ಕನ್ನಡಪ್ರಭ ವಾರ್ತೆ ಮಂಡ್ಯ
ಜೆಡಿಎಸ್ ಈ ಹಿಂದೆ ಕಾಂಗ್ರೆಸ್ನೊಂದಿಗೆ ಧರ್ಮಸಿಂಗ್ ಜೊತೆ ನಂತರ ಬಿಜೆಪಿಯ ಯಡಿಯೂರಪ್ಪನವರ ಜೊತೆ ಇದ್ದು ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈತ್ರಿ ಧರ್ಮವನ್ನು ರಾಷ್ಟ್ರದಲ್ಲಿ ಎಲ್ಲರಿಗಿಂತ ಬಹಳ ಚೆನ್ನಾಗಿ ನಡೆಸೋದು ಜೆಡಿಎಸ್ ಮಾತ್ರ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಜೆಡಿಎಸ್ನವರಿಗೆ ಒಳ್ಳೆಯದಾಗಲಿ. ೫೦-೫೦, ೪೦-೫೦, ೩೦-೭೦ ಯಾವ ರೀತಿಯಲ್ಲಿ ಮೈತ್ರಿಯಾದರೂ ನಮಗೆ ಸಂತೋಷ. ಆ ವಿಚಾರವಾಗಿ ನಮಗೆ ಯಾವುದೇ ದ್ವೇಷ ಇಲ್ಲ. ಜೆಡಿಎಸ್ನವರು ನಮ್ಮ ಹಳೆಯ ಸ್ನೇಹಿತರು. ಬಿಜೆಪಿಯವರು ಈಗ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂದರೆ ಖುಷಿಪಡುತ್ತೇವೆ ಎಂದು ನುಡಿದರು.ಸುರೇಶ್ಗೌಡ ವಿರುದ್ಧ ಗೆಲ್ಲೋಕೆ ಆಗುತ್ತಾ?
ಬಹುಶಃ ಇವತ್ತು ಜೆಡಿಎಸ್ಗೆ ಬಹಳ ಪ್ರಬಲವಾದ ಅಭ್ಯರ್ಥಿ ಎಂದರೆ ಸುರೇಶ್ಗೌಡ. ಅವರೇ ಅಭ್ಯರ್ಥಿಯಾದರೆ ನಾವು ಏನು ಮಾಡೋದು ಎಂದು ಯೋಚಿಸುತ್ತಿದ್ದೇವೆ. ಇನ್ನು ನಾವು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಬೇರೆ ಯಾರಾದರೂ ಆಗಿದ್ದರೆ ಸುಲಭವಾಗಿ ಅಭ್ಯರ್ಥಿಯನ್ನು ಘೋಷಿಸಬಹುದಿತ್ತು. ಸುರೇಶ್ಗೌಡ ಸ್ಪರ್ಧೆಗಿಳಿದರೆ ನಮಗೆ ಅಭ್ಯರ್ಥಿ ಹುಡುಕುವುದೇ ಕಷ್ಟವಾಗುತ್ತದೆ ಎಂದು ಸುರೇಶ್ಗೌಡರ ವಿರುದ್ಧ ನಯವಾಗಿಯೇ ವಾಗ್ದಾಳಿ ನಡೆಸಿದರು.