ರೈತರಿಗೆ ಕೂಡಲೇ ಪರಿಹಾರ ನೀಡಿ : ರಾಮ ಚಂದ್ರ ಗೌಡ

KannadaprabhaNewsNetwork |  
Published : Apr 28, 2024, 01:16 AM ISTUpdated : Apr 28, 2024, 04:45 AM IST
ಚಿತ್ರ ಸೀಕಲ್‌ ರಾಮ ಚಂದ್ರ ಗೌಡ  | Kannada Prabha

ಸಾರಾಂಶ

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಬರ ಪರಿಹಾರವಾಗಲಿ ಅಥವಾ ಇನ್ನಾವುದೆ ಪರಿಹಾರವನ್ನು ವಿತರಿಸಲು ಒಂದು ನೀತಿ ನಿಯಮ ಇದೆ. ಮನಸ್ಸಿಗೆ ಬಂದಂತೆ ನೀಡಲು ಆಗುವುದಿಲ್ಲ.

 ಶಿಡ್ಲಘಟ್ಟ :  ಕೇಂದ್ರ ಸರಕಾರವು ಬರ ಪರಿಹಾರದ ಹಣ ಬಿಡುಗಡೆ ಮಾಡಿದ್ದು ರಾಜ್ಯ ಸರಕಾರವು ಕೇಂದ್ರದ ವಿರುದ್ದ ದೂರುತ್ತಾ ಕೂರದೆ ಕೂಡಲೇ ರೈತರಿಗೆ ಪರಿಹಾರದ ಹಣ ನೀಡುವ ಕೆಲಸ ಮಾಡಬೇಕೆಂದು ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಬರ ಪರಿಹಾರವಾಗಲಿ ಅಥವಾ ಇನ್ನಾವುದೆ ಪರಿಹಾರವನ್ನು ವಿತರಿಸಲು ಒಂದು ನೀತಿ ನಿಯಮ ಇದೆ. ಮನಸ್ಸಿಗೆ ಬಂದಂತೆ ನೀಡಲು ಆಗುವುದಿಲ್ಲ. ಅದಕ್ಕೆಂದೆ ಇರುವ ಸಮಿತಿಯ ನಿರ್ಧಾರಂತೆ ಪರಿಹಾರದ ಮೊತ್ತ ನಿಗದಿಪಡಿಸಿದೆ ಎಂದರು.ಕೇಂದ್ರದಿಂದ ಹಣ ಬಿಡುಗಡೆ

ಅದರಂತೆ ಇದೀಗ ಹಣ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರವು ಬರ ಪರಿಹಾರದ ಹಣ ಸಾಲದು, ತಡವಾಗಿ ಬಿಡುಗಡೆ ಮಾಡಿದೆ ಎಂದು ಕೇಂದ್ರದತ್ತ ಬೊಟ್ಟು ಮಾಡಿ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆಪಾದಿಸಿದರು.ರೈತರ ವಿಷಯ ಬಂದಾಗ ಯಾರೂ ಕೂಡ ರಾಜಕಾರಣ ಮಾಡುವುದು ಬೇಡ, ತಾಂತ್ರಿಕ ಕಾರಣಗಳಿಂದ ಬರ ಪರಿಹಾರ ಹಣ ತಡವಾಗಿ ಬಂದಿದ್ದು ಇನ್ನೂ ತಡ ಮಾಡದೆ ರೈತರ ಖಾತೆಗೆ ಜಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು. 

ಅಲ್ಲದೆ ಕೋಲಾರ ಸಂಸತ್ ಚುನಾವಣೆ ಮುಗಿದಿದೆ. ಎಲ್ಲ ಮತದಾರರು ಮತ ಹಾಕಿದ್ದಾಗಿದೆ. ಹೆಚ್ಚು ಮತ ಪಡೆದ ಅಭ್ಯರ್ಥಿ ಗೆಲ್ಲುತ್ತಾರೆ. ರಾಜಕಾರಣದಲ್ಲಿ ಸೋಲು ಗೆಲುವು ಇದ್ದೇ ಇದೆ. ಇಲ್ಲಿಗೆ ಚುನಾವಣೆ, ಆ ಪಕ್ಷ ಈ ಪಕ್ಷದ ಮಾತುಗಳನ್ನು ಬಿಟ್ಟು ಎಲ್ಲರೂ ಸಾಮರಸ್ಯವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗೋಣ.

ಚುನಾವಣೆ ಕಾಲದಲ್ಲಿ ಮಾತ್ರ ರಾಜಕಾರಣ ಮಾಡೋಣ ಉಳಿದಂತೆ ಬದುಕು ಕಟ್ಟಿಕೊಳ್ಳುವ ಕೆಲಸದಲ್ಲಿ ತೊಡಗೋಣ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು