ಸಂಪುಟ ವಿಸ್ತರಣೆ: 5ಕ್ಕೆ ಸಿಎಂ ಡಿಕೆ, ಸಿದ್ದು ದಿಲ್ಲಿಗೆ - ಸಂಭಾವ್ಯರು ಯಾರ್‍ಯಾರು?

Published : Jul 03, 2026, 06:41 AM IST
DK Shivakumar Siddaramaiah Rahul Gandhi Mallikarjun Kharge

ಸಾರಾಂಶ

ರಾಹುಲ್‌ ಗಾಂಧಿ ವಿದೇಶ ಪ್ರವಾಸದಿಂದ ಶೀಘ್ರ ವಾಪಸಾಗಲಿರುವ ಹಿನ್ನೆಲೆ ರಾಜ್ಯ  ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನೊಂದಿಗೆ ಚಚಿರ್ಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಕಾರ್ಯಕಾರಿ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.5ರಂದು ದೆಹಲಿಗೆ ತೆರಳುವ ಸಾಧ್ಯತೆ 

  ಬೆಂಗಳೂರು :  ರಾಹುಲ್‌ ಗಾಂಧಿ ಅವರು ವಿದೇಶ ಪ್ರವಾಸದಿಂದ ಶೀಘ್ರ ವಾಪಸಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನೊಂದಿಗೆ ಚಚಿರ್ಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಕಾರ್ಯಕಾರಿ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.5ರಂದು ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಮಾಹಿತಿ ಪ್ರಕಾರ ಜು.5ರಂದು ರಾಹುಲ್‌ ಗಾಂಧಿ ಅವರು ವಿದೇಶದಿಂದ ದೆಹಲಿಗೆ ವಾಪಸಾಗಲಿದ್ದಾರೆ. ಅಂದೇ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರೂ ನಾಯಕರು ಜಿಲ್ಲಾವಾರು, ಸಮುದಾಯವಾರು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಜು.6 ಮತ್ತು 7ರಂದು ದೆಹಲಿಯಲ್ಲೇ ಇದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜು.10ರಿಂದ 12ರೊಳಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದೇ ವೇಳೆ, ಜು.22ರಂದು ಅವಧಿ ಪೂರ್ಣಗೊಳ್ಳಲಿರುವ ವಿಧಾನ ಪರಿಷತ್‌ನ ಐವರು ನಾಮನಿರ್ದೇಶಿತ ಸದಸ್ಯರ ಸ್ಥಾನಗಳಿಗೆ ಹೊಸದಾಗಿ ಯಾರನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಬೇಕೆಂಬ ಬಗ್ಗೆಯೂ ಇಬ್ಬರೂ ನಾಯಕರು ಹೈಕಮಾಂಡ್‌ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.

ಸಂಭಾವ್ಯರು ಯಾರ್‍ಯಾರು?:

ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮಣ ಸವದಿ ಹೆಸರು ಕೇಳಿಬಂದಿದೆ. ಹುಬ್ಬಳ್ಳಿ-ಧಾರವಾಡದಿಂದ ಶಾಸಕರಾದ ಪ್ರಸಾದ್‌ ಅಬ್ಬಯ್ಯ, ಕಲ್ಯಾಣ ಕರ್ನಾಟಕ ಭಾಗದ ಮುಸ್ಲಿಂ ಪ್ರಾತಿನಿಧ್ಯದ ಹೆಸರಿನಲ್ಲಿ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ಅವರ ಹೆಸರಿದೆ.

