೆ । ಜನರಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಶಾಸಕರ ತಾಕೀತು
ಸಾರ್ವಜನಿಕ ಸ್ಪಂದನಾ ಸಭೆಗಳಿಗೆ ತಾಲೂಕು ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು. ಆದರೆ ಇಂದಿನ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟೀಸ್ ನೀಡುವ ಮೂಲಕ ಕೊನೆ ಎಚ್ಚರಿಕೆ ನೀಡಿ ಎಂದು ತಾಪಂ ಇಓಗೆ ಶಾಸಕ ಕೖಷ್ಣಮೂರ್ತಿ ಸೂಚಿಸಿದರು. ತಾಲೂಕಿನ ಕುಣಗಳ್ಳಿ ಗ್ರಾಪಂನಲ್ಲಿ ಅಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಸಭೆಗೆ ಗೈರಾದವರಿಗೆ ನೋಟಿಸ್ ನೀಡಿ ಕಾರಣ ಕೇಳಲಾಗುವುದು, ಮುಂದಿನ ದಿನಗಳಲ್ಲಿ ಈ ರೀತಿ ನಿರ್ಲಕ್ಷ್ಯ ಮಾಡಿದರೆ ಮೇಲಾಧಿಕಾರಿಗಳಿಗೆ ಸ್ಪಂದನೆ ಇಲ್ಲ ಎಂದು ದೂರಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಂದಿನ ಸಭೆಗೆ ತಹಸೀಲ್ದಾರ್ ಬಂದಿಲ್ಲ, ಅವರ ಬದಲಿಗೆ ಗ್ರೇಡ್ 2 ತಹಸೀಲ್ದಾರ್ ಇಲ್ಲವೇ ಆರ್ ಐ ಬರಬೇಕಿತ್ತು, ಆರ್ ಐ ಸರ್ವೇಯಲ್ಲಿ ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷ್ಯ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಿರ್ವಾಹಕರು ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಿ:ಜನಸಂಪರ್ಕ ಸಭೆಯಲ್ಲಿ ಕೆಲವು ಅಹವಾಲುಗಳು ಬಂದಿದ್ದು, ಈ ಪೈಕಿ ಸರ್ಕಾರಿ ಬಸ್ನ ನಿರ್ವಾಹಕರು ಮಹಿಳೆಯರ ಜತೆ ಅನುಚಿತವಾಗಿ ವರ್ತಿಸುತ್ತಾರೆ ಎಂಬ ದೂರುಗಳಿವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಮೇಲಾಧಿಕಾರಿಗಳು ತಿಳಿಹೇಳಬೇಕು ಎಂದು ಸೂಚಿಸಿದರು.
ವಾರಕ್ಕೆ 2 ಗ್ರಾಪಂನಲ್ಲಿ ಸಭೆ:
ವಿದ್ಯಾರ್ಥಿಯೊಬ್ಬ ರಸ್ತೆ ಚರಂಡಿ, ನರೇಗಾ ಬಿಲ್ ಬಗ್ಗೆ ಹಾಗೂ ಮುಡಿಗುಂಡ ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಿಸಿ, ಸುರಾಪುರ ಕೆರೆ ಮುಚ್ಚಲಾಗಿದೆ ಎಂಬಿತ್ಯಾದಿ ದೂರು ನೀಡಿದ್ದು, ಅಧಿಕಾರಿಗಳು ಅವುಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು.
ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ನಿಂಗರಾಜು, ಜಿ.ಪಂ ಮಾಜಿ ಸದಸ್ಯ ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಬಿಇಒ ಮಂಜುಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮ್ಮಣ್ಣಿ ಹಾಗೂ ಇನ್ನಿತರಿದ್ದರು.ಕೋಟ್.....
ಬಿರಿಯಾನಿ ಊಟ ಇದೆ ಎಂದು ಅಧಿಕಾರಿಗಳು ತಪ್ಪಿಸಿಕೊಂಡು ಹೋಗಬೇಡಿ, ಶುದ್ಧ ಸಸ್ಯಹಾರಿ ಆಹಾರವಿದ್ದು, ಊಟಕ್ಕಾಗಿ ನನ್ನ ಜೊತೆ ಬನ್ನಿ, ಬಳಿಕ ತಿಮ್ಮರಾಜಿಪುರ ಸಭೆಯಲ್ಲಿ ಭಾಗವಹಿಸೋಣ
----
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಪಂನಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು.