ಕನ್ನಡಪ್ರಭ ವಾರ್ತೆ ಕೋಲಾರ
ಮುಳಬಾಗಿಲು ತಾಲ್ಲೂಕಿನ ನಂಗಲಿ ಮತ್ತು ಗುಡಿಪಲ್ಲಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೊಟ್ಟಿದ್ದೇವೆ, ರಾಜ್ಯದ ಜನ ಗ್ಯಾರಂಟಿಗೆ ಮರಳಾಗಿದ್ದಾರೆ, ಇನ್ನು ನಮ್ಮನ್ನು ಸೋಲಿಸುವವರು ಯಾರು ಅನ್ನೋ ಅಹಂಕಾರದಲ್ಲಿ ತೇಲಾಡುತ್ತಿದ್ದ ಕಾಂಗ್ರೆಸ್ಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಿಡಿಲು ಬಡಿದಂತಾಗಿದೆ ಎಂದರು.
ಗ್ಯಾರಂಟಿಗೆ ಜನತೆ ಬೇಸರಕಾಂಗ್ರೆಸ್ ಗ್ಯಾರಂಟಿಗಳಿಂದ ಜನ ಬೇಸತ್ತಿದ್ದಾರೆ, ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಕೇಂದ್ರ ಸರ್ಕಾರ ಕೊಡುತ್ತಿರುವ ಐದು ಕೆ.ಜಿ ಅಕ್ಕಿನ್ನು ಮಾತ್ರ ನೀಡುತ್ತಿದ್ದಾರೆ. ೨೦೦ ಯೂನಿಟ್ ವಿದ್ಯುತ್ ಉಚಿತ ಕೊಡ್ತೀವಿ ಅಂತೇಳಿ ವಿದ್ಯುತ್ ದರ ಹೆಚ್ಚು ಮಾಡಿ ಕಂಡೀಷನ್ ಹಾಕಿ ವಿದ್ಯುತ್ ಯುನಿಟ್ ಗಳನ್ನು ನಿಗದಿಪಡಿಸಿ ಜನರನ್ನು ಯಾಮಾರಿಸುತ್ತಿದ್ದಾರೆ ಎಂದರು.ಯುವ ನಿಧಿ ಕೊಡುತ್ತೇವೆ ಅಂತೇಳಿ ಯಾವೊಬ್ಬ ವಿದ್ಯಾವಂತ ನಿರುದ್ಯೋಗಿಗೂ ಒಂದು ರುಪಾಯಿಯೂ ಯುವ ನಿಧಿ ಬಂದಿಲ್ಲ, ಗೃಹ ಲಕ್ಷ್ಮಿ ಹೆಸರಲ್ಲಿ ಅರ್ಧ ಜನರಿಗೆ ಕೊಟ್ಟು ಇನ್ನುಳಿದ ಅರ್ಧ ಜನರ ಹಣವನ್ನು ಸರ್ಕಾರ ತಿಂದು ತೇಗುತ್ತಿದೆ ಎಂದರು.ಅಭಿವೃದ್ಧಿ ಕಾರ್ಯಗಳು ಸ್ಥಗಿತ
ಶಾಸಕ ಸಮೃದ್ದಿ ಮಂಜುನಾಥ್ ಮಾತನಾಡಿ, ಕೋಲಾರದಲ್ಲಿ ಕಾಂಗ್ರೆಸ್ನವರು ಎಡಗೈ, ಬಲಗೈ ಎಂದು ದಲಿತರ ವಿರುದ್ದ ದಲಿತರನ್ನೇ ಎತ್ತಿಕಟ್ಟಿ ಮತಬ್ಯಾಂಕ್ ಗಾಗಿ ದಲಿತರನ್ನು ಒಡೆದು ಆಳುತ್ತಿದ್ದಾರೆ, ಬಲಗೈ ಜನಾಂಗಕ್ಕೆ ಟಿಕೆಟ್ ಕೊಡಿಸುತ್ತೇವೆ ಎಂದು ರಾಜೀನಾಮೆಗೆ ಮುಂದಾದ ಕೋಲಾರ ಕಾಂಗ್ರೆಸ್ ನಾಯಕರೇ ಯಾಕೆ ಬಲಗೈ ಜನಾಂಗಕ್ಕೆ ಟಿಕೆಟ್ ಕೊಡಿಸಲಿಲ್ಲ. ಬಲಗೈ ಜನಾಂಗಕ್ಕೆ ನೀವು ಮಾಡಿದ ಅಪಮಾನಕ್ಕೆ ಜಿಲ್ಲೆಯ ಜನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಎನ್ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಮೋದಿ ಮಾಡಿರುವ ಅಭಿವೃದ್ದಿ ಕಾರ್ಯಗಳೇ ನಮಗೆ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿವೆ, ಇದು ದೇಶದ ಚುನಾವಣೆ, ಭಾರತ ದೇಶ ವಿಶ್ವಮಟ್ಟದಲ್ಲಿ ಇನ್ನಷ್ಟು ಅಭಿವೃದ್ದಿಯಾಗಬೇಕಾದರೆ ಮೂರನೇ ಭಾರಿಯೂ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಬೇಕು ಎಂದರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕಣದಲ್ಲಿರುವುದರಿಂದ ಎಲ್ಲರೂ ನನಗೆ ಆಶೀರ್ವಾದ ಮಾಡಿದರೆ ಮೋದಿರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡೋಣ ಎಂದು ಮನವಿ ಮಾಡಿದರು.