ಬಾಗಲಕೋಟೆಯಿಂದ ಯಶವಂತರಾಯ ಪಾಟೀಲ-ಅಪ್ಪಾಜಿ ನಾಡಗೌಡ, ಬಳ್ಳಾರಿಯಿಂದ ನಾಗೇಂದ್ರ, ಕೊಪ್ಪಳದಿಂದ ಬಸವರಾಜ ರಾಯರೆಡ್ಡಿ, ಚಿತ್ರದುರ್ಗದಿಂದ ರಘುಮೂರ್ತಿ, ದಾವಣಗೆರೆಯಿಂದ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌/ಡಿ.ಜಿ.ಶಾಂತನಗೌಡ, ತುಮಕೂರಿನಿಂದ ಶ್ರೀನಿವಾಸ್‌(ವಾಸು), ಹಾಸನದಿಂದ ಶಿವಲಿಂಗೇಗೌಡ, ಮಂಡ್ಯ ಚಲುವರಾಯಸ್ವಾಮಿ, ಚಾಮರಾಜನಗರ ಪುಟ್ಟರಂಗಶೆಟ್ಟಿ, ಬೆಂಗಳೂರು ನಗರದಿಂದ ಮಾಜಿ ಸಚಿವ ಜಮೀರ್‌ ಅಹಮದ್‌/ರಿಜ್ವಾನ್‌ ಅರ್ಷದ್‌, ಲೇಔಟ್ ಕೃಷ್ಣಪ್ಪ, ಕೋಲಾರ ಶರತ್‌ ಬಚ್ಚೇಗೌಡ/ಸುಬ್ಬಾರೆಡ್ಡಿ, ಶಿವಮೊಗ್ಗದಿಂದ ಬೇಳೂರು ಗೋಪಾಲಕೃಷ್ಣ, ಉತ್ತರ ಕನ್ನಡದಿಂದ ಆರ್‌.ವಿ.ದೇಶಪಾಂಡೆ/ಮಾಂಕಾಳವೈದ್ಯ, ಹಾವೇರಿಯಿಂದ ರುದ್ರಪ್ಪ ಲಮಾಣಿ ಹೆಸರುಗಳು ಸಂಭಾವ್ಯ ಸಚಿವರ ಪಟ್ಟಿಯಲ್ಲಿವೆ ಎನ್ನಲಾಗಿದೆ.

ಜಿಲ್ಲಾವಾರು ಸಂಭಾವ್ಯ ಸಚಿವರು

ಬೆಳಗಾವಿ ಲಕ್ಷ್ಮಣ ಸವದಿ

ಹುಬ್ಬಳ್ಳಿ-ಧಾರವಾಡ ಪ್ರಸಾದ್‌ ಅಬ್ಬಯ್ಯ.

ಬಾಗಲಕೋಟೆ ಯಶವಂತರಾಯ ಪಾಟೀಲ-ಅಪ್ಪಾಜಿ ನಾಡಗೌಡ

ಕ. ಕರ್ನಾಟಕ ಭಾಗದ ಮುಸ್ಲಿಂ ಪ್ರಾತಿನಿಧ್ಯ ಸಲೀಂ ಅಹ್ಮದ್

ಬಳ್ಳಾರಿ ನಾಗೇಂದ್ರ

ಕೊಪ್ಪಳ ಬಸವರಾಜ ರಾಯರೆಡ್ಡಿ

ಚಿತ್ರದುರ್ಗ ರಘುಮೂರ್ತಿ

ದಾವಣಗೆರೆ ಎಸ್‌.ಎಸ್‌.ಮಲ್ಲಿಕಾರ್ಜುನ್‌/ಡಿ.ಜಿ.ಶಾಂತನಗೌಡ

ತುಮಕೂರು ಶ್ರೀನಿವಾಸ್‌(ವಾಸು)

ಹಾಸನ ಶಿವಲಿಂಗೇಗೌಡ

ಮಂಡ್ಯ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ

ಚಾಮರಾಜನಗರ ಪುಟ್ಟರಂಗಶೆಟ್ಟಿ

ಬೆಂಗಳೂರು ನಗರ ಜಮೀರ್‌ ಅಹಮದ್‌/ರಿಜ್ವಾನ್‌ ಅರ್ಷದ್‌- ಲೇಔಟ್ ಕೃಷ್ಣಪ್ಪ

ಕೋಲಾರ ಶರತ್‌ ಬಚ್ಚೇಗೌಡ/ಸುಬ್ಬಾರೆಡ್ಡಿ

ಶಿವಮೊಗ್ಗ ಬೇಳೂರು ಗೋಪಾಲಕೃಷ್ಣ

ಚಿಕ್ಕಮಗಳೂರು ತರೀಕೆರೆ ಶ್ರೀನಿವಾಸ್‌

ಉತ್ತರ ಕನ್ನಡ ಮಾಂಕಾಳವೈದ್ಯ/ಆರ್‌.ವಿ.ದೇಶಪಾಂಡೆ

ಹಾವೇರಿ ರುದ್ರಪ್ಪ ಲಮಾಣಿ 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜನರನ್ನು ಕಲ್ಯಾಣಮಂಟಪದಲ್ಲಿ ಕೂರಿಸಿ ರಾಮನಗರದಲ್ಲಿ ಎಸ್‌ಐಆರ್‌ : ಎಚ್‌ಡಿಕೆ
ತೀರ್ಥಹಳ್ಳಿ, ಕುಣಿಗಲ್‌ನಲ್ಲಿ ಎಸ್‌ಐಆರ್‌ ಅಕ್ರಮ?