ಕನ್ನಡಪ್ರಭವಾರ್ತೆ ಬೆಂಗಳೂರು
ಈ ಮೂಲಕ ದೇಶದ ಆರ್ಥಿಕ ಪ್ರಗತಿಯಲ್ಲಿ ಕೇವಲ ಮುಂಬೈ, ದೆಹಲಿ, ಬೆಂಗಳೂರಿನಂತಹ ಮೆಟ್ರೋ ನಗರಗಳು ಮಾತ್ರವಲ್ಲದೆ, ದ್ವಿತೀಯ ಮತ್ತು ತೃತೀಯ ಹಂತದ ನಗರಗಳೂ ಪ್ರಮುಖ ಪಾತ್ರ ವಹಿಸುತ್ತಿವೆ.
ಪ್ರಸ್ತುತ ಮೊರಾದಾಬಾದ್ ನ ಲೋಹದ ಪಾತ್ರೆಗಳ ಉದ್ಯಮ, ಸೂರತ್ ನ ಜವಳಿ ಉದ್ಯಮ ಹಾಗೂ ಕೊಯಮತ್ತೂರಿನ ಉತ್ಪಾದನಾ ವಲಯಗಳು ದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಮಾರ್ಪಡುತ್ತಿವೆ. ದೇಶದಲ್ಲಿ ಸದ್ಯ ಸುಮಾರು 6 ಕೋಟಿ ಎಂಎಸ್ಎಂಇಗಳಿದ್ದು, ಇವು ಭಾರತದ ಒಟ್ಟು ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುವ ಮೂಲಕ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿವೆ. ಅದರಲ್ಲೂ ವಿಶೇಷವಾಗಿ, ಮುಂದಿನ 2030ರ ವೇಳೆಗೆ ಭಾರತದ ಇ-ಕಾಮರ್ಸ್ ಮಾರುಕಟ್ಟೆಯು ಸುಮಾರು 345 ಬಿಲಿಯನ್ ಡಾಲರ್ ತಲುಪುವ ಅಂದಾಜಿದ್ದು, ಇದಕ್ಕೆ ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ಗ್ರಾಹಕರೇ ಪ್ರಮುಖ ಕಾರಣವಾಗಲಿದ್ದಾರೆ.ಮೆಟ್ರೋ ಆಚೆಗಿನ ನಗರಗಳಲ್ಲಿ ಉದ್ಯಮಶೀಲತೆಯ ಹೊಸ ಅಲೆದೇಶದ ಮಹಾನಗರಗಳ ಆಚೆಗಿನ ಸಣ್ಣ ಸಣ್ಣ ಪಟ್ಟಣಗಳಲ್ಲಿ ಉದ್ಯಮಶೀಲತೆ ಮತ್ತು ವ್ಯಾಪಾರ ಜಾಲಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಜಗತ್ತಿನ ಅತ್ಯಂತ ಬಲಿಷ್ಠ ಜವಳಿ ಮತ್ತು ವಜ್ರ ಸಂಸ್ಕರಣಾ ಉದ್ಯಮವನ್ನು ಹೊಂದಿರುವ ಸೂರತ್ ಹಾಗೂ ಪ್ರಿಸಿಷನ್ ಇಂಜಿನಿಯರಿಂಗ್ ಹಬ್ ಆಗಿ ಗುರುತಿಸಿಕೊಂಡಿರುವ ಕೊಯಮತ್ತೂರು ನಗರಗಳು ದಶಕಗಳ ಕಾಲ ಜಾಗತಿಕ ಮಟ್ಟದಲ್ಲಿ ತೆರೆಮರೆಯಲ್ಲೇ ಉಳಿದಿದ್ದವು. ಅಂತೆಯೇ, ಜೈಪುರದ ಕುಶಲಕರ್ಮಿಗಳು ತಯಾರಿಸುವ ಅದ್ಭುತ ಕರಕುಶಲ ವಸ್ತುಗಳು ದೆಹಲ ತಲುಪುವ ಮುನ್ನವೇ ವಿದೇಶಿ ಮಾರುಕಟ್ಟೆಗಳಲ್ಲಿ ಸದ್ದು ಮಾಡುತ್ತಿದ್ದವು.
ಕೇವಲ ಗ್ರಾಹಕರ ಬೇಡಿಕೆ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಸಣ್ಣ ನಗರಗಳ ಉದ್ಯಮಿಗಳ ಆಲೋಚನಾ ಶೈಲಿಯೂ ಡಿಜಿಟಲ್ ಮಯವಾಗಿದೆ. ಸಮಾನ ಅವಕಾಶ ಕಲ್ಪಿಸಿದ ಡಿಜಿಟಲ್ ಮೂಲಸೌಕರ್ಯ:
ಈ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ದಿನನಿತ್ಯದ ಸಾಂಪ್ರದಾಯಿಕ ಕೆಲಸಗಳಿಗೆ ತಗಲುತ್ತಿದ್ದ ಸಮಯವು ಶೇ.70 ರಷ್ಟು ಉಳಿತಾಯವಾಗುತ್ತಿದ್ದು, ಉತ್ಪನ್ನಗಳು ಆನ್ ಲೈನ್ ನಲ್ಲಿ ಗ್ರಾಹಕರಿಗೆ ಸುಲಭವಾಗಿ ಹುಡುಕಲು ಸಿಗುವಂತಾಗಿದೆ. ವಿಸ್ತಾರವಾದ ವಿತರಣಾ ಸೌಲಭ್ಯಗಳ ಕಾರಣದಿಂದಾಗಿ, ಲಕ್ನೋದ ಒಬ್ಬ ಉದ್ಯಮಿ ಹೈದರಾಬಾದ್ನ ಗ್ರಾಹಕನಿಗೆ ಕೇವಲ ಎರಡು ದಿನಗಳಲ್ಲಿ ಆರ್ಡರ್ ತಲುಪಿಸುವ ಭರವಸೆ ನೀಡಿ ಅದನ್ನು ಈಡೇರಿಸಲು ಸಾಧ್ಯವಾಗುತ್ತಿದೆ. ಇದರೊಂದಿಗೆ ಹೊಸ ಮಾರಾಟಗಾರರಿಗೆ ನೀಡಲಾಗುವ ವಿಶೇಷ ರಿವಾರ್ಡ್ ಪ್ರೋಗ್ರಾಂಗಳು ಮತ್ತು ರೂ.1000 ಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳ ಮೇಲಿನ ಶೂನ್ಯ ರೆಫರಲ್ ಶುಲ್ಕದಂತಹ ಸರಳೀಕೃತ ನಿಯಮಗಳು ಸಣ್ಣ ಉದ್ಯಮಗಳು ಯಾವುದೇ ಆತಂಕವಿಲ್ಲದೆ ಇ-ಕಾಮರ್ಸ್ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜನ ನೀಡುತ್ತಿವೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಸಣ್ಣ ನಗರಗಳ ಉದ್ಯಮಿಗಳು ಅಮೆಜಾನ್ ವೇದಿಕೆಯಲ್ಲಿ ದೀರ್ಘಾವಧಿಯ ಯಶಸ್ವಿ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ.ಎಂಎಸ್ಎಂಇಗಳ ಬೆಳವಣಿಗೆಗೆ ಪೂರಕ ವ್ಯವಸ್ಥೆ:
ಸಣ್ಣ ಉದ್ಯಮಗಳಿಗೆ ಸಾಲದ ಸೌಲಭ್ಯ ಒದಗಿಸುವುದು, ಸ್ಟಾರ್ಟ್-ಅಪ್ ಧನಸಹಾಯ ಮತ್ತು ಡಿಜಿಟಲ್ ಮಾರುಕಟ್ಟೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಎನ್ಡಿಸಿ ಮತ್ತು ಜೆಮ್ ನಂತಹ ಸರ್ಕಾರದ ಪ್ರಮುಖ ಯೋಜನೆಗಳು ಈಗಾಗಲೇ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿವೆ. ಇದೇ ವೇಳೆ, ಸರಬರಾಜು ಜಾಲ, ಗೋದಾಮು ನಿರ್ವಹಣೆ, ಡೆಲಿವರಿ ಪರಿಹಾರಗಳು, ಡಿಜಿಟಲ್ ಕೌಶಲ್ಯಗಳು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಯು ಉದ್ಯಮಗಳು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಮುಖ ಪಾತ್ರ ವಹಿಸುತ್ತಿವೆ. ಆನ್ ಲೈನ್ ಮಾರುಕಟ್ಟೆಯನ್ನು ಬಳಸುವ ಮಾರಾಟಗಾರರಿಗೆ ಇನ್ವೆಂಟರಿ ನಿರ್ವಹಣೆ, ಆರ್ಡರ್ ಪ್ರಕ್ರಿಯೆ ಮತ್ತು ದೇಶಾದ್ಯಂತ ವಿತರಣೆಯನ್ನು ಸರಳಗೊಳಿಸಲು ಕಾರ್ಯಾಚರಣೆಯ ಬೆಂಬಲ ಸೇವೆಗಳು ನೆರವಾಗುತ್ತಿವೆ. ದೊಡ್ಡ ಮಟ್ಟದ ಆರಂಭಿಕ ಬಂಡವಾಳ ಹೂಡಿಕೆ ಇಲ್ಲದೆಯೇ ವಿವಿಧ ಪ್ರದೇಶಗಳ ಗ್ರಾಹಕರಿಗೆ ಸೇವೆ ನೀಡಲು ಬಯಸುವ ಉದ್ಯಮಗಳಿಗೆ ಈ ವ್ಯವಸ್ಥೆಗಳು ಅತ್ಯಂತ ಉಪಯುಕ್ತವಾಗಿವೆ. ಇಂತಹ ಬೆಂಬಲದ ಪ್ರಭಾವವು ಇಂದು ದೇಶದ ಹಲವು ಉದಯೋನ್ಮುಖ ಬ್ರ್ಯಾಂಡ್ ಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಲಾಜಿಸ್ಟಿಕ್ಸ್ ಸೌಲಭ್ಯಗಳಿಂದಾಗಿ ತಾವು ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಗ್ರಾಹಕರ ತೃಪ್ತಿ ಮತ್ತು ಬ್ರ್ಯಾಂಡ್ ನಿರ್ಮಾಣದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ ಎಂದು ಹಲವು ಉದ್ಯಮಿಗಳು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.ಭಾರತದ ಪ್ರತಿಯೊಂದು ಹೊಸ ಪಿನ್-ಕೋಡ್ಗಳ ಸಬಲೀಕರಣ:
ಇದನ್ನು ಸಾಕಾರಗೊಳಿಸಲು ಅಗತ್ಯವಿರುವ ಭದ್ರವಾದ ಮೂಲಸೌಕರ್ಯಗಳು ಇಂದು ದೇಶದಲ್ಲಿ ಲಭ್ಯವಿವೆ. ಏಕೆಂದರೆ ಭಾರತದ ಮುಂದಿನ ಆರ್ಥಿಕ ಸ್ಥಿತ್ಯಂತರವು ಕೇವಲ ಬೆಂಗಳೂರು, ಮುಂಬೈ ಅಥವಾ ಗುರಗಾಂವ್ನಂತಹ ಮಹಾನಗರಗಳಲ್ಲಿ ಮಾತ್ರ ನಿರ್ಮಾಣವಾಗುತ್ತಿಲ್ಲ. ಬದಲಿಗೆ ಮೊರಾದಾಬಾದ್, ಸೂರತ್, ಕೊಯಮತ್ತೂರು, ರಾಜ್ಕೋಟ್, ಕಾನ್ಪುರ ಮತ್ತು ಒಂದು ಕಾಲದಲ್ಲಿ ಅತ್ಯಂತ ಸಣ್ಣ ಉದ್ಯಮ ಕೇಂದ್ರಗಳೆಂದು ಪರಿಗಣಿಸಲ್ಪಟ್ಟಿದ್ದ ದೇಶದ ಸಾವಿರಾರು ಪಿನ್-ಕೋಡ್ಗಳ ವ್ಯಾಪ್ತಿಯಲ್ಲಿ ಈ ಕ್ರಾಂತಿ ಸದ್ದಿಲ್ಲದೆ ನಡೆಯುತ್ತಿದೆ.