ಮುಡಾ ನಿವೇಶನ ಹಂಚಿಕೆಯ ಹಗರಣ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ಗೆ ಒಂದು ಕಪ್ಪು ಚುಕ್ಕೆ. ಎಫ್ಐಆರ್ ದಾಖಲಾಗಿ ಲೋಕಾಯುಕ್ತ ವಿಚಾರಣೆ ನಡೆದರೂ ರಾಜೀನಾಮೆ ಕೊಡದಿರುವುದು ಸಿಎಂ ಸಿದ್ದರಾಮಯ್ಯ ಭಂಡತನಕ್ಕೆ ಹಿಡಿದ ಕನ್ನಡಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಕಲಬುರಗಿ: ಮುಡಾ ನಿವೇಶನ ಹಂಚಿಕೆಯ ಹಗರಣ ರಾಜ್ಯಕ್ಕೆ ಹಾಗೂ ಕಾಂಗ್ರೆಸ್ಗೆ ಒಂದು ಕಪ್ಪು ಚುಕ್ಕೆ. ಎಫ್ಐಆರ್ ದಾಖಲಾಗಿ ಲೋಕಾಯುಕ್ತ ವಿಚಾರಣೆ ನಡೆದರೂ ರಾಜೀನಾಮೆ ಕೊಡದಿರುವುದು ಸಿಎಂ ಸಿದ್ದರಾಮಯ್ಯ ಭಂಡತನಕ್ಕೆ ಹಿಡಿದ ಕನ್ನಡಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಮೇಲೆಯೇ ಮುಡಾ ಹಗರಣದ ಆರೋಪಗಳಿವೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಲೋಕಾಯುಕ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರೋದು ರಾಜ್ಯದ ಇತಿಹಾಸದಲ್ಲೇ ಮೊದಲು. ಇದು ರಾಜ್ಯಕ್ಕೆ ಕಪ್ಪು ಮಸಿ ಬಳಿದಂತೆ ಆಗಿದ್ದು, ಆರೋಪ ಕೇಳಿ ಬಂದ ತಕ್ಷಣ ರಾಜೀನಾಮೆ ಬಿಸಾಕಿ ವಿಚಾರಣೆ ಎದುರಿಸೋದು ಬಿಟ್ಟು ಸಿಎಂ ಸ್ಥಾನದಲ್ಲಿದ್ದೇ ವಿಚಾರಣೆ ಎದುರಿಸುತ್ತಿರುವುದು ಸಿದ್ದರಾಮಯ್ಯನವರ ಭಂಡತನಕ್ಕೆಕನ್ನಡಿ ಹಿಡಿದಂತಿದೆ ಎಂದರು.
ತಮ್ಮ ಮೇಲೆ ಕೇಸ್ ಬಿದ್ದಾಗ ಕಾಂಗ್ರೆಸ್ನ ಯಾವ ಮುಖಂಡರೂ ರಾಜೀನಾಮೆಗೆ ಎಂದೂ ತಯಾರಾಗಿಲ್ಲ. ಈ ಹಿಂದೆ ನನ್ನ ಮೇಲೆ ಕೇಸ್ ಬಂದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ಕೇಸ್ ಅವರ ಮೇಲಿದ್ದರೂ ರಾಜೀನಾಮೆ ಕೊಡದೆ ಭಂಡತನ ತೋರುತ್ತಿದ್ದಾರೆ. ಇದು ಯಾವ ಲೆಕ್ಕ? ಎಂದು ಪ್ರಶ್ನಿಸಿದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.